Ramanagara; ಹೋರಾಟ ಶುರುವಾಗಿದೆ, ನಾನು ತಯಾರಾಗಿಲ್ಲ: ಚುನಾವಣೆ ಬಗ್ಗೆ ಡಿ.ಕೆ ಸುರೇಶ್
Team Udayavani, Jan 13, 2024, 3:03 PM IST
ರಾಮನಗರ: ಪ್ರಜಾಪ್ರಭುತ್ವದಲ್ಲಿ ಯಾರೂ ಎಲ್ಲಿಬೇಕಾದರೂ ಈ ದೇಶದಲ್ಲಿ ನಿಲ್ಲಬಹುದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸ್ಪರ್ಧೆ ಮಾಡಬಹುದು. ಎಚ್ ಡಿ ಕುಮಾರಸ್ವಾಮಿ ಬೇಕಾದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಸ್ಫರ್ಧೆ ಮಾಡಲಿ. ಖಂಡಿತಾ ಹೋರಾಟ ಶುರುವಾಗಿದೆ. ವೇದಿಕೆ ಸಿದ್ಧವಾಗಿದೆ., ನಾನು ತಯಾರಾಗಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಡಿಪಿಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಿಸರ್ವ್ ಫಾರೆಸ್ಟ್ ಇರುವುದರಿಂದ ಎಷ್ಟು ಜಾಗವಿದೆ ಎನ್ನುವುದನ್ನು ಡಿಸಿಗೆ ಕೇಳಿದ್ದೇನೆ. ಡಿಸಿ, ಅರಣ್ಯಾಧಿಕಾರಿಗಳು ಸರ್ವೇ ಮಾಡಿ ವರದಿ ಕೊಡಲು ಹೇಳಿದ್ದೇನೆ. ಅವರು ವರದಿ ಕೊಟ್ಟ ಬಳಿಕ ಯಾವ ರೀತಿ ಅಭಿವೃದ್ಧಿ ಮಾಡಬೇಕೆಂದು ನೋಡುತ್ತೇವೆ ಎಂದರು.
ಬಿಜೆಪಿಯವರು ಅಲ್ಲಿ ಏನು ಮಾಡಿದ್ದಾರೆಂದು ಗೊತ್ತಿಲ್ಲ. ಸದ್ಯಕ್ಕೆ ಅಲ್ಲಿ ಏನೂ ಮಾಡಿಲ್ಲ, ಮಾಡಿದ್ದರೆ ದಾಖಲೆ ಕೊಡಿ. ಈಗ ನಾನು ಡಿಸಿ, ಅರಣ್ಯಾಧಿಕಾರಿಗಳು ಸರ್ವೇ ಮಾಡಿ ಕೊಡಲಿ. ಅದನ್ನು ಸರ್ಕಾರದ ಮಟ್ಟದಲ್ಲೇ ಮಂತ್ರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು.
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಗೆ ಹೆಚ್ಚುವರಿ ಹಣ ಬಿಡುಗಡೆ ವಿಚಾರಕ್ಕೆ ಮಾತನಾಡಿ, ಕೆಲ ಪ್ರದೇಶಗಳಿಗೆ ಪ್ರವೇಶ ನಿರ್ಗಮನ ಎಲಿರಲಿಲ್ಲ. ಕೆಲವು ಕಡೆ ಸರ್ವೀಸ್ ರಸ್ತೆಗಳು ಅಪೂರ್ಣವಾಗಿದ್ದವು. ಎಲ್ಲಾ ಕಾಮಗಾರಿ ಪೂರ್ಣಕ್ಕೆ 640 ಕೋಟಿ ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ಮಂಡ್ಯದಲ್ಲಿ ರಸ್ತೆ ಮೇಲೆ ಹೈಜಂಕ್ಷನ್ ವೈಯರ್ ಹೋಗಿರುವ ವಿಚಾರಕ್ಕೆ ಮಾತನಾಡಿ, ರಸ್ತೆ ಸಂಪೂರ್ಣವಾಗಿ ವೈಜ್ಞಾನಿಕವಾಗಿ ಇಲ್ಲವೆಂದು ಮೊದಲಿನಿಂದಲೂ ಹೇಳಿದ್ದೇವೆ. ಈಗಲೂ ಮಳೆ ಬಂದರೆ ಕೆಲವು ಕಡೆ ನೀರು ನಿಲ್ಲುತ್ತದೆ. ಕಳೆದ ಬಾರಿ ಕೇಂದ್ರ ಹೆದ್ದಾರಿ ಅಧಿಕಾರಿಗಳು ಬಂದಾಗ ಎಲ್ಲವೂ ಮನವರಿಕೆ ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್