ಭೂತ ಬಂಗಲೆಯಂತಿವೆ ತಾಪಂ ವಸತಿಗೃಹಗಳು


Team Udayavani, Jul 31, 2023, 2:51 PM IST

ಭೂತ ಬಂಗಲೆಯಂತಿವೆ ತಾಪಂ ವಸತಿಗೃಹಗಳು

ಮಾಗಡಿ: ಪಟ್ಟಣದ ತಾಲೂಕು ಪಂಚಾಯ್ತಿ ವಸತಿಗೃಹದಲ್ಲಿ ಅಕ್ಷರಶಃ ಭೂತ ಬಂಗಲೆಯಂತಿವೆ. ಭಯದ ವಾತಾವರಣದಲ್ಲಿ ಕೆಲ ನೌಕರರು ವಾಸ ಮಾಡುತ್ತಿದ್ದಾರೆ.

ವಸತಿಗೃಹಗಳ ಸುತ್ತಲು ಗಿಡಗಂಟಿಗಳು ಬೆಳೆದು ನಿಂತಿವೆ. ಸಂಜೆಯಾಗುತ್ತಿದ್ದಂತೆ ವಿಷಜಂತುಗಳ ಓಡಾಡುತ್ತಿರುತ್ತವೆ. ವಿದ್ಯುತ್‌ ಸಮಸ್ಯೆಯೂ ಮತ್ತೂಂದು. ದೀಪದ ಕೆಳಗೆ ಕತ್ತಲು ಎಂಬಂತೆ ಸರ್ಕಾರಿ ಕಚೇರಿಯ ಬಳಿಯೇ ವಸತಿ ಗೃಹಗಳ ಸ್ಥಿತಿ ಹೀಗಾದರೆ ಗ್ರಾಮೀಣ ಜನರು ಏನೇನು ನಿರೀಕ್ಷಿಸಲು ಸಾಧ್ಯ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಮಾಗಡಿ ಪಟ್ಟಣದ ಗಾಂಧಿವೃತ್ತದಲ್ಲಿ ತಾಲೂಕು ಪಂಚಾಯಿತಿಗೆ ಸೇರಿದ ಸುಮಾರು 12ಕ್ಕೂ ಹೆಚ್ಚು ವಸತಿ ಗೃಹಗಳಿವೆ. ಈ ವಸತಿ ಗೃಹಗಳು ನಿರ್ಮಾಣ ಗೊಂಡು ಸುಮಾರು 60 ವರ್ಷಗಳು ಕಳೆದಿದೆ. ಈ ಕಟ್ಟಡಗಳ ಸ್ಥಿತಿ ಹೇಳತೀರದು, ಅಷ್ಟು ಸುಂದರವಾಗಿದ್ದವು. ಈಗೆಲ್ಲ ಕಟ್ಟಡಗಳು ತೀರ ಶಿಥಿಲಗೊಂಡು ಬಣ್ಣಬಣ್ಣ ಕಂಡೇ ಇಲ್ಲ, ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಳೆ ಬಂದರಂತೂ ವಸತಿಗೃಹಗಳ ಚಾವಣೆ ಸೋರುತ್ತವೆ. ಮೇಲ್ಚಾವಣೆ ದಿನೆ ದಿನೇ ಕಳಚಿ ಬೀಳುತ್ತಿವೆ. ಗೋಡೆಗಳೆಲ್ಲವೂ ಹಸಿರು ಪಾಚಿಯಿಂದ ಗಬ್ಬುನಾರುತ್ತಿದ್ದು, ಜತೆಗೆ ಗೋಡೆಗಳು ಸಹ ಬಿರುಕು ಬಿಟ್ಟಿವೆ. ವಸತಿ ಗೃಹಗಳ ಸುತ್ತಲು ಗಿಡಗಂಟಿಗಳು ಬೆಳೆದು ನಿಂತಿವೆ. ಸೊಳ್ಳೆಗಳ ಉತ್ಪತ್ತಿಯ ಕೇಂದ್ರವಾಗಿದೆ.

ಇಲ್ಲಿ ವಾಸಿಸುವ ನೌಕರರು ಅಕ್ಷರಶಃ ರೋಗಬಾಧೆಯ ಭೀತಿಯಲ್ಲಿ ಸುಮಾರು 5 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಉಳಿದ ಕಟ್ಟಡಗಳು ವಾಸ ಮಾಡಲಾಗದೆ ಪಾಳು ಬಿದ್ದಿವೆ. ಪಾಳು ಬಿದ್ದ ಕಟ್ಟಡಗಳಂತೂ ಭೂತ ಬಂಗಲೆಯಂತಿವೆ. ತಿರುಗಿ ಸಹ ನೋಡಲು ಅಲ್ಲಿನ ಜನರೇ ಹೆದರುತ್ತಾರೆ. ಒಂದು ಕಾಲದಲ್ಲಿ ಈ ವಸತಿ ಗೃಹಗಳು ಸುಂದರ ಮತ್ತು ಶ್ರೀಮಂತವಾಗಿದ್ದವು. ಈ ವಸತಿ ಗೃಹದ ಕಾಂಪೌಂಡ ಒಳಗೆ ಯಾರು ಹೋಗುವಂತಿರಲ್ಲಿಲ್ಲ, ಸದಾ ಗೇಟ್‌ ಬಾಗಿಲು ಹಾಕಿಕೊಂಡೇ ಸಂಚರಿಸಬೇಕಿತ್ತು. ಬೇರೆ ಜನರ ಒಳಗೆ ಪ್ರವೇಶಕ್ಕೆ ಅವ ಕಾಶವೇ ಇರಲಿಲ್ಲ, ಪರಿಚಯಸ್ಥರ ಮೂಲಕವೇ ವಸತಿಗೃಹಗಳಲ್ಲಿನ ಅಧಿಕಾರಿಗಳ, ಸಿಬ್ಬಂದಿಗಳ ಭೇಟಿ ಮಾಡಬೇಕಿತ್ತು. ವಸತಿ ಗೃಹದ ಮುಂಭಾಗ ಹೂ ಗಿಡಗಳ ಕುಂಡ ಗಳ ಅಲಂಕಾರ, ಪರಿಸರ ಪ್ರಜ್ಞೆ ಜನರಲ್ಲಿ ಜಾಗೃತಿ ಉಂಟು ಮಾಡುವಂತಿತ್ತು. ವಸತಿ ಗೃಹಗಳ ಸುತ್ತಲು ಸ್ವಚ್ಛಗೊಳಿಸಲು ಸಿಬ್ಬಂದಿಗಳು ಸಹ ನೇಮಕಗೊಂಡಿದ್ದರು. ಈಗ ಕನಿಷ್ಟ ಕಚೇರಿಯ ಕೆಲಸ ಕಾರ್ಯ ನಿರ್ವಹಸಲು ಸಿಬ್ಬಂದಿಗಳೇ ಇಲ್ಲದೆ, ಇರುವ ವರಿಂದಲೇ ಕೆಲಸ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಸತಿ ಗೃಹಗಳ ಕಡೆ ಗಮನಹರಿಸುವುದಾದರೂ ಯಾರು ಎಂಬ ಪ್ರಶ್ನೆ ಅಧಿಕಾರಿಗಳದ್ದಾಗಿದೆ. ಹೀಗಿರುವ ಇದರ ರಕ್ಷಣೆ, ನಿರ್ವಹಣೆ ಯಾರ ಹೊಣೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸರ್ಕಾರಿ ಜಾಗಗಳು ಒತ್ತುವರಿಯಾಗಿವೆ: ವಸತಿ ಗೃಹದ ಕಟ್ಟಡ ದುರಸ್ತಿಯಾಗುವ ಲಕ್ಷಣವೇ ಇಲ್ಲ. ಇವುಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಕನಿಷ್ಠ ಪಕ್ಷ ಈಗಿರುವ ನೌಕರರಿಗೆ ಮನೆಗಳಿಗೆ ಸುಣ್ಣ ಬಣ್ಣವಾದರೂ ಮಾಡಿಸಿ ಕೊಡಬೇಕಿದೆ. ತಾಲೂಕು ಪಂಚಾಯಿತಿಯ ಸ್ವತ್ತು ರಕ್ಷಣೆ ಮಾಡದಿದ್ದರೆ, ಒತ್ತುವರಿಯಾಗುವ ಸಾಧ್ಯತೆಯೂ ಇದೆ. ಮುಂದೊಂದು ದಿನ ಬೇರೆ ಕಟ್ಟಡಗಳು ತಲೆ ಎತ್ತಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಎಷ್ಟೊ ಸರ್ಕಾರಿ ಜಾಗಗಳು ಒತ್ತುವರಿಯಾಗಿವೆ. ಒತ್ತುವರಿ ಮಾಡಿಕೊಂಡವರು ಕಟ್ಟಡ ಕಟ್ಟಿಕೊಂಡು ಅನುಭವದಲ್ಲಿದ್ದಾರೆ.

ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಅಗತ್ಯ: ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕನಿಷ್ಠ ಪಕ್ಷ ವಸತಿಗೃಹಗಳ ಸುತ್ತಲು ಬೆಳೆದಿರುವ ಗಿಂಡಗಂಟಿಗಳನ್ನು ತೆಗೆಸುವ ಮೂಲಕ ಸ್ವಚ್ಛಗೊಳಿಸಬೇಕಿದೆ. ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಸಹ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ. ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಮನಸ್ಸು ಮಾಡಿದರೆ ಮಾತ್ರ ವಸತಿ ಗೃಹದ ಸ್ಥಳ ಉಳಿಯು ತ್ತದೆ. ಇಲ್ಲದಿದ್ದರೆ ಹೊಲಸೆದ್ದು ನಾರುತ್ತಿರುತ್ತದೆ ಎಂಬುದು ಸ್ಥಳೀಯರ ಮಾತನಾಗಿದೆ.

ಭೂತ ಬಂಗಲೆಗಳಲ್ಲೇ 5 ಕುಟುಂಬಗಳು ವಾಸ: ತಾಪಂಗೆ ಸೇರಿದ ತೀರ ಹಳೆಯದಾದ 12ಕ್ಕೂ ಹೆಚ್ಚು ವಸತಿಗೃಹಗಳಿವೆ. ಬಹುತೇಕ ಎಲ್ಲವೂ ಶಿಥಿಲ ಗೊಂಡಿದ್ದು, ಸುತ್ತಲು ಕುರುಚಲು ಗಿಡಗಂಟಿಗಳು ಬೆಳೆದು ನಿಂತಿದೆ. ಮೂಲಸೌಕರ್ಯ ಮರೀಚಿಕೆ ಯಾಗಿದೆ. ಭಯದ ನಡುವೆಯೂ ಹೇಗೋ 5 ಕುಟುಂಬಗಳು ಈ ಭೂತ ಬಂಗಲೆ ಗಳಲ್ಲೇ ವಾಸವಾಗಿದ್ದೇವೆ. ಕನಿಷ್ಠ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛತೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೆಸರೇಳದ ವಸತಿ ಗೃಹ ದಲ್ಲಿ ವಾಸಿಸುವ ನೌಕರರು.

ತಾಲೂಕು ಪಂಚಾಯ್ತಿ ವಸತಿ ಗೃಹ ತೀರ ಶಿಥಿಲಗೊಂಡಿದೆ. ಇಲ್ಲಿನ ವಸತಿ ಗೃಹಗಳು ವಾಸ ಮಾಡಲು ಯೋಗ್ಯವಿಲ್ಲ. ಇಲ್ಲಿನ ವಸತಿ ಗೃಹಗಳನ್ನು ಕೆಡವಿ ಈ ಜಾಗದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಚೇರಿ ನಿರ್ಮಿಸ ಬೇಕೆಂಬ ಯೋಜನೆಯಿದೆ. ಜತೆಗೆ ಅಂಗಡಿ ಮಳಿಗೆಗಳನ್ನು ಕಟ್ಟಿಸಿ ಪಂಚಾಯ್ತಿಗೆ ಆದಾಯ ತರುವ ಕೆಲಸ ಮಾಡಲು ಚಿಂತಿಸಿದ್ದೇನೆ. ಈಗಿರುವ ಬಿಇಓ ಕಚೇರಿಯನ್ನು ಪುರಸಭೆ ವಶಕ್ಕೆ ಪಡೆಯಲಾಗುವುದು. – ಎಚ್‌.ಸಿ.ಬಾಲಕೃಷ್ಣ, ಶಾಸಕ, ಮಾಗಡಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.