ಸಮ್ಮೇಳನ ಸದಸ್ಯತ್ವ : ರಾಯಚೂರು ಮುಂದು

ಆತಿಥ್ಯ ವಹಿಸಿದ ಕಲಬುರಗಿಯಲ್ಲಿ 2,050 ಸದಸ್ಯತ್ವ ತುಮಕೂರಲ್ಲಿ 1,500-ರಾಯಚೂರಲ್ಲಿ 1,400 ಸದಸ್ಯತ್ವ ನೋಂದಣಿ ದಕ್ಷಿಣ ಕನ್ನಡದಲ್ಲಿ 11 ಜನರ ಸದಸ್ಯತ್ವ

Team Udayavani, Feb 2, 2020, 12:10 PM IST

2-Febraury-7

ರಾಯಚೂರು: ಕಲಬುರಗಿಯಲ್ಲಿ ಫೆ.5ರಿಂದ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡ ಜನರಲ್ಲಿ ರಾಯಚೂರಿಗೆ ಎರಡನೇ ಸ್ಥಾನ. ಈ ಮೂಲಕ ಜಿಲ್ಲೆಯ ಜನರು ಸಾಹಿತ್ಯ ಪ್ರೇಮ ಮೆರೆದಿರುವುದು ವಿಶೇಷ.

ರಾಯಚೂರಿನಲ್ಲಿ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆಗ
ಇಲ್ಲಿ ನೆರೆದ ಜನಸ್ತೋಮ ಕಂಡು ಗಣ್ಯರು- ಸಾಹಿತಿಗಳು ಬೆರಗಾಗಿದ್ದರು. ಬಂಡಾಯ ಸಾಹಿತ್ಯದ ನೆಲೆವೀಡಾದ ರಾಯಚೂರು ಜಿಲ್ಲೆ, ಇಂದಿಗೂ ಅಕ್ಷರ ಪ್ರೀತಿಯನ್ನು ಕಿಂಚಿತ್ತೂ ಕಳೆದುಕೊಂಡಿಲ್ಲ ಎನ್ನಲಿಕ್ಕೆ ಇದು ನಿದರ್ಶನವಾಗಿದೆ. ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್‌ 1453 ನೋಂದಣಿ ಮಾಡಿಸಿದ್ದರೆ, ಆತಿಥ್ಯ ವಹಿಸಿರುವ ಕಲಬುರಗಿ ಜಿಲ್ಲೆ 2050 ಸದಸ್ಯತ್ವ ನೋಂದಣಿ ಮಾಡಿಸಿದೆ. ಇದನ್ನು ಹೊರತಾಗಿಸಿ ಹೆಚ್ಚು ನೋಂದಣಿಯಾದ
ಜಿಲ್ಲೆಗಳ ಸಾಲಿನಲ್ಲಿ ತುಮಕೂರು ಮೊದಲಾದರೆ, ರಾಯಚೂರು ಎರಡನೇ ಸ್ಥಾನದಲ್ಲಿದೆ.
ತುಮಕೂರು ಜಿಲ್ಲೆಯ 1500 ಜನ ನೋಂದಣಿ ಮಾಡಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ; 1400 ಜನ ನೋಂದಣಿ ಮಾಡುವ ಮೂಲಕ ರಾಯಚೂರು ಎರಡನೇ ಸ್ಥಾನದಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೇವಲ 11 ಸದಸ್ಯರು ನೋಂದಣಿ ಮಾಡಿಸಿದ್ದು, ಅತಿ ಕಡಿಮೆ ಎನಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ 15 ಜನ ನೋಂದಣಿ ಮಾಡಿಸಿದ್ದಾರೆ. ಕಸಾಪದಿಂದ 100 ರಶೀದಿಯುಳ್ಳ 239 ನೋಂದಣಿ ಪುಸ್ತಕಗಳನ್ನು ವಿತರಿಸಲಾಗಿತ್ತು. ಅದರಲ್ಲಿ 26 ರಶೀದಿ ಪುಸ್ತಕಗಳು ಉಳಿದಿವೆ. ಒಂಭತ್ತು ಜಿಲ್ಲೆಗಳಲ್ಲಿ ಶೇ.100 ಗುರಿ ತಲುಪಲಾಗಿದೆ. ಹುಬ್ಬಳ್ಳಿಯಲ್ಲಿ 10 ಪುಸ್ತಕಗಳ ಪೈಕಿ ಐದು ಮಾತ್ರ ಖರ್ಚಾದರೆ, ಶಿವಮೊಗ್ಗದಲ್ಲಿ 540 ನೋಂದಣಿಯಾಗಿದ್ದು, 460 ಬಾಕಿ ರಶೀದಿ ಉಳಿದಿವೆ. ಅಂದರೆ ಶೇ.54 ಗುರಿ ತಲುಪಲಾಗಿದೆ.

250 ರೂ. ಶುಲ್ಕ: ಪ್ರತಿ ಸದಸ್ಯರಿಗೆ ನೋಂದಣಿ ಶುಲ್ಕ 250ರೂ. ನಿಗದಿಮಾಡಲಾಗಿದೆ. ಒಂದು
ಕಿಟ್‌, ಅದರಲ್ಲಿ ಆಹ್ವಾನ ಪತ್ರಿಕೆ, ನೋಟ್‌ಬುಕ್‌ ಮತ್ತು ಪೆನ್‌ ಇರಲಿದೆ. ಅದರ ಜತೆಗೆ ಸದಸ್ಯತ್ವ ಬ್ಯಾಡ್ಜ್ ನೀಡಲಾಗುತ್ತಿದೆ. ವಸತಿ, ಊಟ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಡಿಕಲ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೂರು ದಿನಗಳ ಕಾಲ ಎಲ್ಲ ಸೌಲಭ್ಯ ನಿಭಾಯಿಸಲು ಕಲಬುರಗಿ ಜಿಲ್ಲಾಡಳಿತ ಈಗಾಗಲೇ ಕಾರ್ಯಕ್ರಮ ರೂಪಿಸಿದೆ.

ಎಲ್ಲರಿಗೂ ಬರಲ್ಲ ಸಂದೇಶ
ರಾಜ್ಯದಿಂದ ಒಟ್ಟು 21,030 ಜನ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಅವರಿಗೆ ಸೂಕ್ತ ಮಾಹಿತಿ ನೀಡಲು ಕಾಲ್‌ ಸೆಂಟರ್‌ ಮೂಲಕ ಏಕಕಾಲಕ್ಕೆ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಿದೆ. ಆದರೆ, ಬಹುತೇಕ ಸದಸ್ಯರಿಗೆ ಈ ಸಂದೇಶ ತಲುಪುವುದು ಕಷ್ಟ. ಏಕೆಂದರೆ ಕೆಲ ಜಿಲ್ಲೆಗಳಲ್ಲಿ ಕೇವಲ ಸದಸ್ಯತ್ವ ಹೆಸರು ಮಾತ್ರ ನೀಡಿದ್ದು, ಮೊಬೈಲ್‌ ಸಂಖ್ಯೆಯನ್ನೇ ನೀಡಿಲ್ಲ. ಹೀಗಾಗಿ ಸಮ್ಮೇಳನಕ್ಕೆ ಬರುವ ಸದಸ್ಯರು ತಮ್ಮ ವಸತಿ ಬಗ್ಗೆ ಖುದ್ದು ತೆರಳಿ ಖಚಿತಪಡಿಸಿಕೊಳ್ಳಬೇಕಿದೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲು ನೋಂದಣಿ ಮಾಡಿಸಿದ ಸದಸ್ಯರಿಗೆ ಕಿಟ್‌ ನೀಡಲಾಗುವುದು. ಮೂರು ದಿನಗಳ ವಸತಿ, ಊಟದ ವ್ಯವಸ್ಥೆ, ಆರೋಗ್ಯ ಸಮಸ್ಯೆಗೆ ತುತ್ತಾದವರಿಗೆ ಮೆಡಿಕಲ್‌ ಸೌಲಭ್ಯ ಕಲ್ಪಿಸಲಾಗುವುದು. ಸಾಕಷ್ಟು ಜನ ಮೊಬೈಲ್‌ ಸಂಖ್ಯೆ ನೀಡದ ಕಾರಣ ಎಲ್ಲಿ ವಸತಿ ಮಾಡಲಾಗಿದೆ ಎಂದು ಸಂದೇಶ ತಲುಪಲ್ಲ. ಅಂಥವರು ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಿ ವಿವರ ನೀಡಿದರೆ ಅವರಿಗೆ ಸೌಲಭ್ಯ ಕಲ್ಪಿಸಲಾಗುವುದು. ಸಾಹಿತ್ಯಾಸಕ್ತರಿಗೆ ಯಾವುದೇ ಕೊರತೆಯಾಗದಂತೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುತ್ತಿದೆ.
ಶರತ್‌, ಕಲಬುರಗಿ ಜಿಲ್ಲಾಧಿಕಾರಿ

ಕೇಂದ್ರ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹೆಚ್ಚು ನೋಂದಣಿ ಮಾಡಿದ್ದು,
ತುಮಕೂರು ಬಿಟ್ಟರೆ ರಾಯಚೂರು ಜಿಲ್ಲೆ. ಕೆಲ ವರ್ಷಗಳ ಹಿಂದೆ ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸದಸ್ಯತ್ವ ನೋಂದಣಿಯಲ್ಲೂ ನಮ್ಮ ಜಿಲ್ಲೆಯ ಸಾಹಿತ್ಯಾಸಕ್ತರು ಮುಂಚೂಣಿಯಲ್ಲಿದ್ದಾರೆ.
ಡಾ|ಬಸವಪ್ರಭು ಪಾಟೀಲ
ಕಸಾಪ ಜಿಲ್ಲಾಧ್ಯಕ್ಷ, ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.