ವೈರಾಗ್ಯ, ಆಧ್ಯಾತ್ಮದ ಸಂಕೇತವೇ ಶಿವ
ಶಿವರಾತ್ರಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು ! ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡ ಭಕ್ತರು
Team Udayavani, Mar 12, 2021, 6:27 PM IST
ಕುದೂರು: ಶಿವ ಎಂಬುದು ವೈರಾಗ್ಯ ಮತ್ತು ಆಧ್ಯಾತ್ಮದ ಸಂಕೇತ. ಸಾಧಕರು, ಸನ್ಯಾಸಿಗಳಿಗೆ ಧ್ಯಾನಾಸಕ್ತ ಶಿವನೇ ಮಾದರಿ ಎಂದು ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ಕಂಚುಗಲ್ ಬಂಡೇಮಠದ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಹವನ್ನು ದಂಡಿಸುವ ಜತೆಗೆ, ಶುದ್ಧ ಆಲೋಚನೆ ಮಾಡುವುದು ಶಿವರಾತ್ರಿ ಹಬ್ಬದ ವಿಶೇಷ. ಆಯುರ್ವೇದದಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ಔಷಧ ಎಲೆಯಾದ ಬಿಲ್ವಪತ್ರೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸಲಾಗುತ್ತದೆ. ಬಿಲ್ವಪತ್ರೆ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಬೇಸಿಗೆ ವೇಳೆ ಇದರ ಬಳಕೆ ಹೆಚ್ಚು ಸೂಕ್ತ ಎಂದು ವೈದ್ಯಶಾಸ್ತ್ರ ತಿಳಿಸುತ್ತದೆ ಎಂದರು.
ಶಿವಲಿಂಗಕ್ಕೆ ವಿಶೇಷ ಹೂವಿನ ಅಲಂಕಾರ: ಗ್ರಾಮದ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ಶಿವಲಿಂಗಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದ ನಡೆದ ರುದ್ರಾಭಿಷೇಕ, ಪೂಜಾ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು. ಗ್ರಾಮದ ತುಮಕೂರು ರಸ್ತೆಯಲ್ಲಿರುವ ರಾಮಲಿಂಗಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ರಾಮಲಿಂಗ ಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ರಾಮಲಿಂಗಚೌಡೇಶ್ವರಿ ದೇವಾಲಯ ಸಂಘದ ಅಧ್ಯಕ್ಷ ಕೆ.ಬಿ.ಬಾಲರಾಜು, ಶಿವಕುಮಾರ್, ಜಯಚಂದ್ರಬಾಬು, ಶಿವರಾಂ, ಮುರುಳಿಧರ್, ಮಂಜುನಾಥ್, ಶಿವರಾಮ್ ಇದ್ದರು.
ಸೋಲೂರು ಹೋಬಳಿಯ ಗದ್ದುಗೆಮಠದ ಶ್ರೀ ಮಹಂತೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಗದ್ದುಗೆ ಮಠಾಧ್ಯಕ್ಷ ಮಹಂತ ಸ್ವಾಮೀಜಿ ಮಾತನಾಡಿ, ಉಸಿರಾಡುತ್ತಿದ್ದರೆ ಪ್ರತಿಯೊಬ್ಬರು ಶಿವ ಸ್ವರೂಪಿಗಳೇ ಉಸಿರು ನಿಂತರೆ ಅವರು ಶವವಾಗುತ್ತಾರೆ. ಇನ್ನೊಬ್ಬರ ಹಿತ ಬಯಸುವುದು ಸ್ವಾರ್ಥಕ್ಕೆ ಆರೋಗ್ಯಕರ ಗೆರೆ ಎಳೆದುಕೊಳ್ಳುವುದು. ಸರಳವಾಗಿ ಬದುಕಿದರೂ ಸಂತೋಷದಿಂದ ಇರಬೇಕು ಎಂಬುದನ್ನು ಈ ಹಬ್ಬ ಸಾರುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?