ಆನಂದಪುರ: ಮೊಹರಂ ಆಚರಣೆ
Team Udayavani, Sep 22, 2018, 9:28 AM IST
ಆನಂದಪುರ: ಸಮೀಪದ ಆಚಾಪುರ ಗ್ರಾಪಂ ವ್ಯಾಪ್ತಿಯ ಇಸ್ಲಾಂಪುರ, ಮುರುಘಾಮಠ, ಆಚಾಪುರಗಳಲ್ಲಿ ಮೊಹರಂ
ಆಚರಿಸಲಾಯಿತು. ತ್ಯಾಗ- ಬಲಿದಾನದ ಸಂಕೇತವಾದ ಈ ಹಬ್ಬವನ್ನು ಏಳು ದಿನಗಳಿಂದ ಆಚರಿಸಲಾಯಿತು. ಇದರಲ್ಲಿ 6ನೇ ದಿನ ರಾತ್ರಿ ಕೆಂಡ ಹಾಯುವ ಮೂಲಕ ಕತ್ತಲ ರಾತ್ರಿಯನ್ನು ಆಚರಿಸುತ್ತಾರೆ. ಕೆಂಡ ಹಾಯ್ದ ನಂತರ ಸಾಮೂಹಿಕ ಅನ್ನ ಸಂರ್ತಪಣೆ ನಡೆಯುತ್ತದೆ. ಎಲ್ಲಾ ಭಕ್ತರು ಭಾಗವಹಿಸುತ್ತಾರೆ.
ಈ ಕತ್ತಲ ರಾತ್ರಿಯ ಪೂಜೆಯಲ್ಲಿ ಹಿಂದೆ ದೇವರಿಗೆ ಹರಕೆ ಮಾಡಿಕೊಂಡವರು ಹರಕೆಯನ್ನು ತೀರಿಸುತ್ತಾರೆ. ಹಿಂದೂ ಮತ್ತು ಮುಸ್ಲಿಮರು ಒಂದಾಗಿ ಸಂಭ್ರಮದಿಂದ ಆಚರಿಸುವಂತಹ ಹಬ್ಬವಾಗಿದ್ದು ಇದರಿಂದ ಹಿಂದೂ ಮತ್ತು
ಮುಸ್ಲಿಮರಲ್ಲಿ ಐಕ್ಯತೆಯ ಭಾವನೆ ಮೂಡಲಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ಬಲ್ ಖನ್ನಿ ಹೇಳಿದರು. ಶುಕ್ರವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೊಹರಂ ಉತ್ಸವ ಸಾಗಿದ್ದು ದೇವರಿಗೆ ಭಕ್ತರು ಸಕ್ಕರೆ, ಊದಿನಬತ್ತಿ ನೀಡಿ ಪೂಜೆ ಸಲ್ಲಿಸಿದರು. ಇಸ್ಲಾಂಪುರದ ಹಬ್ಬದ ಸಮಿತಿಯ ಕಾರ್ಯದರ್ಶಿ ನಬಿ, ಸದಸ್ಯರಾದ ಶಾಂತಕುಮಾರ್, ಗೌಸ್ ಬಷೀರ್, ಯೂಸೂಬ್, ಮಹಮದ್ ಗೌಸ್, ಮಹಮದ್ ಆಲಿ, ಅಸ್ಲಾಂ, ತಾಪಂ ಸದಸ್ಯೆ ಆನಂದಿ ಲಿಂಗರಾಜ್, ಆಚಾಪುರ ಗ್ರಾಪಂ ಉಪಾಧ್ಯಕ್ಷೆ ಮೇನಕಾ, ಸದಸ್ಯರಾದ ಸುರೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್