ಯುಗಾದಿ ಸಂಭ್ರಮಕ್ಕೆ ಕೋವಿಡ್ 19 ಅಡ್ಡಿ
Team Udayavani, Mar 27, 2020, 3:33 PM IST
ತುಮಕೂರು: ಕೋವಿಡ್ 19 ಭೀತಿಗೆ ದೇಶ ಲಾಕ್ಡೌನ್ ಆಗಿದ್ದರೂ ಗುರುವಾರ ಕಲ್ಪತರು ನಾಡಿನ ಜನರು ಯುಗಾದಿಯ ಹೊಸತಡಕಿಗೆ ಮಾಂಸ, ಮೀನು ಕೊಳ್ಳಲು ಮಟನ್ ಸ್ಟಾಲ್ ಮುಂದೆ ಸಾಲು ಕಟ್ಟಿ ನಿಂತಿದ್ದರು.
ಯುಗಾದಿ ಮೊದಲ ದಿನ ಸಿಹಿ ಊಟ ಮಾಡಿ ಮಾರನೇ ದಿನ ಕಾರದ ಊಟ ಮಾಡುವುದು ರೂಢಿ. ಆದರೆ ಈ ಬಾರಿ ಹಬ್ಬದ ಸೊಬಗನ್ನು ಕೊರೊನಾ ಹಾಳು ಮಾಡಿದೆ. ಬಂದ್ ವಾತಾವರಣದಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಈ ನಡುವೆಯೂ ಜನರು ವರ್ಷ ತಡಕಿಗೆ ಜಿಲ್ಲೆಯಲ್ಲಿ ಮಾಂಸಾಹಾರ ಸೇವಿಸುವವರು ಮಟನ್ ಸ್ಟಾಲ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಅಕೋಳಿ ಅಂಗಡಿಗಳು ಬಂದ್ ಆಗಿರುವುದರಿಂದ ಮಟನ್ ಮತ್ತು ಮೀನು ಖರೀದಿಗೆ ಮುಗಿ ಬಿದ್ದರು. ಮಟನ್ ಬೆಲೆ 700 ರೂ. ಇದ್ದರೂ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಅಂತರ ಕಾಪಾಡಿಕೊಂಡು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.
ವಾಹನ ಸಂಚಾರ: ಲಾಕ್ ಡೌನ್ ಆದೇಶ ಪಾಲಿಸದೇ ಜನರು ವಾಹನಗಳಲ್ಲಿ ಸಂಚರಿಸುತ್ತಿದದ್ದು ಕಂಡುಬಂತು. ನಗರದ ರಿಂಗ್ ರಸ್ತೆ, ಗುಬ್ಬಿ ಗೇಟ್, ಕುಣಿಗಲ್ ರಸ್ತೆ, ಬಿ.ಎಚ್.ರಸ್ತೆ ಜಾಸ್ ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ರಸ್ತೆಗಳಲ್ಲಿ ಕಾರು, ಬೈಕ್ಗಳ ಸಂಚಾರ ಯಥಾಸ್ಥಿತಿ ಇತ್ತು. ಕೆಲವು ಕಡೆ ಪೊಲೀಸರಿಂದ ಕೆಲವರಿಗೆ ಲಾಠಿ ರುಚಿ ತೋರಿಸಲಾಯಿತು. ನಗರದ ಕ್ಯಾತ್ಸಂದ್ರ ಟೋಲ್ನಲ್ಲಿ ಪೊಲೀಸ್ ಭದ್ರತೆ ಇದ್ದರೂ ಬೆಂಗಳೂರಿನಿಂದ ಕಾರುಗಳಲ್ಲಿ ಜನ ಬರುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ