Holehonnur :ಬಸ್ ನಿಲ್ದಾಣದಲ್ಲೇ ಮಹಿಳೆಯ 81 ಗ್ರಾಂ ಚಿನ್ನಾಭರಣ ಮಾಯ!!
ನಾವು ಪೊಲೀಸರು ಎಂದು ಇಬ್ಬರಿಂದ ಕೃತ್ಯ... ಪೇಪರ್ ಬಿಚ್ಚಿ ನೋಡಿದಾಗ ಇದ್ದದ್ದು ಕಲ್ಲುಗಳು!!
Team Udayavani, Feb 29, 2024, 8:07 PM IST
ಹೊಳೆಹೊನ್ನೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಖತರ್ನಾಕ್ ಗಳಿಬ್ಬರು ಮಹಿಳೆಯೊಬ್ಬರ 81 ಗ್ರಾಂ ಚಿನ್ನಾಭರಣವನ್ನು ಲೂಟಿ ಮಾಡಿದ ಘಟನೆ ಫೆ.27 ರಂದು ನಡೆದಿದೆ.
ಹಾರಹಳ್ಳಿಯ ಗೃಹಿಣಿ ಕುಸುಮ ಅರಹತೊಳಲು ಗ್ರಾಮಕ್ಕೆ ಹೋಗಲು ಶಿವಮೊಗ್ಗಕ್ಕೆ ಬಂದು ಕೈಮರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಾಗ ಇಬ್ಬರು ಅಪರಿಚಿತರು ಬಂದು ನಾವು ಪೊಲೀಸರು ಎಂದು ಹೇಳಿಕೊಂದು, ಇಲ್ಲಿ ತುಂಬಾ ಕಳ್ಳರು ಇದ್ದಾರೆ. ಇಷ್ಟೊಂದು ಒಡವೆ ಹಾಕಿಕೊಂಡು ಬಂದಿದ್ದೀರಿ. ಒಡವೆಯನ್ನು ಬಿಚ್ಚಿ ಬ್ಯಾಗಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಆಗ ಮಹಿಳೆ ತನ್ನ ಕೊರಳಲ್ಲಿದ್ದ 43 ಗ್ರಾಂ. ಮಾಂಗಲ್ಯಸರ, ಚೈನು ಮತ್ತು ಇನ್ನೊಂದು 38 ಗ್ರಾಂ ನ ಸರ ಬಿಚ್ಚಿ ಕೊಟ್ಟಿದ್ದು, ಅಪರಿಚಿತರು ಈ ಪೇಪರಿಗೆ ಹಾಕಿ ಎಂದು ಮಡಚಿ ದುಂಡುಗೆ ಮಾಡಿ ಕೊಟ್ಟಿದ್ದಾರೆ.
ಅಹರತೊಳಲು ಕಡೆ ಬಸ್ಸನ್ನು ಹತ್ತಿ ಕುಸುಮ ಸರವನ್ನು ಕೊರಳಿಗೆ ಹಾಕಿ ಕೊಳ್ಳೋಣ ಎಂದು ಪೇಪರ್ ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಸಣ್ಣ ಸಣ್ಣ ಕಲ್ಲುಗಳು ಇರುವುದು ಕಂಡು ಗಾಬರಿಗೊಂಡಿದ್ದಾರೆ. ಎಲ್ಲಾ ಕಡೆ ನೋಡುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ. ಬ್ಯಾಗನ್ನೆಲ್ಲಾ ಹುಡುಕಾಡಿದರೂ ಸರಗಳು ಕಾಣಿಸಲಿಲ್ಲ.
ಆಭರಣಗಳನ್ನು ಬಿಚ್ಚಿಸಿ ಪೇಪರ್ ನಲ್ಲಿ ಹಾಕುವ ರೀತಿ ನಟನೆ ಮಾಡಿ ಮಹಿಳೆಗೆ ಮೋಸ ಮಾಡಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟು 3,28,000 ರೂ. ಮೌಲ್ಯದ 81 ಗ್ರಾಂ ಚಿನ್ನಾಭರಣವನ್ನ ಪೊಲೀಸರಂತೆ ನಟಿಸಿ ವಂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು