ಸಬೂಬು ಹೇಳದೆ ಬೆಳೆ ವಿಮೆಯನ್ನು ವಿತರಿಸಬೇಕು: ಮಧು ಬಂಗಾರಪ್ಪ
Team Udayavani, Jul 13, 2022, 6:15 PM IST
ಸಾಗರ: ಬೆಳೆ ವಿಮೆ ಕಟ್ಟುವ ದಿನಾಂಕವನ್ನು ಮುಂದೂಡಬೇಕು ಹಾಗೂ ಬೆಳೆ ವಿಮೆಯನ್ನು ರೈತರಿಗೆ ಸಬೂಬು ಹೇಳದೆ ವಿತರಿಸುವಂತಾಗಬೇಕು ಎಂದು ಮಾಜಿ ಸೊರಬ ಶಾಸಕ ಮಧು ಬಂಗಾರಪ್ಪ ಹೇಳಿದರು.
ಬುಧವಾರ ತಾಲೂಕಿನ ಬರದವಳ್ಳಿ, ಕಾನ್ಲೆ, ಬೀಸನಗದ್ದೆ, ಮುಂತಾದ ನೆರೆಪೀಡಿತ ಹಳ್ಳಿಗಳಿಗೆ ಭೇಟಿ ನೀಡಿ ತಾಳಗುಪ್ಪದ ಗುಂಡಿಬೈಲ್ ಗದ್ದೆ ಮುಳುಗಡೆ ವೀಕ್ಷಿಸಿ ಮಾತನಾಡಿ, ಮಲೆನಾಡಿನ ಮಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದು ಪ್ರಕೃತಿಯ ನಿಯಮ, ಆದರೆ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡು ಅನಾಹುತ ತಪ್ಪಿಸುವ ಕೆಲಸ ಮಾಡಬೇಕು. ಜನರಿಗೆ ಪರಿಹಾರ ಕೊಡುವ ಕೆಲಸ ಸರ್ಕಾರ ಜನಪ್ರತಿನಿಧಿಗಳು ಮಾಡಬೇಕು. ಅದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ತಾಳಗುಪ್ಪ ಹೋಬಳಿಯಲ್ಲಿ ಬೆಳೆ ವಿಮೆ ಸಮರ್ಪಕ ವಿಂಗಡನೆಯಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೆರೆ ಪರಿಹಾರವನ್ನಾದರೂ ಕಣ್ಣೊರೆಸುವ ತಂತ್ರವನ್ನಾಗಿಸದೆ ಅಧಿಕಾರಿಗಳು ಸಮರ್ಪಕವಾಗಿ ವಿತರಿಸಬೇಕು ಎಂದರು.
ಬೆಳೆವಿಮೆ ಕುಂಟುನೆಪ ಹೇಳಿ ಇಲ್ಲವಾಗಿಸುವ ಕೆಲಸ ನಡೆಯಿತ್ತದೆ. ನಾನು ಎಂಎಲ್ಎ ಆಗಿದ್ದಾಗ ಕಂಪನಿಗಳ ಜತೆ ಮಾತನಾಡಿ ಸಮರ್ಪಕ ಪರಿಹಾರ ನೀಡುವಂತೆ ಮಾಡಿದ್ದೆ. ಅದೇ ರೀತಿ ರೈತರ ಸಂಕಷ್ಟಕ್ಕೆ ಶಾಸಕರು ಸ್ಫಂದಿಸಬೇಕು. ನೆರೆ ಹತ್ತುವ ಜಾಗ ಗುರುತಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೇವಲ ಪ್ರತೀ ಮಳೆಗಾಲಕ್ಕೂ ಸುಳ್ಳು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡಿದರೆ ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದರು.
ನೆರೆ ಪರಿಹಾರ ವೀಕ್ಷಣೆಯಲ್ಲಿ ಗಣಪತಿ ಹುಲ್ತಿಕೊಪ್ಪ, ಅಶೋಕ್ ಬರದವಳ್ಳಿ, ಶಿವಮೂರ್ತಿ, ಲೋಕೇಶ್ ಗಾಳಿಪುರ, ಸಿರಿವಂತೆ ಗ್ರಾಪಂ ಅಧ್ಯಕ್ಷ ಮನೋಜ್ ಜನ್ನೆ ಹಕ್ಲು, ಮಾದೇವಪ್ಪ, ರಾಜೇಶ್ ಸೈದೂರು, ಮಂಜುನಾಥ ಕಗ್ಗೆ, ಅಣ್ಣಪ್ಪ ಕುಗ್ವೆ, ಫ್ರಾನ್ಸಿಸ್ ಲೂಪೀಸ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ