Sunset View Point ಆಗುಂಬೆಯಲ್ಲಿ ಕೇಳುತ್ತಿದ್ಯಾ ಜಣ ಜಣ ಕಾಂಚಾಣದ ಸದ್ದು!?
Team Udayavani, Aug 16, 2023, 7:29 PM IST
ತೀರ್ಥಹಳ್ಳಿ : ಪರಿಸರ ಪ್ರೇಮಿಗಳಿಂದ ಹಿಡಿದು ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿರುವ
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಹೆಸರುವಾಸಿಯಾಗಿರುವ ಆಗುಂಬೆ ಘಾಟಿಯಲ್ಲಿ ಈಗ ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಅದರಲ್ಲೂ ಆಗುಂಬೆಯ ಸೂರ್ಯಾಸ್ತ ಮಾನ ವೀಕ್ಷಣಾ ಸ್ಥಳ ಸದ್ಯ ಪ್ರವಾಸಿಗರ ಹಾಟ್ ಫೇವರೆಟ್ ಸ್ಥಳವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಪ್ರವಾಸಿಗರು ವಾಹನವನ್ನು ಎಲ್ಲಿಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರದೇಶ ಕಾರ್ಕಳ ವನ್ಯ ಜೀವಿ ವಿಭಾಗಕ್ಕೆ ಒಳಪಟ್ಟಿರುತ್ತದೆ. ವಾಹನವನ್ನು ಮೇಲ್ಭಾಗದಲ್ಲಿ ನಿಲ್ಲಿಸಿ ಸೂರ್ಯಾಸ್ತಮಾನವನ್ನು ವೀಕ್ಷಣೆ ಮಾಡಬೇಕು.
ಆದರೆ ವಾಹನಗಳು ಸೂರ್ಯಾಸ್ತಮಾನ ಪ್ರದೇಶದಲ್ಲೇ ನಿಂತರು ಕೂಡ ಅಲ್ಲಿನ ತನಿಖಾಧಿಕಾರಿಗಳ ಕೊಠಡಿಯಲ್ಲಿರುವ ಸಿಬ್ಬಂದಿಗಳು ಪಾರ್ಕಿಂಗ್ ಬಗ್ಗೆ ಯಾವುದೇ ಚಾಕಾರು ಎತ್ತುತ್ತಿಲ್ಲ. ಈ ಪ್ರದೇಶದಲ್ಲಿ ಹಣವನ್ನು ಕೊಟ್ಟರೆ ಎಷ್ಟು ಹೊತ್ತು ಬೇಕಾದರೂ ವಾಹನ ನಿಲುಗಡೆ ಮಾಡಬಹುದು. ವಾಹನಗಳನ್ನು ಅಡ್ಡಾ ದಿಡ್ಡಿ, ಬೇಕಾಬಿಟ್ಟಿಯಾಗಿ ಆ ಪ್ರದೇಶದಲ್ಲಿ ನಿಲ್ಲುವುದರಿಂದ ಶಿವಮೊಗ್ಗ -ಉಡುಪಿಗೆ ಓಡಾಡುವ ವಾಹನಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ