ಶ್ರೀಧರ ದೀಕ್ಷಿತ್ ಸನ್ಯಾಸ ಸ್ವೀಕಾರ ನಾಳೆ
Team Udayavani, Jan 27, 2018, 6:20 AM IST
ಸಾಗರ: ತಾಲೂಕಿನ ತ್ಯಾಗರ್ತಿಯ ಸಚ್ಚಿದಾನಂದ ಆಶ್ರಮ ಸತ್ಯಪೀಠದ ಶ್ರೀಧರ ದೀಕ್ಷಿತ್ ಸ್ವಾಮೀಜಿಗಳು ಭಾನುವಾರ
(ಜ.28) ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ಸನ್ಯಾಸ ಸ್ವೀಕಾರ ಮಾಡಲಿದ್ದಾರೆ.
ಕೂಡಲಿ ಶೃಂಗೇರಿಯ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮತ್ತೂರಿನ ವಿಶ್ವಾಸಾನಂದ ತೀರ್ಥರು ಸನ್ಯಾಸ ದೀಕ್ಷೆ ಉಪದೇಶ ನೀಡಲಿದ್ದಾರೆ. ಮತ್ತೂರಿನ ವೇದಬ್ರಹ್ಮ ಮಾರ್ಕಾಂಡೇಯ ಅವಧಾನಿಗಳ ನಡೆಯಲಿದ್ದು, ಪೂರ್ವಭಾವಿಯಾಗಿ ಗುರುವಾರದಿಂದಲೇ ಕಾರ್ಯಕ್ರಮಗಳು ಆರಂಭವಾಗಿವೆ. ಸಾಗರದ ವೆಂಕಟೇಶ್ ದೀಕ್ಷಿತ್ ಹಾಗೂ ರಮಾಬಾಯಿಯವರ ಮಗನಾಗಿ 1951ರಲ್ಲಿ ಜನಿಸಿದ ಶ್ರೀಧರ ದೀಕ್ಷಿತ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಾಗರದಲ್ಲೇ ಮುಗಿಸಿದರು. ನಂತರ ಬೆಂಗಳೂರಿನಲ್ಲಿ ಲೈಬ್ರರಿ ತರಬೇತಿ ಪಡೆದು ನಗರದ ಲಾಲ್ಬಹದ್ದೂರ್ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ 26 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಆಧ್ಯಾತ್ಮಿಕ ಸೆಲೆಯಿಂದ ಪ್ರೇರೇಪಣೆಯಾಗಿ ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಹೊಂದಿ ಬಳ್ಳಾರಿಯ ಸಿಂಹಾದ್ರಿ ಸ್ವಾಮಿಗಳಿಂದ ಪಂಚೀಕರಣ ಶಾಸ್ತ್ರದ ಕುರಿತು ಅನುಗ್ರಹಿತರಾದರು.
2002ರಲ್ಲಿ ತ್ಯಾಗರ್ತಿಯ ದೇವಸ್ಥಾನವೊಂದರಲ್ಲಿ ಒಂದು ವರ್ಷ ತಪಸ್ಸನ್ನು ನಡೆಸಿದ ನಂತರ ಅಲ್ಲಿಯೇ ಸಮೀಪದಲ್ಲಿ
ಆಶ್ರಮ ನಿರ್ಮಿಸಿಕೊಂಡು ಭಕ್ತರಿಗೆ ಆಧ್ಯಾತ್ಮದ ಕುರಿತಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ