ಅಡಿಕೆ ಕೊಳೆರೋಗ ತಡೆಗೆ ಜಾಗ್ರತೆ ವಹಿಸಿ: ಕಿರಣ್ಕುಮಾರ್ ಸಲಹೆ
Team Udayavani, Jul 18, 2022, 4:17 PM IST
ಸಾಗರ: ಹವಮಾನ ವೈಪರೀತ್ಯದಿಂದ ಅಡಿಕೆ ಉದುರುವ ಸಂಭವ ಇದೆ. ಮಳೆ ವಿಪರೀತ ಬಂದಿರುವುದರಿಂದ ಕೊಳೆರೋಗ ಬರುವ ಸಾಧ್ಯತೆ ಇದ್ದು ಬೆಳೆಗಾರರು ಸೂಕ್ತ ಮುಂಜಾಗ್ರತೆ ವಹಿಸುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕಿರಣ್ಕುಮಾರ್ ತಿಳಿಸಿದರು.
ತಾಲೂಕಿನ ವರದಾಮೂಲದಲ್ಲಿ ಸೋಮವಾರ ಕೊಳೆರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಬಿಡುವಿಲ್ಲದೆ ಮಳೆ ಬರುತ್ತಿರುವುದರಿಂದ ಕೊಳೆರೋಗ ಹೆಚ್ಚುವ ಮತ್ತು ಅಡಿಕೆ ಮಿಡಿ ಉದುರುವ ಸಾಧ್ಯತೆ ಕಂಡು ಬಂದಿದೆ. ತಾಲೂಕಿನ ಬೇರೆಬೇರೆ ಭಾಗಗಳಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಇಲಾಖೆ ವತಿಯಿಂದ ರೈತಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಕೂಲಿಕಾರ್ಮಿಕರ ಕೊರತೆಯಿಂದಾಗಿ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಣೆಗೆ ಸಮಸ್ಯೆ ಆಗಬಾರದು ಎನ್ನುವ ದೃಷ್ಟಿಯಿಂದ ದೋಟಿಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಕೊಳೆ ಕಾಣಿಸಿಕೊಂಡ ತೋಟಗಳಿಗೆ ತಕ್ಷಣ ಮೈಲುತುತ್ತವನ್ನು ಇಲಾಖೆಯ ಸೂಚನೆಯಂತೆ ಸಿಂಪಡಣೆ ಮಾಡಬೇಕು. ಪ್ರಸ್ತುತ ಕೊಳೆಔಷಧಿ ಸಿಂಪಡಣೆಗೆ ದೋಟಿ ಹೆಚ್ಚು ಉಪಯುಕ್ತವಾಗಿದೆ. ಮಹಿಳೆಯರಿಗೆ, ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ50, ಇತರೆಯವರಿಗೆ ಶೇ. 40 ಸಬ್ಸಿಡಿ ದರದಲ್ಲಿ ದೋಟಿ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಉಲ್ಲಾಸ್, ಗ್ರಾಮಸ್ಥರಾದ ವ.ಶಂ.ರಾಮಚಂದ್ರ ಭಟ್, ಮಂಜುನಾಥ್, ವರದಭಟ್ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು