ಸನ್ಯಾಸಿಗಳಿಗೆ ರಾಜಕೀಯ ಸಲ್ಲ: ವಿಧುಶೇಖರ ಸ್ವಾಮೀಜಿ


Team Udayavani, Apr 28, 2019, 5:09 PM IST

28-April-35

ಸಾಗರ: ಶೃಂಗೇರಿ ಶಂಕರ ಮಠದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಕುಂಭಾಭಿಷೇಕ ಸಮಿತಿ ವತಿಯಿಂದ ಶೃಂಗೇರಿಯ ವಿಧುಶೇಖರ ಸ್ವಾಮೀಜಿಗಳಿಗೆ ಅಭಿವಂದನಾ ಪತ್ರ ನೀಡಿ ಗೌರವಿಸಲಾಯಿತು.

ಸಾಗರ: ರಾಜಕೀಯವಾಗಿ ನಾವು ಮಾತನಾಡುವುದಿಲ್ಲ. ರಾಜಕೀಯ ಮಾತನಾಡುವವರೇ ಬೇರೆ ಇರುತ್ತಾರೆ. ಸನ್ಯಾಸಿಗಳು ರಾಜಕೀಯ ಮಾಡುವುದು, ಮಾತನಾಡುವುದು ಮಾಡಿದರೆ ಅವರು ಸನ್ಯಾಸಿಗಳಾಗಿರುವುದಿಲ್ಲ. ಇಂತಹ ಪರಂಪರೆ ನಮ್ಮ ಶೃಂಗೇರಿ ಮಠದಲ್ಲಿ ಇಲ್ಲ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ವಿಧುಶೇಖರ ಭಾರತಿ ಸ್ವಾಮಿಗಳು ಹೇಳಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಶುಕ್ರವಾರ ನೂತನ ಗೋಪುರ ಕುಂಭಾಭಿಷೇಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಮನುಷ್ಯನನ್ನು ಸನ್ಮಾರ್ಗದ ಕಡೆಗೆ ಹೋಗುವಂತೆ ಮಾಡುವುದೇ ನಮ್ಮ ಧರ್ಮ. ಶೃಂಗೇರಿ ಶಂಕರ ಮಠದ ಶಾಖೆ ಇರುವಲ್ಲಿ ಶೃಂಗೇರಿ ಮುಖ್ಯ ಮಠದ ಪ್ರಭಾವ, ಅಂಶ ಇದೆ. ಒಂದು ಊರಿನಲ್ಲಿ ಶೃಂಗೇರಿ ಮಠದ ಶಾಖೆ ಇದೆ ಎಂದರೆ ಮೂಲ ಮಠದ ಒಂದಂಶ ಅಲ್ಲಿರುತ್ತದೆ. ಶೃಂಗೇರಿಗೆ ಬರಲು ಸಾಧ್ಯವಿಲ್ಲದ ಭಕ್ತರು ಶಾಖಾ ಮಠಕ್ಕೆ ಬಂದು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಶಾರದಾಂಬೆಗೆ, ಶ್ರೀಗಳಿಗೆ ತಲುಪುತ್ತದೆ ಎಂದರು.

1,236 ವರ್ಷಗಳ ಹಿಂದೆ ಶಂಕರಾಚಾರ್ಯರು ಅವತಾರವೆತ್ತಿ ಸನಾತನ ಧರ್ಮವನ್ನು ಪುನರುತ್ಥಾನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ರಚಿಸಿದ ಆಕರ ಗ್ರಂಥಗಳು, ಶಂಕರ ಸ್ತ್ರೋತ್ರಗಳು ಭಕ್ತರ ಉದ್ಧಾರಕ್ಕೆ ರಚನೆಯಾದದ್ದು. ಭಕ್ತರು ಇದರ ನಿರಂತರ ಪಠಣದಿಂದ ತಮ್ಮ ಕಷ್ಟಕಾರ್ಪಣ್ಯದಿಂದ ದೂರವಾಗಲು ಸಾಧ್ಯ. ಅದ್ವೈತ ಉಪದೇಶವನ್ನು ಬೇರೆಬೇರೆ ವಿದ್ವಾಂಸರು, ಶಂಕರಾಚಾರ್ಯರು ವ್ಯಾಖ್ಯಾನ ಮಾಡಿದ್ದಾರೆ. ಇವೆಲ್ಲವೂ ಬೌದ್ಧಿಕ ವ್ಯವಹಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುತ್ತದೆ. ಜಗದ್ಗುರು ಎಂದರೆ ಜಗತ್ತನ್ನು ಸುತ್ತುವರೆಯುವವರು ಎನ್ನುವ ಮನೋಭಾವ ಸರಿಯಲ್ಲ. ಭಕ್ತರಿಗೆ ಸನ್ಮಾರ್ಗಯುತ ಮಾರ್ಗದರ್ಶನ ಮಾಡುವವರು ನಿಜವಾದ ಜಗದ್ಗುರುಗಳಾಗಿರುತ್ತಾರೆ. ಅವರು ಸಚ್ಚಿದಾನಂದನ ಮನಸ್ಸು ಉಳ್ಳವರಾಗುವ ಜೊತೆಗೆ ಭಕ್ತರಲ್ಲೂ ಅಂತಹ ಮನಸ್ಸು ರೂಪಿಸುವ ಶಕ್ತಿಯನ್ನು ಹೊಂದಿರುತ್ತಾರೆ ಎಂದರು. ವಿದ್ವಾನ್‌ ಕಮಲಾಕರ ಭಟ್ ಮತ್ತು ಹೈಕೋರ್ಟ್‌ನ ನ್ಯಾಯವಾದಿ ಸುಬ್ರಹ್ಮಣ್ಯ ಜೋಯ್ಸ ಮಾತನಾಡಿದರು. ಬೆಂಗಳೂರಿನ ಉದ್ಯಮಿ ಶ್ರೀಧರ್‌ ಅವರನ್ನು ಸನ್ಮಾನಿಸಲಾಯಿತು. ಕುಂಭಾಭಿಷೇಕ ಸಮಿತಿ ವತಿಯಿಂದ ಶ್ರೀಗಳಿಗೆ ಅಭಿವಂದನಾ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಜೋಷಿ ಫೌಂಡೇಶನ್‌ನ ಅಬಸೆ ದಿನೇಶಕುಮಾರ್‌ ಎನ್‌. ಜೋಷಿ, ಹೊಸಗುಂದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸಿ.ಎಂ.ಎನ್‌. ಶಾಸ್ತ್ರಿ, ನ್ಯಾಯವಾದಿ ಅಶೋಕ ಭಟ್, ವಿಜಯ ಹೆಗಡೆ ಇನ್ನಿತರರಿದ್ದರು. ಮಹಾಬಲೇಶ್ವರ ಭಟ್ ಮತ್ತು ಸಂಗಡಿಗರು ವೇದಘೋಷ ಮಾಡಿದರು. ಪ್ರಜ್ಞಾಶ್ರೀ ಪ್ರಾರ್ಥಿಸಿದರು. ನ್ಯಾಯವಾದಿ ಕೆ. ದಿವಾಕರ್‌ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಅಶ್ವಿ‌ನಿಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಕೆ.ಆರ್‌. ಕೃಷ್ಣಯ್ಯ ಅಭಿನಂದನಾ ಪತ್ರ ವಾಚಿಸಿದರು. ಎನ್‌.ಜಿ. ವಿನಾಯಕ ಜೋಯ್ಸ ವಂದಿಸಿದರು. ಮ.ಸ.ನಂಜುಂಡಸ್ವಾಮಿ ನಿರೂಪಿಸಿದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.