![court](https://www.udayavani.com/wp-content/uploads/2024/07/court-7-415x231.jpg)
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಧರಣಿ
Team Udayavani, Oct 10, 2020, 4:21 PM IST
![ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಧರಣಿ](https://www.udayavani.com/wp-content/uploads/2020/10/tk-tdy-1-7-620x372.jpg)
ಮಧುಗಿರಿ: ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿ ಹತ್ಯೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ತಾಲೂಕು ನಾಯಕ ಸಮಾಜದವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆನಡೆಸಿ ಉತ್ತರ ಪ್ರದೇಶ ಸರ್ಕಾರದ ದಲಿತ ವಿರೋಧಿನೀತಿ ಖಂಡಿಸಿ, ದಲಿತ ಸಮಾಜದ ಪ್ರತಿಭಾವಂತಹೆಣ್ಣುಮಗಳ ಹತ್ಯೆಗೆ ಸರ್ಕಾರ ಕೂಡಲೇ ನ್ಯಾಯಒದಗಿಸಬೇಕೆಂದು ಆಗ್ರಹಿಸಿದವು.
ಯೋಗಿ ವಿರುದ್ಧ ಆಕ್ರೋಶ: ನಂತರ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡು ಸೆ.14 ರಂದು ಯುಪಿಯಲ್ಲಿನಡೆದ ಅತ್ಯಾಚಾರ ಹಾಗೂ ಹತ್ಯೆಯುಅಮಾನವೀಯದಿಂದ ಕೂಡಿದೆ. ಇದುಮನುಕುಲವೇ ಮರುಕ ಪಡುವಂತ ಹೇಯಕೃತ್ಯವಾಗಿದೆ. ಮೃತ ಯುವತಿಯ ಶವ ಸಂಸ್ಕಾರಕ್ಕೂಇಲ್ಲಿನ ಯೋಗಿ ಸರ್ಕಾರ ಹೆತ್ತವರಿಗೆ ಅವಕಾಶನೀಡದೆ ಸುಟ್ಟುಹಾಕಲಾಗಿದ್ದು, ಸಂವಿಧಾನದತ್ತವಾದಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿ ಪೊಲೀಸರು ಸಹ ಸರ್ಕಾರದ ಕೈಗೊಂಬೆಯಾಗಿದ್ದು, ಮನುಷ್ಯತ್ವವಿಲ್ಲದೆ ನಡೆದುಕೊಂಡಿದ್ದಾರೆ. ಇಂತಹ ಪರಿಸ್ಥಿಯಲ್ಲೂ ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂಪ್ರಧಾನಿ ಮೋದಿ ಈ ಘಟನೆಯ ಬಗ್ಗೆ ತುಟಿ ಬಿಚ್ಚಿಲ್ಲ. ಇಂತವರಿಂದ ಮಹಿಳೆಯ ರಕ್ಷಣೆ ಹೇಗೆ ನಿರೀಕ್ಷಿಸಲು ಸಾಧ್ಯ ಎಂದುಕಿಡಿಕಾರಿದರು.
ಸರ್ಕಾರಕ್ಕೆ ನಾಚಿಕೆಯಾಗಬೇಕು: ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಶಂಕರನಾರಾಯಣ (ಬಾಬು) ಮಾತನಾಡಿ, ರಾಮ ಹುಟ್ಟಿದ ನೆಲದಲ್ಲಿ ರಾಮ ಹಾಗೂ ಗೋಮಾತೆಯ ಬಗ್ಗೆ ಮಾರುದ್ಧ ಭಾಷಣ ಮಾಡುವ ಬಿಜೆಪಿಗೆ ಈಹೆಣ್ಣುಮಗಳ ನೋವು ಅರ್ಥವಾಗುತ್ತಿಲ್ಲ.ಮಹಿಳೆಯೆಂದರೆ ಕೇವಲ ಮೇಲ್ವರ್ಗದ ಹೆಣ್ಣಿಗಷ್ಟೇ ಬೆಲೆ ಎಂಬಂತಾಗಿದೆ. ಅಹಿಂದ ವರ್ಗದ ಹೆಣ್ಣುಮಗಳ ಸಾವಿಗೆ ಕಿಂಚಿತ್ತೂ ಮರುಗದ ಈಸರ್ಕಾರಕ್ಕೆ ನಾಚಿಕೆಯಾಗಬೇಕು. ಮುಂದೆ ಇದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ನಾಯಕ ನೌಕರರ ಸಂಘದಅಧ್ಯಕ್ಷ ಡಿ.ಓ.ನಾಗರಾಜು ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ಮಹಿಳೆಗೆ ಸಮಾನ ಹಾಗೂ ಶ್ರೇಷ್ಠ ಸ್ಥಾನವನ್ನು ಭಾರತದ ಸಂವಿಧಾನ ನೀಡಿದೆ. ಇಂತಹ ದೇಶದಲ್ಲಿ ಹುಟ್ಟಿ ಪ್ರತಿಭಾವಂತೆಯಾದ ಸಮಾಜದ ಹೆಣ್ಣುಮಗಳ ಧಾರುಣ ಹತ್ಯೆ ಖಂಡನೀಯ.
ಸಹೋದರತೆ, ಸಹಭಾಳ್ವೆ ಹಾಗೂ ಸಮಾನತೆಗೆ ಧಕ್ಕೆ ತಂದಿರುವ ಅಲ್ಲಿನ ಸರ್ಕಾರ ಹಾಗೂ ವ್ಯವಸ್ಥೆಯ ವೈಫಲ್ಯವನ್ನು ಗಣನೆಗೆ ಪಡೆದುಕೊಂಡು ಸರ್ಕಾರಹಾಗೂ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕ್ಯಗೊಳ್ಳಬೇಕೆಂದು ಆಗ್ರಹಿಸಿದರು.
ತಾಲೂಕು ನಾಯಕ ಸಂಘದ ಗೌರವಾಧ್ಯಕ್ಷರಂಗಶಾಮಣ್ಣ, ಮಹಿಳಾ ಅಧ್ಯಕ್ಷೆ ಇಂದಿರಮ್ಮ, ಪುರಸಭೆ ಮಾಜಿ ಸದಸ್ಯರಾದ ಭಾಗ್ಯಮ್ಮ,ಕುಶಾಲವತಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಗರಣಿ ಗಿರೀಶ್, ವಕೀಲ ಪಾಂಡುರಂಗಯ್ಯ, ನೌಕರ ವರ್ಗದ ಕೃಷ್ಣಮೂರ್ತಿ, ಚಂದನ್, ಕುಮಾರ್,ಶಿವಪ್ಪ, ಗಂದಾಧರ ರೆಡ್ಡಿಹಳ್ಳಿ, ಚಿರಂಜೀವಿ,ನಾಗರಾಜು, ಮಂಜುಳಾ, ಲೀಲಾ, ಜಯಮ್ಮ, ಶಾಂತ, ಪಾರ್ವತಮ್ಮ ಹಾಗೂ ದಲಿತ ಪರಸಂಘಟನೆಯ ನೂರಾರು ಸದಸ್ಯರು ಇದ್ದರು.
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shobha-Kharandlaje](https://www.udayavani.com/wp-content/uploads/2024/07/Shobha-Kharandlaje-150x90.jpg)
Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್ ಸರ್ಕಾರ: ಕೇಂದ್ರ ಸಚಿವೆ ಶೋಭಾ
![5-tumkur](https://www.udayavani.com/wp-content/uploads/2024/07/5-tumkur-150x90.jpg)
Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ
![4-koratagere](https://www.udayavani.com/wp-content/uploads/2024/07/4-koratagere-150x90.jpg)
Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.