ಶ್ರೀಧರಸ್ವಾಮಿಗಳ ಮಹಾಯಾಗ; ವರದಪುರಕ್ಕೆ ಸಂಬಂಧ ಇಲ್ಲ


Team Udayavani, Oct 13, 2021, 3:29 PM IST

Untitled-1

ಸಾಗರ: ತಾಲೂಕಿನ ಶ್ರೀಕ್ಷೇತ್ರ ವರದಹಳ್ಳಿಯ ರಾಮದುರ್ಗಾಂಬ ದೇವಸ್ಥಾನದ ಪಕ್ಕದಲ್ಲಿರುವ ಶ್ರೀಧರ ಯಾಗಶಾಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಅನವರತ ಪ್ರತಿಷ್ಠಾನ ನಡೆಸಲು ಉದ್ದೇಶಿಸಿರುವ ಶ್ರೀಧರಸ್ವಾಮಿಗಳ ಮಹಾಯಾಗಕ್ಕೂ ವರದಪುರದ ಶ್ರೀಧರಾಶ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀಧರ ಸೇವಾ ಮಹಾಮಂಡಲ ಸ್ಪಷ್ಟನೆ ನೀಡಿದೆ.

ಅನವರತ ಟ್ರಸ್ಟ್‌ಗೂ ಶ್ರೀಧರ ಸೇವಾ ಮಹಾಮಂಡಲ, ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಂಸ್ಥೆಯು ದುರ್ಗಾಂಬ ದೇವಸ್ಥಾನ ವರದಪುರದಲ್ಲಿ ಕಾರ್ಯಕ್ರಮಗಳನ್ನು ನಡೆಸಿರುವ ಈ ಹಿಂದೆ ಡಾ. ಪ್ರಭಾಕರ ಕಶ್ಯಪ್, ಈಗ ಅನವರತ ಮಹರ್ಷಿ ಎಂಬ ಹೆಸರಿಟ್ಟುಕೊಂಡವರಿಗೆ ಸೇರಿರುತ್ತದೆ. ಭಗವಾನರು ಪ್ರಪ್ರಥಮವಾಗಿ ಶ್ರೀಕ್ಷೇತ್ರ ವರದಪುರದ ದುರ್ಗಾಂಬ ದೇವಸ್ಥಾನದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದು, ಪ್ರಸ್ತುತ ಯಾಗಶಾಲೆಯಿರುವ ಜಾಗವು ಕೂಡಾ ಭಗವಾನರಿಗೆ ಅರ್ಪಣೆಗೊಂಡು, ಅವರು ಪ್ರೀತಿಯಿಂದ ಇಟ್ಟುಕೊಂಡಿರುವ ಸ್ಥಳವಾಗಿದೆ. ಧಾರ್ಮಿಕ ದೃಷ್ಟಿಯಿಂ, ವ್ಯಾವಹಾರಿಕ ದೃಷ್ಟಿಯಿಂದ, ಸಾಮಾಜಿಕ ರೀತಿ ನೀತಿಯ ದೃಷ್ಟಿಯಿಂದ ಶ್ರೀಧರ ಸೇವಾಮಹಾಮಂಡಲ ಧರ್ಮಸಂಕಟದಲ್ಲಿ ಸಿಕ್ಕಿಕೊಂಡು ಈ ಮಹಾಯಾಗಕ್ಕೆ ಒಪ್ಪಿಗೆಯನ್ನು ನೀಡಿದೆ ಎಂದು ಪ್ರಕಟಣೆಯಲ್ಲಿ ಪ್ರತಿಪಾದಿಸಲಾಗಿದೆ.

ಅನವರತ ಎಂಬುವವರು ಪ್ರಕಟಪಡಿಸಿದಂತೆ ‘ಶ್ರೀ ಶ್ರೀಧರ ಸ್ವಾಮಿಗಳ ಮಹಾಯಾಗ’ ಎಂಬುವ ಶಬ್ದವೇ ಸರಿಯಾದದ್ದಲ್ಲ. ಶ್ರೀಧರ ಸ್ವಾಮಿ ಜಪ ಮತ್ತು ಹೋಮಕ್ಕೆ ಮಂತ್ರದ ಜಪಾನುಷ್ಠಾನ ಹಾಗೂ ಹೋಮದ ನಿಯಮಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದು, ‘ಶ್ರೀ ಗುರು ಮಂತ್ರಾನುಷ್ಠಾನ, ಶ್ರೀ ನಮಃ ಶಾಂತಾಯ ಮಂತ್ರ ಜಪಾನುಷ್ಠಾನ, ಶ್ರೀ ಗುರುಮಂತ್ರ ಹವನ, ಶ್ರೀ ನಮಃ ಶಾಂತಾಯ ಮಂತ್ರ ಹವನ’ ಎಂದು ನಾಮಕರಣ ಮಾಡಿದುದನ್ನು ತಿದ್ದುಪಡಿ ಮಾಡಲು ಯಾರಿಗೂ ಯಾವ ಕಾಲದಲ್ಲಿಯೂ ಅಧಿಕಾರವಿಲ್ಲ. ಭಗವಾನರ ಆದೇಶವನ್ನು ಗಾಳಿಗೆ ತೂರದಂತೆ ಮಾಡುವ ಪ್ರಯತ್ನವನ್ನು ನಾವು ಮಾಡುವುದಕ್ಕೆ ಮುಂಚಿತವಾಗಿಯೇ ತ್ತಿದ್ದೆವು. ಈ ವಿಚಾರಗಳ್ಯಾವುದು ನಮ್ಮ ಗಮನಕ್ಕೆ ಮುಂಚೆಯೇ ಬರದೇ ಇದ್ದುದರಿಂದ ನಮಃ ಶಾಂತಾಯ ಜಪದ ಪುಸ್ತಕವನ್ನು ಮಾನವೀಯತೆಯ ದೃಷ್ಟಿಯಿಂದ ಭಗವಾನರ ಸನ್ನಿಧಿ ಮುಂದೆ ಇಟ್ಟು ನಮಸ್ಕರಿಸಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆಯೇ ವಿನಃ ಮಹಾಮಂಡಲವು ಯಾವುದೇ ವಿಧದ ಕೃಪಾಶೀರ್ವಾದವನ್ನು ನೀಡಿಲ್ಲ ಎಂದು ದೃಢಪಡಿಸಲಾಗಿದೆ.

ಕೆಲವು ಸಂಸ್ಥೆಗಳು ಲೋಕ ಕಲ್ಯಾಣದ ಹೆಸರಿನಲ್ಲಿ ತಮ್ಮ ಆತ್ಮ ಕಲ್ಯಾಣ ಮತ್ತು ಸಂಪತ್ ಅಭಿವೃದ್ಧಿಗಾಗಿ ಕೆಲವು ಕಡೆ ಇಂತಹ ಕಾರ್ಯಕ್ರಮಗಳನ್ನು ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಹವನಕ್ಕೆ ದೇಣಿಗೆ ನೀಡುವ ಬಗ್ಗೆ ಮಹಾಮಂಡಲವು ಭಕ್ತರ ವೈಯುಕ್ತಿಕ ನಿರ್ಧಾರಕ್ಕೆ ಬಿಟ್ಟಿರುತ್ತದೆ. ಈ ಸಂಬಂಧ ಯಾವುದೇ ವ್ಯಾವಹಾರಿಕ ವಿಚಾರದಲ್ಲಿ ಶ್ರೀಧರ ಮಹಾಮಂಡಲವು ಯಾವುದೇ ರೀತಿಯಿಂದ ಪಾಲುದಾರರಲ್ಲ ಎಂದು ವರದಪುರದ ಶ್ರೀಧರ ಸೇವಾ ಮಹಾಮಂಡಲ ಸ್ಪಷ್ಟೀಕರಣದಲ್ಲಿ ಒತ್ತಿ ತಿಳಿಸಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.