Ramnagar: ಜೀವನ ಸಂಗಾತಿ ಕರುಣಿಸೆಂದು ದೇವರಿಗೆ ಮೊರೆ ಹೋದ ಭಕ್ತರು
Team Udayavani, Mar 11, 2024, 3:49 PM IST
ರಾಮನಗರ: ದೇವರೆ ನನಗೆ ಒಳ್ಳೆಯ ಹುಡುಗ ಸಿಗುವಂತೆ ಮಾಡು, ನಮ್ಮ ಮಗನಿಗೆ ಬೇಗ ಹುಡುಗಿ ಸಿಗಲಿ, ನಮ್ಮ ಕುಟುಂಬಕ್ಕೆ ಹೊಂದಿಕೊಂಡು ಹೋಗುವ ಸೊಸೆ ಬರಲಿ.. ಇವು ಚನ್ನಪಟ್ಟಣ ತಾಲೂ ಕಿನ ತಗಚಗೆರೆ ಗ್ರಾಮದಲ್ಲಿ ಶಿವರಾತ್ರಿಯ ದಿನ ನಡೆದ ರಥೋತ್ಸವದಲ್ಲಿ ದೇವರಿಗೆ ಭಕ್ತರು ಸಲ್ಲಿಸಿದ ಹರಕೆಯ ಸ್ಯಾಂಪಲ್ಗಳು.
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕಳೆದ 5 ವರ್ಷಗಳ ಹಿಂದೆ ಕೆಗ್ಗೆರೆ ಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ಪ್ರತಿ ಶಿವರಾತ್ರಿಯಂದು ಕೆಗ್ಗೆರೆಲಿಂಗೇಶ್ವರನ ರಥೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ರಥೋತ್ಸವದಲ್ಲಿ ಭಕ್ತರು ಬಾಳೆ ಹಣ್ಣು ಜವನವನ್ನು ರಥಾರೂಢನಾಗಿ ಬರುವ ಕೆಗ್ಗೆರೆ ಲಿಂಗೇಶ್ವರನಿಗೆ ಎಸೆದು ತಮ್ಮ ಇಷ್ಟಾರ್ಥ ಈಡೇರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಹೀಗೆ ಬಾಳೆ ಹಣ್ಣು ಎಸೆಯುವರು ತಮ್ಮ ಕೋರಿಕೆ ಯನ್ನು ಬರೆದು ರಥಕ್ಕೆ ಎಸೆಯುತ್ತಾರೆ. ಭಕ್ತರು ತಮ್ಮ ಬೇಡಿಕೆ ಯನ್ನು ಬರೆದು ಎಸೆದಿರುವ ಬಾಳೆಹಣ್ಣುಗಳ ಮೇಲೆ ಭಕ್ತರು ಬರೆದಿರುವ ವಿಶಿಷ್ಟ ಕೋರಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಳೆಹಣ್ಣಿಗೆ ಜವನ ಸಿಗಿಸಿ ಬಾಳೆಹಣ್ಣಿನ ಮೇಲೆ ತಮ್ಮ ಕೋರಿಕೆಯನ್ನು ಬರೆದು ಎಸೆದಿರುವ ಭಕ್ತರು ಬೇಡಿಕೆ ಗಳನ್ನು ಕೆಗ್ಗೆರೆ ಲಿಂಗೇಶ್ವರ ನೋಡಿದ್ದಾನೋ ಇಲ್ಲವೋ, ಇವರು ಬರೆದಿರುವ ಬಾಳೆಹಣ್ಣುಗಳನ್ನು ಸ್ಥಳೀಯರು ನೋಡಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
ಮದುವೆಯದ್ದೇ ಗುಂಗು : ಕೆಗ್ಗೆರೆ ಲಿಂಗೇಶ್ವರನಿಗೆ ಬೇಡಿಕೆ ಸಲ್ಲಿಸಿರುವ ಭಕ್ತರಲ್ಲಿ ಬಹುತೇಕರಿಗೆ ಮದುವೆಯದ್ದೇ ಗುಂಗಿದ್ದು, ತಮ್ಮ ಜೀವನ ಸಂಗಾತಿ ಕರುಣಿಸು ವಂತೆ ಭಕ್ತರು ದೇವರಿಗೆ ಕೋರಿಕೆ ಸಲ್ಲಿಸಿದ್ದಾರೆ. ಯುವತಿಯರು ಒಳ್ಳೆಯ ಹುಡುಗ ಸಿಗಲಿ ಎಂದು ಪ್ರಾರ್ಥಿಸಿದ್ದರೆ, ವಯಸ್ಸಾಗುತ್ತಿರುವ ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ನೊಂದಿರುವ ಪೋಷಕರು ಮಗನಿಗೆ ಬೇಗ ಹುಡುಗಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಕೆಲ ಪೋಷಕರು ನಮ್ಮ ಮನೆಗೆ ಹೊಂದಿಕೊಂಡು ಹೋಗುವ ಸೊಸೆ ಬರಲಿ ಎಂದು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್