15 ಎಕರೆ: 100 ಕ್ವಿಂಟಲ್ ರಾಗಿ
Team Udayavani, Feb 12, 2021, 5:27 PM IST
ಮಾಗಡಿ: ರಾಗಿ ತಿಂದರೆ ರೋಗವಿಲ್ಲ ಎಂಬ ಪೂರ್ವಿಕರು ಕಟ್ಟಿದ ಗಾಧೆ ಅಕ್ಷರಸಃ ಸತ್ಯ. ಆಧುನಿಕ ಯುಗದಲ್ಲಿಯೂ ರಾಗಿಗೆ ಅತ್ಯಂತ ಬೇಡಿಕೆಯಿದ್ದು, ಮಧುಮೇಹಿಗಳಿಗಂತೂ ರಾಗಿ ರಾಮಭಾಣವಾಗಿದೆ. ರಾಗಿ ಸೇವನೆಯಿಂದಲೇ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು ಎಂದು ರೈತ ಕೆ.ಬಾಗೇಗೌಡ ತಿಳಿಸಿದ್ದಾರೆ.
ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ರಾಗಿ ಬೆಳೆದು ಸಾಧನೆ ಮಾಡಿದ ಅನೇಕರಲ್ಲಿ ರೈತ ಕೆ.ಬಾಗೇಗೌಡ ಒಬ್ಬರು. ತಾಲೂಕಿನಬೆಳಗುಂಬ ವ್ಯಾಪ್ತಿಯ ತಮ್ಮ 15 ಎಕರೆ ಜಮೀನಿನಲ್ಲಿ ರಾಗಿ ಬೆಳೆದಿರುವ ಕೆ.ಬಾಗೇಗೌಡ, 100 ಕ್ವಿಂಟಲ್ ರಾಗಿ ಜೊತೆಗೆ 13 ಎಕರೆಯಲ್ಲಿ 40 ಕ್ವಿಂಟಲ್ ತೊಗರಿ ಬೆಳೆದು ಸಂತೃಪ್ತಿ ಜೀವನ ಕಟ್ಟಿಕೊಂಡಿದ್ದಾರೆ.
ಸಾಧಕರ ತವರೂರು: ಮಾಗಡಿ ಮಣ್ಣಿನ ಮಹತ್ವವೇ ಅಂತದ್ದು, ಮಾಗಡಿ ಮಣ್ಣಿನಲ್ಲಿ ನಾಡಪ್ರಭ ಕೆಂಪೇಗೌಡ, ಸಿದ್ಧಗಂಗೆ ಸಂತ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಕ್ರೀಡಾಪಟು ಕೆ.ಆರ್.ರಾಹುಲ್, ಸಮಾಜ ಸೇವಕ ಕೆ.ಬಾಗೇಗೌಡ, ತಗ್ಗೀಕುಪ್ಪೆ ರಂಗೇಗೌಡ ಸೇರಿದಂತೆ ನೂರಾರು ಮಂದಿ ಸಾಧನೆ ತಾಲೂಕಿನ ಜನತೆಗೆ ಸ್ಫೂರ್ತಿಯಾಗಿದೆ. ರಾಗಿ, ತೊಗರಿ ಸಂಗ್ರಹ: ರೈತ ಕೆ.ಬಾಗೇಗೌಡ ಅವರ ಸಹಾಯಕ ಚಂದ್ರಣ್ಣ , ಕೂಲಿಕಾರರನ್ನು ಹೊಂದಿಸಿಕೊಂಡು ರಾಗಿ, ತೊಗರಿ ಬೆಳೆದು ಧಾನ್ಯ ಸಂಗ್ರಹಿಸುವಲ್ಲಿ ಶ್ರಮಿಸಿದ್ದಾರೆ.
ನಂಬಿದವರನ್ನು ಭೂಮಿ ತಾಯಿ ಎಂದೂ ಕೈ ಬಿಡುವುದಿಲ್ಲ. ಭೂಮಿ ತಾಯಿ ಸೇವೆ ಮಾಡುವುದರಿಂದ ಸಿಗುವ ನೆಮ್ಮದಿ ಬೇರೆ ಯಾವ ಕಂಪನಿಗಳಲ್ಲಿ ದುಡಿದರೂ ಸಿಗುವುದಿಲ್ಲ ಎನ್ನುತ್ತಾರೆ ರೈತ ಕೆ.ಬಾಗೇಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tourist spot: ಪ್ರವಾಸಿಗರ ಡೆತ್ಸ್ಪಾಟ್ ಆಗಿರುವ ಸಂಗಮ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ