ಹಣ್ಣು-ತರಕಾರಿ ಮಾರಾಟ ನೀತಿ ಮರುಪರಿಶೀಲಿಸಿ
ಉಪವಿಭಾಗಾಧಿಕಾರಿಗಳಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮನವಿ
Team Udayavani, Apr 20, 2020, 4:36 PM IST
ಸಾಗರ: ಹಣ್ಣು-ತರಕಾರಿ ಮಾರಾಟಕ್ಕೆ ಸಂಬಂಧಿಸಿದ ಆದೇಶ ಮರುಪರಿಶೀಲನೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಎಸಿಗೆ ಮನವಿ ಸಲ್ಲಿಸಿತು.
ಸಾಗರ: ಹಣ್ಣು-ತರಕಾರಿ ಮಾರಾಟಕ್ಕೆ ಸಂಬಂಧಿಸಿ ತಾಲೂಕು ಆಡಳಿತ ಜಾರಿಗೊಳಿಸಿರುವ ನೀತಿ ರೈತರಿಗೆ ಮಾರಕವಾಗಿದ್ದು, ತಕ್ಷಣ ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಭಾನುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಣ್ಣು ಮತ್ತು ತರಕಾರಿಗಳನ್ನು ಬಡಾವಣೆಗಳಿಗೆ ಹೋಗಿ ಮಾರಾಟ ಮಾಡುವಂತೆ ಆಡಳಿತ ಸೂಚನೆ ನೀಡಿದೆ. ನಗರದ 31 ವಾರ್ಡ್ಗಳಿಗೆ ತರಕಾರಿ-ಹಣ್ಣು ತೆಗೆದುಕೊಂಡು ಹೋಗಲು ಬೇಕಾದಷ್ಟು ತಳ್ಳುಗಾಡಿಗಳು ನಮ್ಮಲ್ಲಿ ಇಲ್ಲ. ಇಷ್ಟು ದಿನ ನಿಗದಿಪಡಿಸಿದ ಸಮಯದಲ್ಲಿ ಒಂದು ಕಡೆ ಸಿಗುತ್ತಿದ್ದ ತರಕಾರಿ, ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಅದನ್ನು ಹಿಂಪಡೆದಿರುವುದರಿಂದ ಜನರು ತರಕಾರಿ, ಹಣ್ಣು ಕೊಳ್ಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿ ತಿಳಿಸಲಾಗಿದೆ. ಭಾನುವಾರ ತರಕಾರಿ ಮಾರಾಟ ಮಾಡುತ್ತಿದ್ದ ರೈತರನ್ನು ಓಡಿಸಿರುವುದು ಖಂಡನೀಯ. ಹಣ್ಣಿನ ಅಂಗಡಿ ಬಾಗಿಲು ತೆಗೆಯಲು ಅವಕಾಶ ಕೊಡದೆ ಇರುವುದರಿಂದ ಹಣ್ಣುಗಳು ಕೊಳೆಯುತ್ತಿವೆ. ಇದರಿಂದ, ವ್ಯಾಪಾರಸ್ಥರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಉಪವಿಭಾಗಾ ಧಿಕಾರಿಗಳು ಹೊರಡಿಸಿರುವ ಆದೇಶ ರಾಜ್ಯ ಸರ್ಕಾರದ ಆದೇಶದ ಉಲ್ಲಂಘನೆಯೂ ಆಗಿದೆ. ತಕ್ಷಣ ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಹಿಂದಿನಂತೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕುಗ್ವೆ, ಪ್ರಮುಖರಾದ ಎಚ್.ಬಿ.ರಾಘವೇಂದ್ರ, ಮನೋಜ್ ಕುಗ್ವೆ, ಎಚ್.ಎಲ್.ರಾಘವೇಂದ್ರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ