ಜೋತಿಷಿ ಸಲಹೆ: ಕೆಲವೇ ಗಂಟೆಗಳಲ್ಲಿ ಗಿಳಿ ಮರಳಿ ಮನೆಗೆ
Team Udayavani, Jul 23, 2022, 11:43 PM IST
ತುಮಕೂರು: ಇಲ್ಲಿನ ಜಯನಗರದ ಅರ್ಜುನ್-ರಂಜಿತಾ ದಂಪತಿ ಸಾಕಿದ್ದ ಗಿಳಿ ಕಾಣೆಯಾಗಿದ್ದು, ಜೋತಿಷಿ ನೀಡಿದ ಸಲಹೆಯನ್ನು ಪಾಲಿಸಿದ ಕೆಲವೇ ಗಂಟೆಗಳಲ್ಲಿ ಅದು ಮಾಲಕನ ಕೈಸೇರಿದೆ.
ಗಿಳಿ ಜು. 16ರಂದು ಕಾಣೆಯಾ ಗಿದ್ದು, ಮಾಹಿತಿ ನೀಡಿದರೆ 50 ಸಾ.ರೂ. ಬಹುಮಾನ ನೀಡುವುದಾಗಿ ದಂಪತಿ ಪ್ರಚಾರ ಮಾಡಿದ್ದರೂ ಸಿಕ್ಕಿರಲಿಲ್ಲ. ಬಳಿಕ ಜೋತಿಷಿ ಸಲಹೆ ಯಂತೆ ಬಹು ಮಾನದ ಮೊತ್ತವನ್ನು 85 ಸಾ.ರೂ.ಗೆ ಏರಿಸಿದ್ದರು.
ಅದಾದ ಕೂಡಲೇ ಗಿಳಿ ಪತ್ತೆಯಾಗಿದೆ. ಅದು ಬಂಡೇಪಾಳ್ಯದ ಮನೆಯೊಂದರಲ್ಲಿ ಸುರಕ್ಷಿತವಾಗಿತ್ತು.