ಚಿತ್ರಮಂದಿರಗಳ ಸಿಬ್ಬಂದಿಗೆ ದಿನಸಿ ಕಿಟ್
Team Udayavani, Jun 4, 2020, 7:35 AM IST
ರಾಮನಗರ: “ಚಂದಮಾಮ ಚಕ್ಕುಲಿಮಾಮ’ ಚಿತ್ರತಂಡ ಜಿಲ್ಲೆಯ 6 ಚಿತ್ರಮಂದಿರಗಳ 55 ಸಿಬ್ಬಂದಿಗೆ ಉಚಿತ ದಿನಸಿ ಕಿಟ್ ವಿತರಿಸಿತು. ರಾಮನಗರದ ಶ್ರೀರಾಮ, ಶಾನ್, ಶಂಕರ್ ಚಿತ್ರಮಂದಿರಗಳು, ಚನ್ನಪಟ್ಟಣದ ಶಿವಾನಂದ ಮತ್ತು ಲಕ್ಷ್ಮೀ ಚಿತ್ರಮಂದಿರಗಳು, ಮಾಗಡಿಯ ಬಾಲಾಜಿ ಚಿತ್ರ ಮಂದಿರಗಳ ಸಿಬ್ಬಂದಿಗೆ ಅಕ್ಕಿ, ಸಕ್ಕರೆ, ಎಣ್ಣೆ, ಉಪ್ಪು, ಬೇಳೆ, ಈರುಳ್ಳಿ, ಸೋಪು, ಗೋದಿಹಿಟ್ಟು ಇರುವ ದಿನಸಿ ಕಿಟ್ ವಿತರಿಸಿದರು.
ಸುದ್ದಿಗಾರರೊಂದಿಗೆ ಚಂದಮಾಮ ಚಕ್ಕುಲಿ ಮಾಮ ಚಿತ್ರದ ಪುಟಾಣಿ ಕಲಾವಿದೆ ಭೈರವಿ ತಂದೆ ಹಾಗೂ ದಿನ ಪತ್ರಿಕಾ ವಿತರಕ ಹುಲುಕುಂಟೆ ಮಹೇಶ್ ಮಾತನಾಡಿ, ತಮ್ಮ ಪುತ್ರಿ ಭೈರವಿ ಅಭಿನ ಯದಿಂದ ಗಳಿಸಿದ ಹಣದ ಜೊತೆಗೆ ದಾನಿಗಳ ನೆರವು ಪಡೆದು ಸುಮಾರು 250 ಕಿಟ್ ಸಿದಪಡಿಸಲಾಗಿ ದ್ದು, ಚಿತ್ರಮಂದಿರಗಳ ಸಿಬ್ಬಂದಿಗೆ ವಿತರಿಸುತ್ತಿರುವುದಾಗಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಯ್ದ ಚಿತ್ರಮಂದಿರಗಳ 50 ಸಿಬ್ಬಂದಿಗೆ ಕಿಟ್ ವಿತರಿಸುವುದಾಗಿ ತಿಳಿಸಿದರು. ಹರಿ ಕಥೆ, ಭಜನೆ ಮುಂತಾದ ಸಂಕಷ್ಟದಲ್ಲಿರುವ ಕಲಾವಿದರಿಗೂ ವಿತರಿಸುವುದಾಗಿ ತಿಳಿಸಿದರು. ಜಾನಪದ ಗಾಯಕ ಕುಣಿಗಲ್ ರಾಮಚಂದ್ರ ಮಾತನಾಡಿ, ದಿನಸಿ ಕಿಟ್ ಸಿದಪಡಿಸಲು ಸಹಕರಿಸಿದ ದಾನಿಗಳು ಮತ್ತು ಸ್ವಯಂ ಸೇವಕರಿಗೆ ಇದರ ಶ್ರೇಯಸ್ಸು ಸೇರಬೇಕು. ಪುಟಾಣಿ ಬೈರವಿ ತನ್ನದೇ ಮಾತಿನಲ್ಲಿ ಕಿಟ್ವಿತರಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಎಬಿಸಿಡಿ ನೃತ್ಯ ಶಾಲೆ ಸ್ಥಾಪಕ ರೇಣುಕಾ ಪ್ರಸಾದ್, ಮಾಗಡಿಯ ಗ್ರಾಪಂ ಸುದ್ದಿ ಯೂಟ್ಯೂಬ್ ಚಾನಲ್ ಸ್ಥಾಪಕ ಸೋಮಶೇಖರ್, ಆಶಾಕಿರಣ ಶಿಕ್ಷಣ ಚಾರಿಟಬಲ್ ಸಂಸ್ಥೆಯ ಸಂಸ್ಥಾಪಕ ಕೃಷ್ಣಮೂರ್ತಿ ಹಾಗೂ ಚಿತ್ರಮಂದಿರದ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಸುಳಿವು
Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ ಕಬ್ಬಿಣದ ಕಡಲೆ
Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್ ವಾಗ್ಧಾಳಿ
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ