ದಲಿತರಿಗೆ ನ್ಯಾಯ ಕಲಿಸಿದ ಎಚ್‌ಆರ್‌ಪಿ ಅಧಿಕಾರಿ

ಸರ್ವೆಯರ್‌ಗಳ ನಿರ್ಲಕ್ಷ್ಯದಿಂದಾಗಿ ಎಚ್‌ಆರ್‌ಪಿ ಸಂತ್ರಸ್ತರಿಗೆ ಮಂಜೂರಾಗಿದ್ದ ದಲಿತರ ಭೂಮಿ

Team Udayavani, Sep 26, 2019, 7:30 PM IST

26-Sepctember-23

ಸುಧೀರ್‌ ಎಸ್‌.ಎಲ್‌
ಸಕಲೇಶಪುರ:
ತಾಲೂಕಿನಲ್ಲೆಡೆ ಕೇವಲ ಹೇಮಾವತಿ ಮುಳುಗಡೆ ಯೋಜನೆಯ ಪುನರ್ವಸತಿ ಯೋಜನೆ (ಎಚ್‌ಆರ್‌ಪಿ) ಹಗರಣಗಳ ಸುದ್ದಿಗಳೇ ಹೆಚ್ಚಾಗಿದ್ದು, ಈ ನಡುವೆ ಹೇಮಾವತಿ ಪುರ್ನವಸತಿ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ್‌ ಗೌಡ ಎಚ್‌ ಆರ್‌ಪಿಯಿಂದ ನೋವುಂಡ ಕೆಲವು ಬಡ ದಲಿತ ಕುಟುಂಬಗಳಿಗೆ ಬೆಳಕು ತೋರಿದ್ದಾರೆ.

ತಾಲೂಕಿನ ಯಸಳೂರು ಹೋಬಳಿ, ಹೇರೂರು ಗ್ರಾಮದ ಸ.ನಂ.49ರಲ್ಲಿ ಹೇಮಾವತಿ ಜಲಾಶಯ ಯೋಜನೆ 2012- 13ನೇ ಸಾಲಿನಲ್ಲಿ ಮುಳುಗಡೆ ಸಂತ್ರಸ್ತ ರಾದ ಜಿ.ಟಿ.ಹರೀಶ್‌ ಬಿನ್‌ ತಿಮ್ಮೇಗೌಡ, ಶೋಭಾ ಕೋಂ ತಿಮ್ಮೇಗೌಡ, ಚನ್ನಕೇಶವ ಬಿನ್‌  ಟ್ಟಸ್ವಾಮಿಗೌಡ, ಟಿ.ಎಚ್‌.ಪುಷ್ಪಾ ಕೋಂ ತಿಮ್ಮಪ್ಪಗೌಡ, ಯೋಗೇಶ್‌ ಬಿನ್‌ ರಂಗೇಗೌಡ, ಎಸ್‌.ಆರ್‌.ಮಂಜುನಾಥ್‌ ಬಿನ್‌ ರಾಜೇಗೌಡ ಅವರಿಗೆ ತಲಾ 4 ಎಕರೆಯಂತೆ ಎಚ್‌ಆರ್‌ಪಿ ಯಲ್ಲಿ ಜಮೀನು ಮಂಜೂರಾತಿ ಮಾಡಲಾಗಿ ಜೊತೆಗೆ ಮಂಜೂರಾತಿಯಂತೆ ಸಾಗುವಳಿ ಪತ್ರ ನೀಡಿ ಖಾತೆ ಮಾಡಲಾಗಿತ್ತು. ಫ‌ಲಾನುಭವಿಗಳು ತಮಗೆ ಮಂಜೂರಾದ ಜಾಗದಲ್ಲೇ ಭೂಮಿ ಸಾಗುವಳಿ ಮಾಡುತ್ತಿದ್ದರೂ ಸರ್ವೆಯರ್‌ಗಳು ಹಣ ಪಡೆದು ಕೂತಲ್ಲೇ ಸರ್ವೆ ಸ್ಕೆಚ್‌ ಮಾಡಿದ್ದರು.

ವಾಸ್ತವವಾಗಿ ಗ್ರಾಮದ ಸರ್ವೆ ನಂ. 49ರಲ್ಲಿ ಪರಿಶಿಷ್ಟ ಜಾತಿಯ ಗೌರಮ್ಮ ಕೋಂ ನಿಂಗಯ್ಯ, ಹುಲ್ಲುಕೊಡಯ್ಯ ಬಿನ್‌ ಕೋಮರಯ್ಯ, ಕೃಷ್ಣಯ್ಯ ಬಿನ್‌ ತಿಪ್ಪಯ್ಯ, ವಿಶಾಲ ಕೋಂ ರಮೇಶ್‌ ಮತ್ತು ಹೊನ್ನಮ್ಮ ಕೋಂ ರಾಜಯ್ಯ ಅವರು ತಲಾ 3 ಎಕರೆಯಂತೆ ಸುಮಾರು 60-70 ವರ್ಷದಿಂದಲೂ ಸದರಿ ಸರ್ವೆ ನಂಬರ್‌ ಜಾಗದಲ್ಲಿ ಕಾಫಿ ಸಾಗುವಳಿ ಮಾಡಿಕೊಂಡಿದ್ದು, ಈ ಜಾಗಕ್ಕೆ ಮಂಜೂರಾತಿಗಾಗಿ ನಮೂನೆ -53 ರಲ್ಲಿ ಕಂದಾಯ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಶಾಸಕರ ನೇತೃತ್ವದ ಭೂಮಂಜೂರಾತಿ ಸಮಿತಿಯ 1ನೇ ಸಭೆಯಲ್ಲಿ ಮಂಜೂರು ಮಾಡಿಸಿಕೊಂಡಿದ್ದರು. ಸ.ನಂ.49ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ದಲಿತರು ಸ್ವಾಧೀನ ಹೊಂದಿರುವ ಸ್ಥಳವನ್ನು ಮಂಜೂರಾತಿ ಮಾಡಲಾಗಿದ್ದು ಇದರಿಂದ ದಲಿತ ಕುಟುಂಬಗಳು ಕಳೆದ ಹಲವಾರು ತಿಂಗಳಿನಿಂದ ಆತಂಕದ ಪರಿಸ್ಥಿತಿ
ಎದುರಿಸುತ್ತಿತ್ತು. ಹಲವು ಬಾರಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಸಹ ಯಾರು ಸ್ಪಂದಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮುಗ್ಧ ದಲಿತ ಕುಟುಂಬಗಳ ಸಮಸ್ಯೆಯ ಕುರಿತು ಹೇಮಾವತಿ ಪುರ್ನವಸತಿ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ್‌ ಗೌಡರವರ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶ್ರೀನಿವಾಸಗೌಡರ ಎದುರು ಹಾಜರಿದ್ದ ಬಡ ದಲಿತ ಕುಟುಂಬದ ಮಹಿಳೆಯರು ಕಣ್ಣೀರು ಹಾಕಿ ತಮ್ಮ ನೋವನ್ನು ಹೇಳಿಕೊಳ್ಳಲು ಮುಂದಾದಾಗ ಎಲ್ಲರನ್ನೂ ಅಧಿಕಾರಿ ಸಂತೈಸಿದರು. ದಲಿತರ ಜಾಗದಲ್ಲಿ ಭೂಮಿ ಪಡೆದವರನ್ನು ಹಾಗೂ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬದವರು ತಮ್ಮ ಕಚೇರಿಗೆ ಬರಲು ಹೇಳಿದ್ದು, ದಲಿತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ದಲಿತರಿಗೆ ನೀಡಿ ಸಂತ್ರಸ್ತರಿಗೆ ಇದೇ ಸರ್ವೆ ನಂ.ನಲ್ಲಿ ನಲ್ಲಿ ಬೇರೆ ಕಡೆ ನೀಡುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ಕ್ಯಾಪ್ಟನ್‌ ಶ್ರೀನಿವಾಸ ಗೌಡರವರ ಈ ಕಾರ್ಯದಿಂದ ನೊಂದ ದಲಿತ ಕುಟುಂಬಗಳಲ್ಲಿ ಹೊಸ ಆಶಾ ಕಿರಣ ಕಂಡು ಬಂದಿದೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.