ಠಾಣೆಯಲ್ಲಿ ರೋಷಾವೇಶ:ಬಂಧನ ಭೀತಿಯಲ್ಲಿ ಕೋರ್ಟ್ಗೆ ಶರಣಾದ ಬಾಲಕೃಷ್ಣ
Team Udayavani, Jan 20, 2017, 11:37 AM IST
ಕುದೂರು: ಪೊಲೀಸ್ ಠಾಣೆಯಲ್ಲೇ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿ,ಅವಾಚ್ಯ ಶಬ್ಧಗಳಿಂದ ನಿಂದಿಸಿ, ರೋಷಾವೇಶ ತೋರಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಗಡಿಯ ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸ್ವಯಂ ಪ್ರೇರಿತರಾಗಿ ಮಾಗಡಿಯ 1 ನೇ ಜೆಎಂಎಫ್ಸಿ ನ್ಯಾಯಾಲಯದ ಎದುರು ಶುಕ್ರವಾರ ಹಾಜರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಸಿಪಿಐ ಎಚ್.ಎಲ್. ನಂದೀಶ್ ಅವರು ಶಾಸಕ ಎಚ್.ಸಿ. ಬಾಲಕೃಷ್ಣ ಸೇರಿದಂತೆ ಒಟ್ಟು 17 ಮಂದಿಯ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಪೊಲೀಸರನ್ನು ಅವಾಚ್ಯ
ಶಬ್ದಗಳಿಂದ ನಿಂದನೆ, ಕರ್ತವ್ಯಕ್ಕೆ ಅಡ್ಡಿ, ಜನರ ಜಮಾವಣೆ ಸೇರಿದಂತೆ ವಿವಿಧ ಕಲಂ ಗಳಡಿ 341, 352, 353, 504, 506 ಜತೆಗೆ 149ರಂತೆ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕೇಸು ದಾಖಲಾಗಿದ್ದವು.