25 ದಿನಗಳಿಂದ ತುರ್ತು ಆರೋಗ್ಯ ಸೇವೆ ಸ್ಥಗಿತ ; ಶುಕ್ರವಾರ ತುಮರಿಯಲ್ಲಿ ಹೆದ್ದಾರಿ ತಡೆ
Team Udayavani, Jul 26, 2022, 4:09 PM IST
ಸಾಗರ : ಶರಾವತಿ ಹಿನ್ನೀರಿನ ಕರೂರು ಬಾರಂಗಿ ಹೋಬಳಿಯ ತುರ್ತು ಆರೋಗ್ಯ ಸೇವೆ ಸ್ಥಗಿತಗೊಂಡು 25 ದಿನ ಕಳೆದಿದ್ದು 200ಕ್ಕೂ ಹೆಚ್ಚು ಹಳ್ಳಿಯ ರೋಗಿಗಳು ಪರದಾಡುವ ಸ್ಥಿತಿ ತಲುಪಿದೆ. ಇದನ್ನು ಖಂಡಿಸಿ ಜನಪರ ಹೋರಾಟ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ತುಮರಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ವೇದಿಕೆ ಅಧ್ಯಕ್ಷ, ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ತಿಳಿಸಿದ್ದಾರೆ.
ಸೇವೆಯಲ್ಲಿ ಇದ್ದ ವಾಹನ ದುರಸ್ಥಿಗೆ ತೆರಳಿದ ಕಾರಣ ಶುಕ್ರವಾರಕ್ಕೆ 108 ಸೇವೆ ಸ್ಥಗಿತಗೊಂಡು ಒಂದು ತಿಂಗಳು ಕಳೆಯುತ್ತದೆ. ಪರ್ಯಾಯ 108 ನೀಡುವ ಮೂಲಕ ಸೇವೆ ನೀಡಬೇಕಿದ್ದ ಆರೋಗ್ಯ ಇಲಾಖೆ ಸಂತ್ರಸ್ತರ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸುತ್ತಾ ಇದೆ ಎಂದು ಅವರು ಆರೋಪಿಸಿದ್ದಾರೆ.
ತುಮರಿಯ 108 ಸೇವೆ ಕಳೆದ ಒಂದು ವರ್ಷದಿಂದ ಸರಿಯಾಗಿ ಸೇವೆ ಸಲ್ಲಿಸುತ್ತಾ ಇಲ್ಲ. ಈ ಹಿಂದೆಯೂ ಕೂಡ 56 ದಿನಗಳ ಕಾಲ ತುರ್ತು ಸೇವೆ ಸ್ಥಗಿತವಾಗಿತ್ತು. ಆ ಹೊತ್ತಿನಲ್ಲಿ ಒಂದೇ ದಿನ ಜೋಡಿ ಸಾವು ಆಗಿತ್ತು. ಇಷ್ಟಾದರೂ ಕೂಡ ಇಲಾಖೆ ಹುಡುಗಾಟ ಆಡುತಾ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಭೌಗೋಳಿಕ ಸ್ಥಿತಿಯಲ್ಲಿ 108 ತುರ್ತು ಸೇವೆ ಅತಿ ಅಗತ್ಯವಾಗಿದೆ. ಆದರೆ ಆದ್ಯತೆ ಕೊಡಬೇಕಾದ ತುಮರಿ ಅಂಬುಲೆನ್ಸ್ ಸೇವೆ ಬಗ್ಗೆ ಪ್ರತಿಭಟನೆ ಮಾಡಿ ಆಗ್ರಹಿಸಿದರೂ ಕೂಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ : ಟೀಂ ಇಂಡಿಯಾದಲ್ಲಿ ವಿರಾಟ್ ಸ್ಥಾನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ರಾಬಿನ್ ಉತ್ತಪ್ಪ
ಶುಕ್ರವಾರ ರಾಷ್ಟೀಯ ಹೆದ್ದಾರಿ ತಡೆಗೆ ಸಾಗರ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವ ವಹಿಸಲಿದ್ದು, ಕಾಗೋಡು ತಿಮ್ಮಪ್ಪ ಭೂ ಹೊರಾಟ ವೇದಿಕೆ, ಸಹಮತ ವೇದಿಕೆ, ಮಹಿಳಾ ಸಂಘಟನೆಗಳು, ಯುವಕ ಸಂಘಟನೆಗಳು ಪಾಲ್ಗೊಳ್ಳಲಿವೆ. ರಸ್ತೆ ತಡೆಗೆ ಮುನ್ನ ದ್ವೀಪದ ರೈತರಿಗೆ ಅರಣ್ಯ ಒತ್ತುವರಿ ನೋಟಿಸ್, ಶಿಕ್ಷಕರ ಕೊರತೆ, ಉರಲಗಲ್ಲು ಗ್ರಾಮದಲ್ಲಿ ಈಚೆ ನಡೆದ ಅರಣ್ಯ ಇಲಾಖೆ ನಡವಳಿಕೆಗೆ ಪ್ರತಿರೋಧ ಮತ್ತು ಆಸ್ಪತ್ರೆ ಮೂಲಭೂತ ಸೌಕರ್ಯ ಬಗ್ಗೆ ಮುಂದಿನ ಹೋರಾಟ ನಡೆಸುವ ಬಗ್ಗೆ ಸಮಾಲೋಚನೆ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ