![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಪುರಸಭೆ: ಗದ್ದುಗೆಗೇರಲು ಕಾಂಗ್ರೆಸ್ ಸಿದ್ಧತೆ
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ
Team Udayavani, Oct 10, 2020, 4:28 PM IST
![ಪುರಸಭೆ: ಗದ್ದುಗೆಗೇರಲು ಕಾಂಗ್ರೆಸ್ ಸಿದ್ಧತೆ](https://www.udayavani.com/wp-content/uploads/2020/10/tk-tdy-2-3-620x372.jpg)
ಕುಣಿಗಲ್: ಸ್ಥಳೀಯ ಸಂಸ್ಥೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು ಕುಣಿಗಲ್ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಗದ್ದುಗೆಗಾಗಿ ಕಾಂಗ್ರೆಸ್ನಲ್ಲಿ ತೆರೆಮೆರೆ ಕಸರತ್ತು ಆರಂಭವಾಗಿದೆ.
ರಾಜ್ಯ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಿ ಆದೇಶ ಹೊರ ಬೀಳುತ್ತಿದಂತೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ನಲ್ಲೇ ಒಳಗೊಳಗೆ ಪೈಪೋಟಿನಡೆದಿದೆ. ಕಳೆದ ಅವಧಿಯಲ್ಲಿ ಪುರುಷರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ಆದರೆ ಈ ಬಾರಿ ಅಧ್ಯಕ್ಷ ಸ್ಥಾನಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಮಹಿಳಾಅಥವಾ ಪುರುಷ ಯಾರು ಬೇಕಾದರೂ ಅಧ್ಯಕ್ಷರಾಗಬಹುದಾಗಿದೆ.
ಕಾಂಗ್ರೆಸ್ಗೆ 17 ಸದಸ್ಯರ ಬಲ: 23 ಸ್ಥಾನ ಹೊಂದಿರುವ ಪುರಸಭೆಯಲ್ಲಿ ಅಧಿಕಾರ ಗದ್ದುಗೆಏರಲು 12 ಸ್ಥಾನ ಬೇಕು, 14 ಸ್ಥಾನ ಹೊಂದಿರು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ, ಅಲ್ಲದೆ ಎರಡನೇ ವಾರ್ಡ್ನಿಂದ ಗೆಲುವು ಸಾಧಿಸಿರುವಜೆಡಿಎಸ್ನ ಸದಸ್ಯೆ ಪತಿ ಮಲ್ಯನಾಗರಾಜು ಇತ್ತೀಚೆಗೆಕಾಂಗ್ರೆಸ್ನತ್ತಾ ವಾಲಿದ್ದು ಹಾಗೂ ಕಾಂಗ್ರೆಸ್ ಟಿಕೆಟ್ ನಿಂದ ವಂಚಿತರಾಗಿ ಪಕ್ಷೇತರಾಗಿ ಗೆದ್ದಿರುವ ಇಬ್ಬರು ಸದಸ್ಯರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದು ಒಟ್ಟು 17 ಸದಸ್ಯರ ಬಲ ಕಾಂಗ್ರೆಸ್ಗೆ ಇದೆ.
ಅಧ್ಯಕ್ಷ ಸ್ಥಾನಕ್ಕೆ ರೇಸ್ನಲ್ಲಿ ನಾಲ್ವರು: ಹೀಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ನಾಲ್ಕು ಮಂದಿ ಸದಸ್ಯರುರೇಸ್ನಲ್ಲಿ ಇದ್ದಾರೆ, ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಮೂರು ಮಂದಿಸದಸ್ಯರಿದ್ದಾರೆ. ಅಧಿಕಾರಕ್ಕಾಗಿ ಸದಸ್ಯರು ಒಳಗೊಳಗೆಪಕ್ಷದ ವರಿಷ್ಠರ ದುಂಬ್ಟಾಲು ಬೀಳಲು ಆರಂಭಿಸಿದ್ದಾರೆ.
ತೀವ್ರ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ಕು ಬಾರಿ ಸತತವಾಗಿ ಗೆಲುವು ಸಾಧಿಸಿರುವ 11ನೇ ವಾರ್ಡ್ನ ರಂಗಸ್ವಾಮಿ, ಹ್ಯಾಟ್ರಿಕ್ ಗೆಲುವು ಸಾಧಿಸಿರುವಮೂರನೇ ವಾರ್ಡ್ನ ರಾಮು, 7ನೇ ವಾರ್ಡ್ಸಮೀವುಲ್ಲಾ ಹಾಗೂ ಎರಡನೇ ಬಾರಿ ಗೆಲುವುಸಾಧಿಸಿರುವ 6 ವಾರ್ಡ್ನ ಬಿ.ಎನ್.ಅರುಣ್ಕುಮಾರ್, ಇದೇ ಪ್ರಥಮ ಬಾರಿ ಪುರಸಭೆ ಪ್ರವೇಶಿಸಿರುವ 21ನೇ ವಾರ್ಡ್ ನಾಗೇಂದ್ರ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಬಾರಿ ಗೆಲುವು ಸಾಧಿಸಿರುವ 13ನೇ ವಾರ್ಡ್ ಕೆ.ಆರ್.ಜಯಲಕ್ಷ್ಮೀ,ಮೊದಲಬಾರಿಜಯಗಳಿಸಿರುವ 17ನೇ ವಾರ್ಡ್ ಕೆ.ಎಂ.ಅಸ್ಮಾ, 8ನೇ ವಾರ್ಡ್ ಎಚ್. ಮಂಜುಳಾ ಮಂಚೂಣಿಯಲ್ಲಿ ಇದ್ದಾರೆ.
ಮೇ 29, 2019 ರಂದು ಪುರಸಭೆಗೆ ಚುನಾವಣೆ ನಡೆದಿದ್ದು ಒಂದೂವರೆ ವರ್ಷ ಅಧಿಕಾರವಿಲ್ಲದೆಸದಸ್ಯರು ಕಂಗಾಲಾಗಿದ್ದರು, ಆದರೆ ಈಗ ಅಧ್ಯಕ್ಷ, ಉಪಾಧ್ಯಕ್ಷಚುನಾವಣೆಪ್ರಕಟಗೊಂಡಿದುಚುನಾವಣೆ ದಿನಾಂಕಕ್ಕಾಗಿ ಸದಸ್ಯರು ಕಾಯುತ್ತಿದ್ದಾರೆ. ಕಾಂಗ್ರೆಸ್ನಎಲ್ಲಾ ಸದಸ್ಯರ ಚಿತ್ತ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ಅವರತ್ತ ನೆಟ್ಟಿದೆ.
ರಂಗಸ್ವಾಮಿ ಅಧ್ಯಕ್ಷ ? : 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ನಾಲ್ಕು ಬಾರಿ ಗೆಲವು ಸಾಧಿಸಿರುವ ರಂಗಸ್ವಾಮಿ ಈ ಬಾರಿ ಅಧ್ಯಕ್ಷರಾಗುವ ಸಾಧ್ಯತೆಕಂಡುಬರುತ್ತಿದ್ದು, ಇದಕ್ಕೆ ರಾಮು, ಸಮೀವುಲ್ಲಾಅಡ್ಡಗಾಲಾಗಿದ್ದಾರೆ. ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ಅವರುಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಮತ್ತೂಬ್ಬ ಅಧ್ಯಕ್ಷ ಆಕಾಂಕ್ಷಿ ಬಿ.ಎನ್.ಅರುಣ್ ಕುಮಾರ್ ತಿಳಿಸಿದ್ದಾರೆ.
–ಕೆ.ಎನ್.ಲೋಕೇಶ್
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shobha-Kharandlaje](https://www.udayavani.com/wp-content/uploads/2024/07/Shobha-Kharandlaje-150x90.jpg)
Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್ ಸರ್ಕಾರ: ಕೇಂದ್ರ ಸಚಿವೆ ಶೋಭಾ
![5-tumkur](https://www.udayavani.com/wp-content/uploads/2024/07/5-tumkur-150x90.jpg)
Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ
![4-koratagere](https://www.udayavani.com/wp-content/uploads/2024/07/4-koratagere-150x90.jpg)
Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.