ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ: ಕೆ.ಎಸ್. ಈಶ್ವರಪ್ಪ
Team Udayavani, Nov 7, 2022, 11:00 PM IST
ಶಿವಮೊಗ್ಗ: ಸಿದ್ದರಾಮಯ್ಯ ಒಬ್ಬ ಅಲೆಮಾರಿ ರಾಜಕಾರಣಿ. ಅಲೆಮಾರಿ ಎಲ್ಲಿಯೇ ನಿಂತರೂ ಸೋಲುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಅವರನ್ನು ಸೋಲಿಸಿದರು. ಖರ್ಗೆ ಸಿಎಂ ಆಗಲು ಬಿಡಲಿಲ್ಲ, ಇದೀಗ ಡಿ.ಕೆ. ಶಿವಕುಮಾರ್ಗೆ ಅಡ್ಡಗಾಲು ಹಾಕ್ತಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಎಲ್ಲಿ ನಿಲ್ಲೋದು ಎಂದು ಗೊತ್ತಿಲ್ಲ. ಕಾಂಗ್ರೆಸ್ನ ಅನೇಕರ ಪರಿಸ್ಥಿತಿ ಇದೇ ಆಗಿದೆ. ಕೋಲಾರಕ್ಕೆ ಆಹ್ವಾನಿಸಿದ್ದಾರೆ.
ಜಮೀರ್ ಕರೆಯುತ್ತಿದ್ದಾರೆ ಅಂತಾರೆ. ಎಲ್ಲರೂ ಸುಮ್ಮನೆ ಕರೆಯುತ್ತಾರೆ. ಯಾರೂ ಬಿಟ್ಟು ಕೊಡಲು ಸಿದ್ಧರಿಲ್ಲ. ಸಿದ್ದರಾಮಯ್ಯ ಎರಡು ಕಡೆ ಅಲ್ಲ.
ರಾಜ್ಯದ 224 ಕ್ಷೇತ್ರದಲ್ಲಿ ನಿಂತರೂ ಸೋಲು ಖಚಿತ. ನನಗೆ ಆವಾಗ ಅನ್ಯಾಯ ಮಾಡಿದ್ದೆ. ಈಗ ಸರಿಯಾಗಿ ಮಾಡ್ತೀನಿ ಅಂತಾ ಖರ್ಗೆ ಬುದ್ಧಿ ಕಲಿಸಲು ಕಾಯುತ್ತಿದ್ದಾರೆ.
ಆರ್ಥಿಕ ಹಿಂದುಳಿದವರಿಗೆ ಶೇ.10 ಮೀಸಲಾತಿಗೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿ ನೀಡಿರುವ ತೀರ್ಪು ಸ್ವಾಗತಾರ್ಹ ಆರ್ಥಿಕವಾಗಿ ಹಿಂದುಳಿದ ಜನರ ಬುದ್ಧಿವಂತಿಕೆ ದೇಶಕ್ಕೆ ಬೇಕು. ಮುಂದುವರಿದ ಸಮಾಜದ ಬಡ ಪ್ರತಿಭಾವಂತರಿಗೆ ಮೀಸಲಾತಿ ಸಿಗದಿದ್ದರೆ ದೇಶಕ್ಕೇ ನಷ್ಟ. ಇದರಿಂದ ಬೇರೆ ಯಾವ ವರ್ಗಕ್ಕೂ ನಷ್ಟವಿಲ್ಲ. ಇಲ್ಲಿ ಯಾರೂ ಜಾತಿ ವಿಚಾರಗಳನ್ನು ತರಬಾರದು. ರಾಷ್ಟ್ರದ ಹಿತದೃಷ್ಟಿಯಿಂದ ನೀಡಿರುವ ಸುಪ್ರೀಂ ಆದೇಶ ಎಲ್ಲರೂ ಸ್ವಾಗತಿಸಬೇಕು. ರಾಷ್ಟ್ರದ ಹಿತದೃಷ್ಟಿಯಿಂದ ಜಾತಿ ತರಬಾರದು ಎಂದರು.