ಮತಾಂಧ ಟಿಪು ಜಯಂತಿ ಆಚರಣೆ ಖಂಡನೀಯ: ವಿಎಚ್‌ಪಿ


Team Udayavani, Nov 8, 2017, 5:27 PM IST

08-26.jpg

ಸೊರಬ: ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳ ಸೊರಬ ತಾಲೂಕು ಶಾಖೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ ಚಂದ್ರಶೇಖರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಭಾವೀ ಪ್ರಜೆಗಳಾದ ಯುವ ಜನತೆಗೆ ಮತ್ತು ಮಕ್ಕಳಿಗೆ ನಮ್ಮ ನಾಡಿನಲ್ಲಿ ಜನಿಸಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಸಾಧು, ಸಂತರು, ರಾಜರುಗಳನ್ನು ಸಮಾಜ ಸುಧಾರಕರನ್ನು ಪರಿಚಯಿಸುವುದು ಸಮಾಜದ ಹಾಗು ಸರ್ಕಾರದ ಪವಿತ್ರ ಕರ್ತವ್ಯ. ನಮ್ಮ ಯುವಜನತೆಯೂ ಅಂತಹ ಮಹಾಪುರುಷರಾಗಿ ಬೆಳೆಯಲಿ ಹಾಗು ಸಮಾಜದ ಉನ್ನತಿಗಾಗಿ ಶ್ರಮಿಸಲಿ ಎನ್ನುವುದು ಎಲ್ಲರ ಆಶಯ.
ಆದರೆ ಹಾಗೆ ಮಾಡುವಾಗ ಅತ್ಯಂತ ವಿವಾದಾಸ್ಪದ ಚರಿತ್ರೆಯನ್ನು ಹೊಂದಿರುವ ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಆಚರಿಸುತ್ತಾ ಇರುವುದು ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ. ದಕ್ಷಿಣ ಭಾರತದಲ್ಲಿ ಕಂಡು ಬರುತ್ತಿರುವ ಮತಾಂಧತೆ
ಹಾಗು ಭಯೋತ್ಪಾದನೆಯ ಮೂಲ ಕಾರಣ ಟಿಪ್ಪು ಸುಲ್ತಾನ್‌ ಹಾಗೂ ಹೈದರಾಲಿ. ನಾಲ್ಕು ಒಳ್ಳೆಯ ಕೆಲಸ ಹಾಗೂ  ನೂರಾರು ಮನೆಹಾಳು ಕೆಲಸಗಳನ್ನು ಮಾಡಿರುವ ಟಿಪ್ಪು ಸುಲ್ತಾನನನ್ನು ನಾವು ಏಕೆ ಆದರ್ಶವೆಂದು ನೆನೆಯಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್‌ ಒಬ್ಬ ಮತಾಂಧ. ರಾಜ್ಯ ವಿಸ್ತಾರಕ್ಕಾಗಿ ರಾಜರು ಯುದ್ಧ ಮಾಡುವುದು ಸಹಜ. ಆದರೆ ಯುದ್ಧಾ ನಂತರ ಪ್ರಜೆಗಳ ಮೇಲೆ ಅತ್ಯಾಚಾರ, ಮಾರಣ ಹೋಮ, ಮತಾಂತರ, ಶ್ರದ್ಧಾಕೇಂದ್ರಗಳ ನಾಶ ಇಂತಹ ಕೃತ್ಯಗಳೇ ಅವನ ಸಾಧನೆಗಳು. ಮೇಲುಕೋಟೆ, ಕೇರಳದ ಕಲ್ಲಿಕೋಟೆ, ಕೊಡಗು, ಮಂಗಳೂರುಗಳಲ್ಲಿ ಆತ ನಡೆಸಿದ ಕಾರ್ಯ ಹಾಗೂ ನರಹತ್ಯೆಗಳು ಎಂಥ ವರ ಎದೆಯಲ್ಲೂ ರಕ್ತ ಹೆಪ್ಪುಗಟ್ಟಿಸುತ್ತವೆ. ಆತನೇನಾದರೂ ಬ್ರಿಟಿಷರನ್ನು ಯುದ್ಧದಲ್ಲಿ ಸೋಲಿಸಿ, ದಕ್ಷಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲ್ಪಟ್ಟಿದ್ದರೆ, ಭಾರತ ಸ್ವತಂತ್ರವಾಗುವ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಇನ್ನೊಂದು ಪಾಕಿಸ್ಥಾನ ರಚನೆಯಾಗುತ್ತಿತ್ತು ಎಂದರು. ಚರಿತ್ರೆಯನ್ನು ಒಮ್ಮುಖವಾಗಿ ಮಾತ್ರ ಅಭ್ಯಾಸ ಮಾಡಿ, ತಮಗೆ ಬೇಕಾದಂತೆ ತಿರುಚಿ, ಇಡೀ ಒಂದು ಸಮುದಾಯವನ್ನೇ ದಾರಿ ತಪ್ಪಿಸಿ, ಮತ- ಅಧಿಕಾರ ಗಳಿಕೆಯೇ ಉದ್ದೇಶವಾಗಿರುವವರಿಗೆ ಟಿಪ್ಪು ಒಬ್ಬ ಪರಮತ ಸಹಿಷ್ಣು ರಾಜನಾಗಿ ಕಾಣುತ್ತಾನೆಯೇ ಹೊರತು ಉಳಿದೆಲ್ಲ ಭಾರತೀಯರಿಗೆ ಆತ ಖಳನಾಯಕನಾಗಿಯೇ ಉಳಿಯುತ್ತಾನೆ ಎಂದರು. 

ಜಿಲ್ಲಾ ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತ ಮನಿಪಾಲ್‌, ತಾಲೂಕು ಸಂಚಾಲಕ ರವಿ ಗುಡಿಗಾರ್‌, ದಯಾನಂದ ಆಚಾರ್‌, ರಜನಿ ನಾಯ್ಕ, ಪ್ರಸನ್ನ ಕೆ.ವಿ., ಶಶಿಕುಮಾರ್‌, ಚಂದನ್‌ ಸೊಪ್ಪಿನಕೇರಿ ಮತ್ತಿತರರಿದ್ದರು.

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.