ವೇದಗಳಲ್ಲೂ ತಾಯಿಗೆ ಮೊದಲ ಸ್ಥಾನ
ತಾಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ •ಸಂಗೀತದಿಂದ ತನುಮನ ಶುದ್ಧ
Team Udayavani, Jun 23, 2019, 4:20 PM IST
ಸಂಡೂರು: ಪಟ್ಟಣದ ತಾಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದಲ್ಲಿ ಡಾ.ವೃಷಬೇಂದ್ರ ಆಚಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಡೂರು: ವೇದಗಳ ಕಾಲದಿಂದಲೂ ಸಹ ಸ್ತ್ರೀಯನ್ನು ಮಾತೆ ಎಂದು ಪ್ರಥಮ ಸ್ಥಾನ ನೀಡಿದ್ದೇವೆ. ಮಾತೃದೇವೋಭವ, ಪಿತೃದೇವೋ ಭವ, ಆಚಾರ್ಯದೇವೋ ಭವ ಎನ್ನುವಂತೆ ಜಗನ್ಮಾತೆ ತಾಯಮ್ಮ ಪ್ರತಿಷ್ಠಾಪನೆಯ ವಾರ್ಷಿಕೋತ್ಸವವನ್ನು ಸಂಗೀತ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಾ. ವೃಷಬೇಂದ್ರ ಆಚಾರ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಯಮ್ಮ ದೇವಸ್ಥಾನದ ಅವರಣದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವು ವೈಚಾರಿಕ, ಭೌತಿಕವಾಗಿಯೂ ಸಹ ಪುರಾತನ ಕಾಲದಿಂದಲೂ ಅಮ್ಮನ ಹಬ್ಬಗಳನ್ನು ಮಾಡುತ್ತಾ ಬಂದಿದ್ದೇವೆ. ಜಗತ್ತಿನಲ್ಲಿ ಇಂದು ಯಾವುದೇ ಕೆಟ್ಟ ಮಗನನ್ನು ಕಾಣಬಹುದು. ಆದರೆ ಕೆಟ್ಟ ತಾಯಿಯನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬರೂ ಸಹ ಅಮ್ಮನ ಮಡಿಲಿನಲ್ಲಿ ಬೆಳೆದವರು. ಅವರ ಆರೈಕೆಯಲ್ಲಿ ಕಲಿತವರು. ದೇವಿ ತಾಯಮ್ಮನ ಅಶೀರ್ವಾದವೂ ಪ್ರತಿಯೊಬ್ಬರಿಗೆ ಇರಲಿ ಎಂದರು.
ತಬಲಾವಾದಕ ಎಚ್.ಕುಮಾರಸ್ವಾಮಿ ಮಾತನಾಡಿ, ಪೂಜೆಯನ್ನು ನಾವು ಸಂಗೀತದ ಮೂಲಕ ಮಾಡುತ್ತೇವೆ. ಕಾರಣ ನಮ್ಮ ತನುಮನಗಳು ಶುದ್ಧವಾಗಲೆಂದು, ಅಲ್ಲದೆ ಅದು ವೈಜ್ಞಾನಿಕವಾಗಿಯೂ ಸಹ ನಮ್ಮ ಆರೋಗ್ಯ ರಕ್ಷಿಸುತ್ತದೆ. ಯೋಗ ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಸಂಗೀತವೂ ಸಹ ನಮ್ಮ ಆರೋಗ್ಯ ರಕ್ಷಿಸುತ್ತದೆ ಎಂದರು.
ಸಂಗೀತ ಶಿಕ್ಷಕ ಟಿ.ವೆಂಕಟೇಶ್, ಲೋಕೇಶ್, ಕಲಾವಿದರೂ, ನಿವೃತ್ತ ಪ್ರಾಚಾರ್ಯ ಡಾ. ವೃಷಬೇಂದ್ರ ಅಚಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಚ್.ಕುಮಾರಸ್ವಾಮಿ ತಬಲಾ ಸಾಥ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ