Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!
ಬೆಳಗಾದರೆ ವಿಶ್ವ ವನ್ಯ ಜೀವಿ ಸಪ್ತಾಹ
Team Udayavani, Oct 1, 2023, 6:15 PM IST
ಸಾಗರ: ಸಾಗರದ ಹೊರವಲಯದ ರಾಮನಗರದ ಪಕ್ಕದ ಕಾಡಿನಲ್ಲಿ ಅಪರೂಪದ ಹೆಬ್ಬಾವೊಂದು ಭರ್ಜರಿ ನರಿಯೊಂದನ್ನು ಭೇಟಿ ಮಾಡಿ ನುಂಗಲು ಹೊರಟ ಕ್ಷಣದಲ್ಲಿ ಜನ ಗುಂಪು ಸೇರಿದ್ದರಿಂದ ಭಯಗೊಂಡ ಹಾವು ತನ್ನ ಬೇಟೆಯನ್ನು ತ್ಯಜಿಸುವಂತಾದ, ಇತ್ತ ನರಿಯೂ ಸಾವು ಕಂಡ ಹಾಗೂ ಇದರಿಂದ ಆಹಾರ ಸರಪಳಿಯಲ್ಲಿ ಹೆಬ್ಬಾವಿನ ನಾಲ್ಕು ತಿಂಗಳ ಆಹಾರ ಕಳೆದುಕೊಂಡಂತಹ ಪ್ರಸಂಗದಿಂದ ಪರಿಸರ ಪ್ರೇಮಿಗಳು ಬೇಸರಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಹೆಬ್ಬಾವು ಮಲೆನಾಡಿನಲ್ಲಿ ಅಪರೂಪದ ನರಿಯೊಂದನ್ನು ಹಿಡಿದು ಉಸಿರುಗಟ್ಟಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಜನರು ಗಮನಿಸಿದ್ದಾರೆ. ಇನ್ನೇನು ಅದು ತನ್ನ ಭೋಜನವನ್ನು ತಿನ್ನಬೇಕು ಅನ್ನುವಷ್ಟರಲ್ಲಿ ನಿಧಾನವಾಗಿ ಅಲ್ಲಿ ಜನ ಸೇರಿದ್ದಾರೆ. ಗುಂಪಿನ ಗೌಜಿಗೆ ವಿಚಲಿತವಾದ ಹಾವು ಬೇಟೆಯನ್ನು ಬಿಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದವರು ಹೆಬ್ಬಾವನ್ನು ಹಿಡಿಯುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಹೆಬ್ಬಾವು ಅಲ್ಲಿಂದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪ್ಪಳಿ ಲಿಂಗದಹಳ್ಳಿಯ ಸಿ.ಗುರುಮೂರ್ತಿ ಅವರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡಿದೆ. ತೋಟದ ಮಾಲೀಕರು ಅರಣ್ಯ ಇಲಾಖೆಗೆ ಫೋನ್ ಮಾಡಿ ರಕ್ಷಣೆಗೆ ಕೋರಿದ ಹಿನ್ನೆಲೆಯಲ್ಲಿ ಅವರು ಅದನ್ನು ಹಿಡಿಸಿ ಕಾಡಿಗೆ ಬಿಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಅಕ್ಟೋಬರ್ ಎರಡರಿಂದ ಎಂಟರವರೆಗೆ ವಿಶ್ವ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಇಂತಹ ಸಂದರ್ಭಲ್ಲಿ ರಾಮನಗರದಲ್ಲಿ ಜನರ ಗುಂಪು ಸುಮ್ಮನೆ ಇದ್ದಿದ್ದರೆ ಹೆಬ್ಬಾವು ತನ್ನ ಬೇಟೆಯನ್ನು ಭಕ್ಷಣೆ ಮಾಡುತ್ತಿತ್ತು ಹಾಗೂ ಮತ್ತೆ ನಾಲ್ಕು ತಿಂಗಳು ಅದಕ್ಕೆ ಆಹಾರದ ಅವಶ್ಯಕತೆ ಇರುತ್ತಿರಲಿಲ್ಲ. ಗುಂಪು ಗಲಾಟೆ ಮಾಡಿದ್ದರಿಂದ ಹೆಬ್ಬಾವು ತನ್ನ ಬೇಟೆಯನ್ನು ಬಿಟ್ಟು ಹೊರಟಿತು. ಆ ಹೆಬ್ಬಾವಿಗೆ ಇನ್ನೊಂದು ಬೇಟೆ ಸಿಗಲು ಅದೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ. ಸತ್ತು ಹೋದ ನರಿಯನ್ನು ಇಲಾಖೆಯವರು ಸುಟ್ಟು ಹಾಕಿದರು.
ವನ್ಯಜೀವಿಗಳ ಕುರಿತಾಗಿ ನಮ್ಮಲ್ಲಿ ಇನ್ನೂ ಜಾಗೃತಿ ಇಲ್ಲವೆಂದು ಈ ಘಟನೆ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ