ಕನ್ನಡ ಕಟ್ಟುವವರಿಗೆ ಸದಾ ಬೆಂಬಲ: ಈಶ್ವರ ಖಂಡ್ರೆ
Team Udayavani, Nov 16, 2021, 4:21 PM IST
ಭಾಲ್ಕಿ; ಜಿಲ್ಲೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಕನ್ನಡ ಉಳಿಸಿ-ಬೆಳೆಸುವವರಿಗೆ ಸದಾ ಬೆಂಬಲಿಸುವುದಾಗಿ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ, ಜಿಲ್ಲಾ ಕಸಾಪ ಸ್ಥಾನದ ಅಭ್ಯರ್ಥಿ ಸುರೇಶ್ ಚನಶೆಟ್ಟಿ ಅವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸುರೇಶ್ ಚನಶೆಟ್ಟಿ ತಮ್ಮ ಅಧಿ ಕಾರವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡದ ಚಟುವಟಿಕೆಗಳಿಗೆ ಚುರುಕು ಮುಟ್ಟಿಸಿದ್ದಾರೆ. ತಾಲೂಕು, ಜಿಲ್ಲಾಮಟ್ಟದ ಸಮ್ಮೇಳನ, ಪುಸ್ತಕ ಪ್ರಕಟಣೆ, ಸಾಹಿತಿಗಳಿಗೆ ಪ್ರೋತ್ಸಾಹ, ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ಸೇರಿ ಹಲವು ಅತ್ಯುತ್ತಮ ಕಾರ್ಯ ಮಾಡಿದ್ದಾರೆ ಎಂದ ಅವರು, ಚುನಾವಣೆಯಲ್ಲಿ ಕನ್ನಡದ ಸೇವೆ ಮಾಡುವವರಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕಸಾಪದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ್ ಚನಶೆಟ್ಟಿ ಮಾತನಾಡಿ, ನ.21ರಂದು ನಡೆಯಲಿರುವ ಕಸಾಪದ ಚುನಾವಣೆ ಯಲ್ಲಿ ಮತ್ತೂಂದು ಅವ ಧಿಗೆ ಆಶೀರ್ವದಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ತಾಲೂಕು ಕಸಾಪದ ಹಾಲಿ ಅಧ್ಯಕ್ಷ ಶಶಿಧರ ಕೋಸಂಬೆ, ಕಾಶಿನಾಥ ಲದ್ದೆ, ಸಂಗಮೇಶ ಮದಕಟ್ಟಿ, ಸಂತೋಷ ಬಿಜಿ ಪಾಟೀಲ್, ಮಲ್ಲಿಕಾರ್ಜುನ ಹಲ್ಮಂಡಗೆ, ರಾಜಪ್ಪ ಪಾಟೀಲ್, ಸೂರ್ಯಕಾಂತ ಸುಂಟೆ, ರಾಜಕುಮಾರ ಬಿರಾದಾರ್, ಶರಣಪ್ಪ ಬಿರಾದಾರ್, ನಾಗಭೂಷಣ ಮಾಮಡಿ, ವಿಜಯಕುಮಾರ ಪರ್ಮಾ, ಅಶೋಕ ಕುಂಬಾರ, ಮಲ್ಲಿಕಾರ್ಜುನ ಪಾಟೀಲ್, ಸಂತೋಷ ವಾಡೆ, ಹಣಮಂತ ಕಾರಾಮುಂಗೆ, ಪ್ರಭು ಡಿಗ್ಗೆ, ಸಂಜು ಪ್ರಭಾ, ಬಸವರಾಜ ಬಲ್ಲೂರ, ಟಿ.ಎಂ. ಮಚ್ಚೆ, ರಮೇಶ ಬಿರಾದಾರ, ಮಹೇಶ ಮಂಗಲಗಿ, ಸುರೇಶ ಕುಡತೆ, ರವಿ ಬೋರವೆಲ್ಸ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ