7 ಶಾಸಕರು ಕಾಂಗ್ರೆಸ್ಗೆ ಹೋಗುತ್ತೇವೆ: ಜಮೀರ್ ಅಹಮದ್
Team Udayavani, Mar 5, 2017, 3:45 AM IST
ಮಾಗಡಿ: ಅಮಾನತುಗೊಂಡಿರುವ 7 ಶಾಸಕರನ್ನು ಜೆಡಿಎಸ್ಗೆ ಸೇರಿಸಿಕೊಳ್ಳುವುದಿಲ್ಲವೆಂದು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಪದೇಪದೆ ಹೇಳುತ್ತಿದ್ದಾರೆ.
ಹೀಗಾಗಿ ತಾವು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಬಂಡಾಯ ಶಾಸಕ ಜಮೀರ್ ಅಹಮದ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಶಾಸಕರಾದ ಜಮೀರ್ ಅಹಮದ್ ಹಾಗೂ ಬಾಲಕೃಷ್ಣ, ಲಕ್ಷಾಂತರ ಕಾರ್ಯಕರ್ತರು ಜೆಡಿಎಸ್ನಲ್ಲೇ ಇರಬೇಕು ಎಂದಿದ್ದರು. ಹೀಗಾಗಿ ತಾವು ಸುಮ್ಮನಿದ್ದೆವು.
ಆದರೆ, ಜೆಡಿಎಸ್ ವರಿಷ್ಠರು ಮಾಧ್ಯಮಗಳಲ್ಲಿ ಪದೇಪದೆ 7 ಶಾಸಕರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದಿದ್ದಾರೆ. ಬಾಗಿಲು ಮುಚ್ಚಿದೆ ಎನ್ನುವುದಕ್ಕಿಂತ ಬೀಗ ಜಡಿದುಕೊಳ್ಳಲಿ. ಆಗ ಯಾರೂ ಒಳಗೆ ಬರುವುದಿಲ್ಲ. ಗೋಪಾಲಯ್ಯ ಹೊರತುಪಡಿಸಿ, ಏಳು ಮಂದಿ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ದಾರೆ.