ಸಾಗರ: ವಿದ್ಯಾರ್ಥಿ ನಿಲಯದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು
Team Udayavani, Jun 5, 2022, 12:56 PM IST
ಸಾಂದರ್ಭಿಕ ಚಿತ್ರ
ಸಾಗರ: ಇಲ್ಲಿನ ವರದಹಳ್ಳಿ ರಸ್ತೆಯಲ್ಲಿನ ಈಡಿಗ ಸಮುದಾಯ ಭವನದ ಸಮೀಪದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಿಲ್ಲಿಸಿದ್ದ ವಿದ್ಯಾರ್ಥಿಯೊಬ್ಬನ ದ್ವಿಚಕ್ರ ವಾಹನ ಕಳ್ಳತನ ಆಗಿದೆ.
ಮೇ 31 ರಂದು ರಾತ್ರಿ ಪ್ರಜ್ವಲ್ ತಮ್ಮ ದ್ವಿಚಕ್ರ ವಾಹನವನ್ನು ವಸತಿ ನಿಲಯದ ಆವರಣದಲ್ಲಿ ನಿಲ್ಲಿಸಿದ್ದರು. ಜೂ. 1 ರಂದು ಬೆಳಿಗ್ಗೆ ನೋಡಿದಾಗ ವಾಹನ ಕಳ್ಳತನ ಆಗಿರುವ ವಿಷಯ ತಿಳಿದುಬಂದಿದೆ. ಪರಿಚಿತರಲ್ಲಿ ವಿಚಾರಿಸಿದರೂ ಮಾಹಿತಿ ಸಿಗದ ಕಾರಣ ಪ್ರಜ್ವಲ್ ನಗರ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.
ದೊಂಬೆ ಗ್ರಾಮದಲ್ಲಿ ಅಡಕೆ ಕಳ್ಳತನ :
ಸಾಗರ: ತಾಲೂಕಿನ ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಬೆ ಗ್ರಾಮದಲ್ಲಿ ಅಡಕೆ ಕಳ್ಳತನ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಗಜಾನನ ಎಂಬುವವರಿಗೆ ಸೇರಿದ ಕೆಂಪು, ಸಿಪ್ಪೆಗೋಟು ವಿಧಗಳ ಒಟ್ಟು ಆರು ಮುಕ್ಕಾಲು ಕ್ವಿಂಟಾಲ್ ಅಡಕೆ ಕಳ್ಳತನ ಆಗಿದೆ. ಮೇ 31ರಂದು ಎದುರು ಇಟ್ಟಿದ್ದ ಅಡಕೆ ಕಳ್ಳತನ ಆಗಿರುವುದು ಶನಿವಾರ ತಿಳಿದುಬಂದಿದೆ. ಅಂದಾಜು 2.40 ಲಕ್ಷ ರೂ. ಮೌಲ್ಯದ ಅಡಕೆ ಕಳ್ಳತನ ಆಗಿದೆ ಎಂದು ಗಜಾನನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್
ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್ಗೆ ಕಳುಹಿಸಿ: B.Y. ರಾಘವೇಂದ್ರ
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ