Shimoga;ಈಶ್ವರಪ್ಪ ಭಯದಿಂದ ರಾಘವೇಂದ್ರ ಆ್ಯಕ್ಟಿವ್‌: ಆಯನೂರು ಮಂಜುನಾಥ್


Team Udayavani, Apr 3, 2024, 3:23 PM IST

Shimoga;ಈಶ್ವರಪ್ಪ ಭಯದಿಂದ ರಾಘವೇಂದ್ರ ಆ್ಯಕ್ಟಿವ್‌: ಆಯನೂರು ಮಂಜುನಾಥ್

ಉದಯವಾಣಿ ಸಮಾಚಾರ
ಶಿವಮೊಗ್ಗ: ನಾನು ಯಡಿಯೂರಪ್ಪ ಅವರನ್ನು ಟೀಕೆ ಮಾಡಿಲ್ಲ. ಅವರ ಮಗ ಬಿ.ವೈ.ರಾಘವೇಂದ್ರ ಅವರನ್ನು ಪ್ರಶ್ನಿಸಿದ್ದೇನೆ. ನಿಮ್ಮ ನಾಯಕರ ಬಗ್ಗೆ ಈಶ್ವರಪ್ಪ ಟೀಕೆ ಮಾಡಿದ್ದಕ್ಕೆ, ನಾನು ಬಲವಾಗಿ ಖಂಡಿಸುತ್ತಿದ್ದೇನೆ. ಆದರೆ ನೀವು ಯಾಕೆ ಖಂಡಿಸಲಿಲ್ಲ ಎಂದು ಬಿಜೆಪಿ ಎಂಎಲ್‌ಸಿ ಎಸ್‌.ರುದ್ರೇಗೌಡ ಹಾಗೂ ಮುಖಂಡ ಧನಂಜಯ ಸರ್ಜಿ ಅವರಿಗೆ ಕೆಪಿಸಿಸಿ ವಕ್ತಾರ ಆಯನೂರು
ಮಂಜುನಾಥ್‌ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಅದರ ಅಭ್ಯರ್ಥಿಯಾಗಿ ರುದ್ರೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಆ ಸೋಲಿಗೆ ಕಾರಣ ಯಾರು. ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರಿಸದ ಇವರಿಬ್ಬರು ನನ್ನ ಪ್ರಶ್ನೆಯನ್ನು ಪ್ರಶ್ನೆಯನ್ನಾಗಿಯೇ ಉಳಿಸಿದ್ದಾರೆ ಎಂದು ಹೇಳಿದರು.

ಧನಂಜಯ್‌ ಸರ್ಜಿಗೆ ಇನ್ನೂ ಬಿಜೆಪಿ ಅರ್ಥ ಆಗಿಲ್ಲ. ಸರ್ಜಿಗೆ ನನ್ನ ಬಗ್ಗೆಯೇ ಏನು ಗೊತ್ತಿದೆ. ನಾನು ಬಿಜೆಪಿಯ ಫಲಾನುಭವಿ ಎನ್ನುವ ಅವರು, ಒಂದು ಕಾಲದಲ್ಲಿ ನಾನು ಬಿಜೆಪಿ ಕೊಟ್ಟ ಬರಗಾಲದ ನೆಲದಲ್ಲಿ ಬೆಳೆ ಬೆಳೆದವನು. ಬಂಗಾರಪ್ಪ ವಿರುದ್ಧ ಸ್ವರ್ಧೆ ಮಾಡಿದವನು. ಈಗ ನಿಮಗೆ ಅವರ ನೀರಾವರಿ ಭೂಮಿ ಕೊಟ್ಟಿದ್ದಾರೆ. ನಾನು ಎಲ್ಲೇ ಇದ್ದರೂ ಬಡಿದಾಡುತ್ತೇನೆ. ಬೇರೆಯವರ ರೀತಿ ದೇಹ ಒಂದು ಕಡೆ, ಮನಸ್ಸು ಒಂದೆ ಕಡೆ ಇಟ್ಟುಕೊಂಡು ರಾಜಕೀಯ ಮಾಡಲ್ಲ ಎಂದು ಮಾತಿನಲ್ಲಿ ತಿವಿದರು.

ಗೀತಾ ಗೆಲುವು ಖಚಿತ: ಗೀತಾ ಶಿವರಾಜ್‌ ಕುಮಾರ್‌ ಅವರ ಗೆಲುವು ಹತ್ತಿರವಾಗುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಈಗಾಗಲೇ ಒಂದು ಸುತ್ತು ಗೀತಾ ಶಿವರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕರ ನೇತೃತ್ವದಲ್ಲಿ ಪ್ರಚಾರ ಮಾಡಲಾಗಿದೆ. ಹೋದ ಕಡೆಯಲ್ಲೆಲ್ಲಾ ಒಳ್ಳೆಯ ವಾತಾವರಣವಿದೆ. ಬೈಂದೂರು ಸೇರಿದಂತೆ ಗ್ರಾಮಾಂತರ
ಭಾಗಗಳಲ್ಲಿ ಕಾಂಗ್ರೆಸ್‌ ಬಗ್ಗೆ ಅತಿಯಾದ ಒಲವಿದೆ. ಈ ಒಲವು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ ಎಂದರು.

ಹಾಗೆಯೇ ಉಡುಪಿ ಚಿಕ್ಕಮಗಳೂರು ಭಾಗದಲ್ಲಿಯೂ ಜಯಪ್ರಕಾಶ್‌ ಹೆಗ್ಡೆಯವರೊಂದಿಗೆ ಪ್ರವಾಸ ಮಾಡಲಾಗಿದೆ.
ಶೃಂಗೇರಿ, ಕೊಪ್ಪ, ಅಜ್ಜಂಪುರ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಈ ಭಾಗದ ಅಭ್ಯರ್ಥಿ ಜಯಪ್ರಕಾಶ್‌ ಹೆಗಡೆ ಕೂಡ ಗೆಲಲ್ಲಿದ್ದಾರೆ. ಇದರ ಜೊತೆ ಜೊತೆಯಲ್ಲಿಯೇ ನೈರುತ್ಯ ವಿಧಾನಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆಯೂ ಆ ಭಾಗದ ಪದವೀಧರರ ಮತ್ತು ಶಿಕ್ಷಕರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದೇವೆ ಎಂದರು.

ಗೀತಾ ಶಿವರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿಲ್ಲ ಎಂದು ಆರೋಪವಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಆರೋಪವನ್ನು ಮಾಡುತ್ತಿರುವವರು ಬಿಜೆಪಿಗರು, ಅವರಿಗೆ ಕೆ.ಎಸ್‌. ಈಶ್ವರಪ್ಪನವರು ಬೆನ್ನು ಹತ್ತಿದ್ದಾರೆ. ತಮ್ಮನ್ನು ತಾವು ಕಾಯ್ದುಕೊಳ್ಳಲು ಅವರು ಕ್ರಿಯಾಶೀಲರಾಗಿರಬೇಕಾಗಿದೆ. ಹಾಗಾಗಿಯೇ ಹತಾಶರಾಗಿ ಅಭ್ಯರ್ಥಿ ರಾಘವೇಂದ್ರ ಓಡಾಡುತ್ತಿದ್ದರೆ ಅಷ್ಟೇ.

ಆದರೆ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ವ್ಯವಸ್ಥಿತವಾಗಿಯೇ ಚುನಾವಣಾ ಪ್ರಚಾರದಲ್ಲಿದ್ದಾರೆ. ನಿಧಾನವಾಗಿಯಾದರೂ ಪ್ರಚಾರದ ಬಿರುಸು ಹೆಚ್ಚಿದೆ. ಜೆಡಿಎಸ್‌ ಮತ್ತು ಬಿಜೆಪಿಯ ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ
ಲಾಭವಾಗುತ್ತದೆ ಅಷ್ಟೇ. ಅದರಿಂದ ಕಾಂಗ್ರೆಸ್‌ಗೆ ಏನೂ ನಷ್ಟವಾಗುವುದಿಲ್ಲ ಎಂದರು.

ಟಾಪ್ ನ್ಯೂಸ್

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Gautam Gambhir started a new experiment while becoming the coach of Team India

Team India ಕೋಚ್ ಆಗುತ್ತಲೇ ಹೊಸ ಪ್ರಯೋಗಕ್ಕೆ ಮುಂದಾದ ಗೌತಮ್ ಗಂಭೀರ್

10-uv-fusion

Future: ಮುಗಿಯದ ಮುಂದೇನು ಪ್ರಶ್ನೆ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

1-aasa

Paris Olympics ; ಮೊದಲ ಎರಡು ಚಿನ್ನದ ಪದಕ ಗೆದ್ದ ಚೀನಾ!

Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ

Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-sasdas

ಮುನ್ನೂರಿಗೆ ಹೋಗುವ ರಸ್ತೆಯ ಧರೆ ಕುಸಿತ: ಸಂಪರ್ಕ ಕಡಿತಗೊಳ್ಳುವ ಆತಂಕ…!

MUST WATCH

udayavani youtube

ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

ಹೊಸ ಸೇರ್ಪಡೆ

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Laos: ವಿಶ್ವದ ಮೊದಲ ದೇಶ- ಅಯೋಧ್ಯೆ ರಾಮಲಲ್ಲಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಲಾವೋಸ್…

Gautam Gambhir started a new experiment while becoming the coach of Team India

Team India ಕೋಚ್ ಆಗುತ್ತಲೇ ಹೊಸ ಪ್ರಯೋಗಕ್ಕೆ ಮುಂದಾದ ಗೌತಮ್ ಗಂಭೀರ್

10-uv-fusion

Future: ಮುಗಿಯದ ಮುಂದೇನು ಪ್ರಶ್ನೆ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

1-aasa

Paris Olympics ; ಮೊದಲ ಎರಡು ಚಿನ್ನದ ಪದಕ ಗೆದ್ದ ಚೀನಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.