Mantralayam; ಮಾ.11ರಿಂದ ಮಂತ್ರಾಲಯದಲ್ಲಿ ಗುರು ವೈಭವೋತ್ಸವ
Team Udayavani, Mar 4, 2024, 1:28 PM IST
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾ.11ರಿಂದ ಮಾ.16ರವರೆಗೆ ರಾಯರ ಪಟ್ಟಾಭಿಷೇಕ, ವರ್ಧತ್ಯುಂತ್ಸವ ಪ್ರಯುಕ್ತ ಗುರು ವೈಭವೋತ್ಸವ ಕಾರ್ಯಕ್ರಮ ಜರುಗಲಿದೆ.
ಮಾ.12ರಂದು ರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ ಜರುಗಲಿದೆ. ಮಾ.16ರಂದು ರಾಯರ 429ನೇ ವರ್ಧಂತ್ಯುತ್ಸವ ಜರುಗಲಿದೆ. ಈ ಪ್ರಯುಕ್ತ ಮಠದಲ್ಲಿ ಅನೇಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಠದ ಮುಂಭಾಗವಿರುವ ಯೋಗೀಂದ್ರ ಸಭಾ ಮಂಟಪದಲ್ಲಿ ಪ್ರತಿನಿತ್ಯ ಸಂಜೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ವಿವಿಧ ಸಾಧಕರಿಗೆ ಮಠದ ಪೀಠಾಧಪತಿ ಶ್ರೀ ಸುಬುಧೇಂದ್ರ ತೀರ್ಥರ ಹಸ್ತದಿಂದ ಗುರು ವೈಭವೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.