ಸರ್ಕಾರಿ ಗೋಮಾಳದಲ್ಲಿ ಮನೆ, ರಸ್ತೆ ನಿರ್ಮಾಣ ಖಂಡಿಸಿ ಗ್ರಾಮಸ್ಥರಿಂದ ತಹಶೀಲ್ದಾರ್ಗೆ ಮನವಿ
Team Udayavani, Jun 25, 2022, 2:12 PM IST
ಕುಣಿಗಲ್ : ಬಲಾಡ್ಯರು ಅಕ್ರಮವಾಗಿ ಸರ್ಕಾರಿ ಗೋಮಾಳ ಜಾಗದಲ್ಲಿ ಮನೆ, ನಿವೇಶನ ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ತಡೆದು ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಕೆಂಬಾರೆಪಾಳ್ಯ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕಸಬಾ ಹೋಬಳಿ ಕಿತ್ನಾಮಂಗಲ ಪಂಚಾಯ್ತಿ ವ್ಯಾಪ್ತಿಯ ಕೆಂಬಾರೆಪಾಳ್ಯ ಗ್ರಾಮ ಸರ್ವೆ ನಂ 44 ಸರ್ಕಾರಿ ಗೋಮಾಳ ಜಾಗದಲ್ಲಿ ಕೆಲ ಬಲಾಡ್ಯ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ಮನೆ, ನಿವೇಶನ ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವುದು ಕಾನೂನಿಗೆ ವಿರುದ್ದವಾಗಿದೆ ಕೂಡಲೇ ಇದನ್ನು ತಡೆದು ಸರ್ಕಾರದ ಜಮೀನನ್ನು ಉಳಿಸುವಂತೆ ಗ್ರಾಮದ ಮುಖಂಡರಾದ ಬೋರೇಗೌಡ, ರವಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಹಬಲೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ಬೋರೇಗೌಡ ಮಾತನಾಡಿ ಕಸಬಾ ಹೋಬಳಿ ಕೆಂಬಾರೆಪಾಳ್ಯ ಗ್ರಾಮದ ಸರ್ವೆ ನಂ 44 ರಲ್ಲಿ 1 ಎಕರೆ 50 ಗುಂಟೆ ಸರ್ಕಾರಿ ಗೋಮಾಳ ವಿದ್ದು, ಇದನ್ನು ಕೆಲ ಬಲಾಡ್ಯರು ಹಣದ ಆಸೆಗಾಗಿ ನಿವೇಶನ, ಮನೆ, ರಸ್ತೆ ನಿರ್ಮಾಣ ಮಾಡಿಕೊಂಡು ಲಪಟಾಯಿಸಲು ಯತ್ನಿಸುತ್ತಿದ್ದಾರೆ, ಈ ಸಂಬಂಧ ಈಗಾಗಲೇ ತಾಲೂಕು ಸರ್ವೆಯರ್ ಸ್ಥಳ ಪರಿಶೀಲನೆ ಮಾಡಿ ಈ ಜಾಗ ಪಹಣಿಯಲ್ಲಿ ಸರ್ಕಾರಿ ಗೋಮಾಳ ಎಂದು ದಾಖಲಾಗಿರುತ್ತದೆ, ಈ ಜಾಗದಲ್ಲಿ ಯಾವುದೇ ಮನೆ ಹಾಗೂ ನಿವೇಶನ, ರಸ್ತೆ ನಿರ್ಮಾಣ ಮಾಡಬಾರದೆಂದು ವರದಿ ಸಲ್ಲಿಸಿದರು, ಇದನ್ನು ಲೆಕ್ಕಿಸದೇ ಬಲಾಡ್ಯ ವ್ಯಕ್ತಿಗಳು ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ದಿನವನ್ನು ನೋಡಿಕೊಂಡು ಇಂದು ಕಾಮಗಾರಿ ಪ್ರಾರಂಭಿಸಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಹಾಗಾಗಿ ಸೂಕ್ತ ಕಾನೂನು ಕ್ರಮಕೈಗೊಂಡು ಸರ್ಕಾರಿ ಜಾಗವನ್ನು ಉಳಿಸುವಂತೆ ಅವರು ಒತ್ತಾಯಿಸಿದರು,
ಸ್ಪಂದನೆ : ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹಬಲೇಶ್ವರ ಈ ಸಂಬಂಧ ತಕ್ಷಣ ಸ್ಥಳ ಪರಿಶೀಲನೆ ನೆಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ರಾಜಸ್ವ ನಿರೀಕ್ಷಕರಿಗೆ ದೂರವಾಣಿ ಮೂಲಕ ಸೂಚಿಸುವು ಮೂಲಕ ಗ್ರಾಮಸ್ಥರ ಮನವಿಗೆ ಸಕರಾತ್ಮಕವಾಗಿ ಸ್ಪಂಧಿಸಿದರು.ಈ ವೇಳೆಯಲ್ಲಿ ಗ್ರಾಮಸ್ಥರಾದ ಪುಟ್ಟರಾಜು, ಬೋರಯ್ಯ, ನಿಂಗಯ್ಯ, ಶರತ್, ಶಿವಕುಮಾರ್, ಕುಮಾರ್ ಇದ್ದರು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ