Raichur: ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥೆ
Team Udayavani, Oct 16, 2023, 8:52 PM IST
ರಾಯಚೂರು: ಮಾನಸಿಕ ಅಸ್ವಸ್ಥ ತಾಯಿ ತನ್ನ ಮಗಳನ್ನು ಸಾಯಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಸ್ಕಿ ತಾಲೂಕಿನ
ದೋತರಬಂಡಿ ಗ್ರಾಮದಲ್ಲಿ ಜರುಗಿದೆ.
ಶ್ರೀದೇವಿ (9) ಮೃತ ಬಾಲಕಿ. ಮಾನಸಿಕ ಅಸ್ವಸ್ಥೆ ಲಲಿತಮ್ಮ ತನ್ನ ಮಗಳನ್ನು ಮನೆ ಪಕ್ಕದ ನೀರಿನ ಸಂಪಿಗೆ ಎಸೆದು ನಂತರ ತಾನೂ ವಿಷ ಸೇವಿಸಿದ್ದಾಳೆ. ಆಕೆಯನ್ನು ಸಿಂಧನೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.