Vijayendra ರಾಜೀನಾಮೆ ನೀಡಿದರೆ ಕಣದಿಂದ ಹಿಂದಕ್ಕೆ: ಕೆ.ಎಸ್.ಈಶ್ವರಪ್ಪ
Team Udayavani, Apr 8, 2024, 12:32 AM IST
ಶಿವಮೊಗ್ಗ: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಬಳಿಕ ಬಿಜೆಪಿ ಸೇರುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈಶ್ವರಪ್ಪ ಕೇಂದ್ರದ ನಾಯಕರ ಜತೆ ಮಾತನಾಡು ತ್ತಿದ್ದಾರೆ ಎಂದು ಹೇಳಲು ವಿಜಯೇಂದ್ರರಿಗೆ ಅಧಿ ಕಾರ ಕೊಟ್ಟವರು ಯಾರು? ನಾನು ಪಕ್ಷ ಬಿಟ್ಟು ಹೋಗಿಲ್ಲ. ಸ್ಪರ್ಧಿಸಿದರೆ ಪಕ್ಷದಿಂದ ಉಚ್ಛಾಟನೆ ಮಾಡಬಹುದಷ್ಟೇ. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಹೋಗಿ ಮತ್ತೆ ಪಕ್ಷಕ್ಕೆ ಬಂದು ಟಿಕೆಟ್ ತೆಗೆದುಕೊಂಡಿದ್ದಾರೆ. ನಾನು ಹಾಗೇನೂ ಮಾಡಿಲ್ಲ. ಈ ಬಾರಿ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದರು.
ನಾನು ಈಗಲೂ ಕೂಡ ಬಿಜೆಪಿ ಕಾರ್ಯಕರ್ತ. ವಿಜಯೇಂದ್ರ ನನ್ನ ಸ್ಪರ್ಧೆ ಬಗ್ಗೆ ಹೇಳುವ ಮೊದಲು ಈಶ್ವರಪ್ಪ ಗೆಲ್ಲಲಿ ಬಿಡು, ನೀನು ಈ ಬಾರಿ ನಿಲ್ಲಬೇಡ ಎಂದು ರಾಘವೇಂದ್ರಗೆ ಹೇಳಲಿ ಎಂದು ಹೇಳಿದರು.