![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ಯುಗಾದಿ ಸಂಭ್ರಮಕ್ಕೆ ಕೋವಿಡ್ 19 ಅಡ್ಡಿ
Team Udayavani, Mar 27, 2020, 3:33 PM IST
![tk-tdy-1](https://www.udayavani.com/wp-content/uploads/2020/03/tk-tdy-1-8-620x413.jpg)
ತುಮಕೂರು: ಕೋವಿಡ್ 19 ಭೀತಿಗೆ ದೇಶ ಲಾಕ್ಡೌನ್ ಆಗಿದ್ದರೂ ಗುರುವಾರ ಕಲ್ಪತರು ನಾಡಿನ ಜನರು ಯುಗಾದಿಯ ಹೊಸತಡಕಿಗೆ ಮಾಂಸ, ಮೀನು ಕೊಳ್ಳಲು ಮಟನ್ ಸ್ಟಾಲ್ ಮುಂದೆ ಸಾಲು ಕಟ್ಟಿ ನಿಂತಿದ್ದರು.
ಯುಗಾದಿ ಮೊದಲ ದಿನ ಸಿಹಿ ಊಟ ಮಾಡಿ ಮಾರನೇ ದಿನ ಕಾರದ ಊಟ ಮಾಡುವುದು ರೂಢಿ. ಆದರೆ ಈ ಬಾರಿ ಹಬ್ಬದ ಸೊಬಗನ್ನು ಕೊರೊನಾ ಹಾಳು ಮಾಡಿದೆ. ಬಂದ್ ವಾತಾವರಣದಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಈ ನಡುವೆಯೂ ಜನರು ವರ್ಷ ತಡಕಿಗೆ ಜಿಲ್ಲೆಯಲ್ಲಿ ಮಾಂಸಾಹಾರ ಸೇವಿಸುವವರು ಮಟನ್ ಸ್ಟಾಲ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಅಕೋಳಿ ಅಂಗಡಿಗಳು ಬಂದ್ ಆಗಿರುವುದರಿಂದ ಮಟನ್ ಮತ್ತು ಮೀನು ಖರೀದಿಗೆ ಮುಗಿ ಬಿದ್ದರು. ಮಟನ್ ಬೆಲೆ 700 ರೂ. ಇದ್ದರೂ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಅಂತರ ಕಾಪಾಡಿಕೊಂಡು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.
ವಾಹನ ಸಂಚಾರ: ಲಾಕ್ ಡೌನ್ ಆದೇಶ ಪಾಲಿಸದೇ ಜನರು ವಾಹನಗಳಲ್ಲಿ ಸಂಚರಿಸುತ್ತಿದದ್ದು ಕಂಡುಬಂತು. ನಗರದ ರಿಂಗ್ ರಸ್ತೆ, ಗುಬ್ಬಿ ಗೇಟ್, ಕುಣಿಗಲ್ ರಸ್ತೆ, ಬಿ.ಎಚ್.ರಸ್ತೆ ಜಾಸ್ ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ರಸ್ತೆಗಳಲ್ಲಿ ಕಾರು, ಬೈಕ್ಗಳ ಸಂಚಾರ ಯಥಾಸ್ಥಿತಿ ಇತ್ತು. ಕೆಲವು ಕಡೆ ಪೊಲೀಸರಿಂದ ಕೆಲವರಿಗೆ ಲಾಠಿ ರುಚಿ ತೋರಿಸಲಾಯಿತು. ನಗರದ ಕ್ಯಾತ್ಸಂದ್ರ ಟೋಲ್ನಲ್ಲಿ ಪೊಲೀಸ್ ಭದ್ರತೆ ಇದ್ದರೂ ಬೆಂಗಳೂರಿನಿಂದ ಕಾರುಗಳಲ್ಲಿ ಜನ ಬರುತ್ತಿದ್ದರು.
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shobha-Kharandlaje](https://www.udayavani.com/wp-content/uploads/2024/07/Shobha-Kharandlaje-150x90.jpg)
Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್ ಸರ್ಕಾರ: ಕೇಂದ್ರ ಸಚಿವೆ ಶೋಭಾ
![5-tumkur](https://www.udayavani.com/wp-content/uploads/2024/07/5-tumkur-150x90.jpg)
Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ
![4-koratagere](https://www.udayavani.com/wp-content/uploads/2024/07/4-koratagere-150x90.jpg)
Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.