Thirthahalli 2ನೇ ಶಬರಿಮಲೆ ಖ್ಯಾತಿಯ ಬೆಜ್ಜವಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ಆರಾಧನೆ!
ಆಗಸದಲ್ಲಿ ಗರುಡನ ದರ್ಶನ!
Team Udayavani, Jan 14, 2024, 6:07 PM IST
ತೀರ್ಥಹಳ್ಳಿ: ತಾಲೂಕಿನ ಬೆಜ್ಜವಳ್ಳಿಯ ಶ್ರೀ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಎರಡನೆಯ ಶಬರಿಮಲೆ ಎಂದೇ ಪ್ರಸಿದ್ಧಿಯಾಗಿರುವ ಬೆಜ್ಜವಳ್ಳಿ ದೇವಸ್ಥಾನದಲ್ಲಿ
ಪೂಜಾ ಕೈಂಕರ್ಯಗಳು ನಡೆದವು.
ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆಯುವ ವೇಳೆ ಆಕಾಶದಲ್ಲಿ ಗರುಡನ ದರ್ಶನವಾಗುತ್ತದೆ. ಇದು ಸಾಕ್ಷಾತ್ ಅಯ್ಯಪ್ಪ ಸ್ವಾಮಿಯೇ ದರ್ಶನ ನೀಡುವುದೆಂಬ ನಂಬಿಕೆ ಇದೆ. ಇಂದು ಗರುಡನ ದರ್ಶನವಾಗುವ ವೇಳೆ ಅಯ್ಯಪ್ಪ ಸ್ವಾಮಿಯ ನಾಮ ಘೋಷಗಳನ್ನು ಕೂಗಿದರು. ಸ್ವಾಮಿಯ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ಭಕ್ತರು ಪುನೀತರಾದರು.