ಭಗವಂತ ಎಲ್ಲೆಡೆ ಇದ್ದಾನೆ, ಭಗವಂತ ಇರದ ಜಾಗವಿಲ್ಲ : ಪೇಜಾವರ ಶ್ರೀಗಳು
Team Udayavani, Nov 24, 2022, 9:45 PM IST
ತೀರ್ಥಹಳ್ಳಿ: ಗ್ರಾಮಕ್ಕೆ, ನಾಡಿಗೆ, ದೇಶಕ್ಕೆ ಉಳಿತಾಗಲು ಭಗವಂತನ ಆರಾಧನೆ ಮುಖ್ಯ. ಪ್ರತಿಯೊಬ್ಬರು ಧರ್ಮದ, ದೇವರ ಆರಾಧನೆ ಯೊಂದಿಗೆ ಏಕತೆ, ಒಗ್ಗಟ್ಟಿನಿಂದ ಸಾಗಿದರೆ ದೇವಾಲಯ ನಿರ್ಮಾಣ ಸಾಧ್ಯ ಎಂದು ಉಡುಪಿಯ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಆಶೀರ್ವದಿಸಿದರು.
ತಾಲೂಕಿನ ಹೊದಲ ಅರಳಾಪುರ ಗ್ರಾಮದ ಪುರಾಣ ಪ್ರಸಿದ್ದ ಶ್ರೀ ಶಂಕರೆಶ್ವರ, ಶ್ರೀ ಲಕ್ಷ್ಮೀನಾರಾಯಣ, ಮತ್ತು ಶ್ರೀಹನುಮಂತ ದೇವಾಲಯದ ಜೀರ್ಣೋದ್ದಾರ ಸಮಾರಂಭದಲ್ಲಿ ಶಿಲಾನ್ಯಾಸ, ಶಂಕುಸ್ಥಾಪನೆಯೊಂದಿಗೆ ಅಡಿಗಲ್ಲಿಟ್ಟು ಮಾತನಾಡಿದ ಅವರು ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ನಮ್ಮ ಪ್ರಯತ್ನದ ಶ್ರಮದೊಂದಿಗೆ ದೇವರ ಅನುಗ್ರಹ ಮುಖ್ಯ, ಭಗವಂತ ಎಲ್ಲೆಡೆ ಇದ್ದಾನೆ, ಇರದ ಜಾಗವಿಲ್ಲ, ಭಗವಂತನನ್ನು ಮಂದಿರದಲ್ಲಿ ಪೂಜಿಸಿದರೆ ಗ್ರಾಮದ ಪ್ರತಿಯೊಬ್ಬರಿಗೂ ಉಳಿತಾಗುತ್ತದೆ ಎಂದರು.
ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಮಾತನಾಡಿ, ಪೇಜಾವರದ ಶ್ರೀ ಗಳ ಆಶೀರ್ವದದಿಂದ ನಾವು ಮಾಡುವ ಕೆಲಸಗಳು ಯಶಸ್ವಿಯಾಗುತ್ತದೆ. ಇಂದು ಧರ್ಮದ ಹೆಸರಿನಲ್ಲಿ ಮಾನವ ವಿರೋಧಿ ಕೃತ್ಯಗಳು ನೆಡೆಯುತ್ತಿದೆ. ಸಮಾಜದಲ್ಲಿಂದು ಆಘಾತಕಾರಿ ಬೆಳವಣಿಗೆ ಯಾಗಬಾರದು ಎಂದರು. ಕರಿಮನೆಯ ಈ ದೇವಾಲಯಕ್ಕೂ ನನಗೂ ಅವಿನಾಭಾವ ಸಂಭಂದವಿದೆ. ಹಿಂದೆ ನನ್ನ ಗುರುಗಳಾದ ದಿ.ತಾರಗೊಳ್ಳಿ ನಾಗರಾಜರಾಯರು ಈ ದೇವಾಲಯದ ಕಟ್ಟಡವೊಂದನ್ನು ನಿರ್ಮಿಸುವಾಗ ನಾನು ಬಂದು ಹೋಗುತ್ತಿದ್ದೆ. ಈ ದೇವಾಲಯದ ಮುಂದಿನ ಅಭಿವೃದ್ಧಿಗೆ ಸರ್ಕಾರದ ಕಡೆಯಿಂದ ಹೆಚ್ಚಿನ ಅನುದಾನ ನೀಡುವಾಗಿ ಭರವಸೆ ನೀಡಿದರು.
ಅರ್ಚಕ ಪ್ರಭಾಕರ್ ಭಟ್ ಕರಿಮನೆಯವರ ವೇದಘೋಷದೊಂದಿಗೆ ಕಾರ್ಯಕ್ರಮ ನೆರವೇರಿತು. ಶಿವಕುಮಾರ್ ಕರಿಮನೆ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್