Kunigal; ಇಂಜಿನ್ನಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಜಾಗ್ವಾರ್ ಕಾರು
Team Udayavani, Nov 9, 2023, 11:25 PM IST
ಕುಣಿಗಲ್ : ಜಾಗ್ವಾರ್ ಕಾರಿನ ಎಂಜಿನ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಧಗಧಗನೆ ಹೊತ್ತಿ ಉರಿದಘಟನೆ ಕುಣಿಗಲ್ ಪಟ್ಟಣದ ನಕ್ಷತ್ರ ಪ್ಯಾಲೇಸ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಅದೃಷ್ಟವಷಾತ್ ಯಾರಿಗೂ ಗಾಯವಾಗಿಲ್ಲ. ಬೆಂಗಳೂರು ಯಲಹಂಕ ಮೂಲದ ರಾಜಕುಮಾರ್ ಅವರಿಗೆ ಸೇರಿದ ಜಾಗ್ವಾರ್ ಕಾರು ಬೆಂಕಿಗೆ ಅಹುತಿಯಾಗಿದೆ.
ಸಂಬಂಧಿಕರ ಮದುವೆಗೆಂದು ರಾಜಕುಮಾರ್ ಹಾಗೂ ಅವರ ಕುಟುಂಬ ಕಾರಿನಲ್ಲಿ ಬಂದಿದ್ದರು.ಕಾರನ್ನು ಪ್ಯಾಲೇಸ್ ಮುಂಭಾಗದಲ್ಲಿ ನಿಲ್ಲಿಸಿ ಧಾರಾ ಮುಹೂರ್ತಕ್ಕೆ ಹೋಗಿದ್ದರು. ಈ ವೇಳೆ ಕಾರಿನ ಇಂಜಿನ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇದಕ್ಕಿದಂತೆ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯ ಹೊಗೆ ಪ್ಯಾಲೇಸ್ ಸುತ್ತ ಅವರಿಸಿತ್ತು. ಮದುವೆಗೆ ಬಂದಿದ್ದ ಜನರು ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿ ಗಾಬರಿಗೊಂಡು ಕಲ್ಯಾಣ ಮಂಟಪದಿಂದ ಕೆಲವರು ಹೊರಗೋಡಿ ಬಂದರು. ಮತ್ತೆ ಕೆಲವರು ಕಲ್ಯಾಣ ಮಂಟಪದಲ್ಲೇ ಕುಳಿತು ಜ್ವಾಲೆಯನ್ನು ನೋಡಿ ಆತಂಕಗೊಂಡರು. ಪ್ಯಾಲೇಸ್ನ ಅಕ್ಕ ಪಕ್ಕದಲ್ಲಿ ಇದ್ದ ಅಂಗಡಿ ಮಾಲಕರು, ಕೆಎಸ್ಆರ್ಟಿಸಿ ಡಿಪೋ ಸಿಬಂದಿ ಡಿಪೋ ನಿಂದ ಹೊರ ಬಂದು ಬೆಂಕಿಯನ್ನು ನಂದಿಸಲು ನೀರು ಹಾಕಿದರು. ಆದರೆ ಇದ್ಯಾವುದು ಪ್ರಯೋಜನಕ್ಕೆ ಬಾರದ ಕಾರಣ ಅಗ್ನಿಶಾಮಕ ದಳಕ್ಕೆ ತಿಳಿಸಿದರು.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಶಾಮಕ ದಳ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಾರಿನ ಮೌಲ್ಯ ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ