![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ನಾಡಿನ ಸಂಸ್ಕೃತಿ ನಶಿಸದಂತೆ ಎಚ್ಚರ ವಹಿಸಿ
Team Udayavani, Jan 13, 2020, 5:42 PM IST
![rn-tdy-1](https://www.udayavani.com/wp-content/uploads/2020/01/rn-tdy-1-8-620x279.jpg)
ಮಾಗಡಿ: ರಾಜಕಾರಿಣಿಗಳು, ಶಿಕ್ಷಕರು ವಿದ್ಯಾವಂತರು ಎಂದೂ ವಿವೇಕ ಕಳೆದುಕೊಳ್ಳಬಾರದು. ಯಾರೇ ತಪ್ಪು ಮಾಡಿದರೂ, ಖಂಡಿಸುವ ಗುಣ ಬೆಳಸಿ ಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆ.ದೇವೇಗೌಡ ತಿಳಿಸಿದರು.
ತಾವರೆಕೆರೆಯಲ್ಲಿನ ಜಿನ್ನಾಂಬ ಹಾಲ್ನಲ್ಲಿ ಎಂ.ನೀಲಯ್ಯ ಅವರ ಹಿತೈಷಿಗಳ ಸಭೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾವಂತ ವಿದ್ಯಾವಂತರು ನಾಡಿನ ಭಾಷಾ ಸಂಸ್ಕೃತಿ ನಶಿಸದಂತೆ ಎಚ್ಚರ ವಹಿಸಬೇಕು. ನಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಯ ಕಡೆ ಎಂದೂ ಮನಸ್ಸು ಮಾಡಬಾರದು. ಮನಸ್ಸು ಜಾಗೃತಿಗೊಳಿಸಿಕೊಳ್ಳುವಂತಹ ಗುರಿ ನಮ್ಮದಾಗಬೇಕು. ನಮ್ಮನ್ನು ರಕ್ಷಣೆ ಮಾಡುವ ಸೈನಿಕ ಮತ್ತು ಅನ್ನ ನೀಡುವ ರೈತರನ್ನು ಸ್ಮರಣೆ ಮಾಡಬೇಕೆಂದರು.
ಬೆಂಗಳೂರು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ, ಸಂಸ್ಕೃತಿ ಉಳಿಯಬೇಕಾದರೆ, ಕೃತಿ ಮನಸ್ಸುಗಳು ಬದಲಾಗಬೇಕು. ಜಾತಿ ಸಂಕೋಲೆಯಿಂದ ಹೊರಬರಬೇಕು. ಎಲ್ಲಾ ಧರ್ಮದ ಸಂದೇಶವೂ ಒಂದೇ ಆಗಿರುತ್ತದೆ. ಆದರೂ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಎತ್ತಿಡಿ ಯಬೇಕು ಹಾಗೂ ಸಮಾಜದ ಏಳಿಗೆಗೆ ಪ್ರಮಾಣಿಕವಾಗಿ ದುಡಿಯಬೇಕು ಎಂದು ಯುವ ಜನತೆಗೆ ಕರೆ ಕೊಟ್ಟರು. ಡಿಜಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್ ಸ್ವಾಮಿ ವಿವೇಕನಂದರ ಕುರಿತು ಉಪನ್ಯಾಸ ನೀಡಿದರು.
ಎಂಎಲ್ಸಿ ಸ್ಪರ್ಧಾಕಾಂಕ್ಷಿ ತಾ.ಸ. ನೌಕರರ ಸಂಘದ ಅಧ್ಯಕ್ಷ ಶಿವರಾ ಮಯ್ಯ, ಮುಖಂಡರಾದ ನಂದೀಶ್, ನಂದ ಶಿವಯ್ಯಂ, ಎನ್ಜಿಓ ಜಯ ರಾಮ, ಪ್ರೌಢಶಾಲಾ ಶಿಕ್ಷಕರ ಸಂಘದ ಮಹಾಲಿಂಗಯ್ಯ, ನರಸೇಗೌಡ, ನಿಂಗಯ್ಯ, ಚಿಕ್ಕರಯ್ಯ, ಕೆಂಪೇಗೌಡ, ಮಲ್ಲಿಕಾರ್ಜುನಯ್ಯ, ಬಿ.ಎನ್.ಚಂದ್ರ ಶೇಖರ್, ಬೋಗಣ್ಣ, ಸುರೇಶ್, ಚಂದ್ರ ಶೇಖರ್ ಇತರರು ಇದ್ದರು.
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Magadi; Mother-son passed away due to gas leak from geyser](https://www.udayavani.com/wp-content/uploads/2024/07/magadu-150x83.jpg)
Magadi; ಗೀಸರ್ ನಿಂದ ಅನಿಲ ಸೋರಿಕೆಯಿಂದ ಮೃತಪಟ್ಟ ತಾಯಿ – ಮಗ
![Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ](https://www.udayavani.com/wp-content/uploads/2024/07/karad-150x83.jpg)
Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ
![Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ](https://www.udayavani.com/wp-content/uploads/2024/07/loka-150x84.jpg)
Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
![1-train](https://www.udayavani.com/wp-content/uploads/2024/07/1-train-150x96.jpg)
Train;ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ: ಪ್ರಯಾಣಿಕರಿಗೆ ಅನಾನುಕೂಲ
![HD-Kumaraswamy](https://www.udayavani.com/wp-content/uploads/2024/07/HD-Kumaraswamy-3-150x90.jpg)
Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.