ಜೋಗ್ಫಾಲ್ಸ್ನಲ್ಲಿ ಕೋತಿರಾಮ ಕಣ್ಮರೆ?
Team Udayavani, Feb 28, 2018, 7:30 AM IST
ಸಾಗರ: ಜೋಗ ಜಲಪಾತದಲ್ಲಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಶವ ಪತ್ತೆಗೆ ಕಾರ್ಯಾಚರಣೆ ನಡೆಸುವ
ಚಿತ್ರದುರ್ಗದ ಕೋತಿರಾಮ ಎಂದೇ ಖ್ಯಾತಿಯ ಜ್ಯೋತಿರಾಜ್, ಅಂತಹ ಇನ್ನೊಂದು ಸಾಹಸದಲ್ಲಿ ಮಂಗಳವಾರ ತೊಡಗಿದವರು
ಸಂಜೆಯವರೆಗೂ ಮೇಲೆ ಬಾರದಿರುವ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 3 ದಿನಗಳ ಹಿಂದೆ ಬೆಂಗಳೂರಿನ
ಮಂಜುನಾಥ್ ಎಂಬಾತ ಜೋಗಕ್ಕೆ ಬಂದವನು ಡೆತ್ನೋಟ್ ಬರೆದು ಸಿದಾಟಛಿಪುರ ಭಾಗದಿಂದ ಜೋಗ ಜಲಪಾತಕ್ಕೆ ಹಾರಿದ್ದಾನೆ ಎಂದು ಶಂಕಿಸಲಾಗಿತ್ತು. ಆತನ ದೇಹಕ್ಕಾಗಿ ಹುಡುಕಾಟ ನಡೆಸಲು ಕೋತಿರಾಮ ತನ್ನ ಇಂಡಿಯನ್ ಅಡ್ವೆಂಚರ್ ಮಂಕಿ ಕ್ಲಬ್ನ ಐದಾರು ಟ್ರೈನಿಂಗ್ ಹುಡುಗರ ಜೊತೆಗೆ ಸೋಮವಾರ ಸಂಜೆ ಇಲ್ಲಿಗೆ ಬಂದಿಳಿದಿದ್ದ. ಮಂಗಳವಾರ ಬೆಳಗಿನಿಂದಲೇ ಹುಡುಕಾಟ ನಡೆಸಿದ್ದರೂ ಯಾವುದೇ ಶವ ಪತ್ತೆಯಾಗಿರಲಿಲ್ಲ. ಈ ನಡುವೆ ಕಡೆಯ ಬಾರಿಗೆ ಕೋತಿರಾಮ ಮಧ್ಯಾಹ್ನ ಎರಡೂವರೆ ಸುಮಾರಿಗೆ ಜಲಪಾತದ ಮೇಲ್ಗಡೆ ಬಂದಿದ್ದ. ಆ ನಂತರ ಮೂರೂವರೆ ಸಮಯದಲ್ಲಿ ಮತ್ತೂಮ್ಮೆ ಕೆಳಗಿಳಿದವನು ಮತ್ತೆ ಮರಳಿಲ್ಲ. ಸಿಗ್ನಲ್
ಸಿಗುವುದಿಲ್ಲ ಎಂಬ ಕಾರಣಕ್ಕೆ ತನ್ನ ಜೊತೆ ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಅಲ್ಲದೆ ಆತ ಯಾವುದೇ ರೋಪ್ ಬಳಸದೆ ಜಲಪಾತದ ಕೆಳಗೆ ಇಳಿದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಜ್ಯೋತಿರಾಜ್ ತಂಡದ ಹುಡುಗರು ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿಲ್ಲ. ಸಿದಾಟಛಿಪುರ, ಸಾಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕತ್ತಲೆಯಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ