ಕ್ರೋಢ ಬೈಲೂರು: ಸಾರ್ವಜನಿಕ ಸಾರಿಗೆ ಸಂಪರ್ಕವೇ ಇಲ್ಲದ ಊರು
Team Udayavani, Jan 19, 2019, 12:30 AM IST
ಕನಿಷ್ಠ ಪಕ್ಷ ಕುಂದಾಪುರ- ಸಿದ್ದಾಪುರಕ್ಕೆ ಸಂಚರಿಸುವ ಸರಕಾರಿ ಬಸ್ಗಳನ್ನಾದರೂ ಈ ಮಾರ್ಗದಲ್ಲಿ ಸಂಚರಿಸುವಂತೆ ಸಂಬಂಧ ಪಟ್ಟವರು ಗಮನ ಹರಿಸುವುದು ಅಗತ್ಯ.
ಅಂಪಾರು: ಕ್ರೋಢಬೈಲೂರಿಗೆ ಈ ಹಿಂದೆ 4-5 ಬಸ್ಗಳು ಹತ್ತಾರು ಬಾರಿ ಬರುತ್ತಿದ್ದವು. ಆದರೆ ಈಗ ಇಲ್ಲಿಗೆ ಬರುತ್ತಿದ್ದ ಬಸ್ಗಳ ಸಂಚಾರ ಸ್ಥಗಿತಗೊಂಡಿದ್ದು, ಬೆಳಗ್ಗೆ ಒಂದು ಸರಕಾರಿ ಬಸ್ ಬಿಟ್ಟರೆ ಬೇರೆ ಯಾವ ಬಸ್ ಕೂಡ ಈಗ ಬರುತ್ತಿಲ್ಲ. ಸಾರ್ವಜನಿಕ ಸಾರಿಗೆ ಸಂಪರ್ಕವೇ ಇಲ್ಲದ ಊರಿನಂತಾಗಿದೆ ಕ್ರೋಢಬೈಲೂರು.
ಕ್ರೋಢಬೈಲೂರಿಗೆ ಮೊದಲು ಬೆಳಗ್ಗೆ 8.30ಕ್ಕೆ, ಅನಂತರ ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ, ಸಂಜೆ 4ಕ್ಕೆ ಹಾಗೂ ಸಂಜೆ 5.30ಕ್ಕೆ ಹೀಗೆ ಸರಕಾರಿ ಹಾಗೂ ಖಾಸಗಿಯವರ ಬೇರೆ ಬೇರೆ ಬಸ್ಗಳು ಬರುತ್ತಿದ್ದವು. ಆದರೆ ಈಗ ಇದ್ಯಾವ ಬಸ್ಗಳು ಇಲ್ಲಿಗೆ ಬರುತ್ತಿಲ್ಲ. ಇದನ್ನೇ ನಂಬಿದ್ದ ಶಾಲಾ- ಕಾಲೇಜು ಮಕ್ಕಳು, ಕಚೇರಿ, ಇನ್ನಿತರ ಕಡೆಗಳಿಗೆ ಕೆಲಸಕ್ಕೆ ಹೋಗುವವರ ಸ್ಥಿತಿ ಹೇಳಲಾಗದಂತಾಗಿದೆ. ಉಡುಪಿ – ಕೊಲ್ಲೂರಿಗೆ ಹೋಗುವ ಖಾಸಗಿ ಬಸ್ವೊಂದು ಇಲ್ಲಿಗೆ ಬಂದು ಹೋಗುತ್ತಿತ್ತು. ಆದರೆ 15 ದಿನಗಳ ಹಿಂದೆ ಅದು ಕೂಡ ಸಂಚಾರ ನಿಲ್ಲಿಸಿದೆ. ಇದರಿಂದ ಈ ಊರಿಗೆ ಬಸ್ ಸಂಪರ್ಕವೇ ಇಲ್ಲದಂತಾಗಿದೆ.
500 ಕ್ಕೂ ಅಧಿಕ ವಿದ್ಯಾರ್ಥಿಗಳು
ಕ್ರೋಢಬೈಲೂರಿನಿಂದ ಶಂಕರ ನಾರಾಯಣ ಹಾಗೂ ಇನ್ನಿತರ ಕಡೆಗಳಲ್ಲಿ ವ್ಯಾಸಂಗ ಮಾಡುವ ಸುಮಾರು 500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಅವರೀಗ ಬಸ್ ಸೌಕರ್ಯವಿಲ್ಲದೆ ಯಾರ್ಯಾರದೋ ವಾಹನಗಳನ್ನು ಅಡ್ಡಹಾಕಿ ಸಂಚರಿಸುವಂತಾಗಿದೆ.
8 ಕಿ.ಮೀ. ಅಂತರ
ಕ್ರೋಢಬೈಲೂರಿಗೆ ಹತ್ತಿರದ ದೊಡ್ಡ ಪೇಟೆಗಳೆಂದರೆ ಅಂಪಾರು ಹಾಗೂ ಶಂಕರನಾರಾಯಣ. ಇವರೆಡೂ ಪೇಟೆಗಳು ಕೂಡ ಕ್ರೋಢಬೈಲೂರಿನಿಂದ ಸಮಾನ ಅಂತರ ಅಂದರೆ ತಲಾ 8 ಕಿ.ಮೀ. ದೂರದಲ್ಲಿವೆ. ಇಲ್ಲಿನ ಜನ ಎಲ್ಲದಕ್ಕೂ ಅಂಪಾರು ಅಥವಾ ಶಂಕರನಾರಾಯಣವನ್ನೇ ಅವಲಂಬಿಸಿದ್ದು, ಈ ಮಾರ್ಗವಾಗಿ ಅಗತ್ಯವಾಗಿ ಬಸ್ ವ್ಯವಸ್ಥೆ ಕಲ್ಪಿಸಲಿ ಎನ್ನುವುದು ಇಲ್ಲಿನ ಜನರ ಒಕ್ಕೊರಲ ಮನವಿಯಾಗಿದೆ.
ಸರಕಾರಿ ಬಸ್ ಆದರೂ ಬರಲಿ
ಕುಂದಾಪುರದಿಂದ ಸಿದ್ದಾಪುರಕ್ಕೆ ಹೋಗುವ ಬಸ್ಗಳಲ್ಲಿ ಕೆಲವಾದರೂ ಅಂಪಾರು ಆಗಿ ಬಂದು ಕ್ರೋಢಬೈಲೂರು ಮೂಲಕವಾಗಿ ಶಂಕರನಾರಾಯಣ ಮಾರ್ಗವಾಗಿ ಅಲ್ಲಿಂದ ಸಿದ್ದಾಪುರಕ್ಕೆ ಸಂಚರಿಸಲಿ. ಕನಿಷ್ಠ ಕುಂದಾಪುರ- ಸಿದ್ದಾಪುರಕ್ಕೆ ಸಂಚರಿಸುವ ಸರಕಾರಿ ಬಸ್ಗಳನ್ನಾದರೂ ಈ ಮಾರ್ಗದಲ್ಲಿ ಸಂಚರಿಸುವಂತೆ ಸಂಬಂಧಪಟ್ಟವರು ಗಮನವಹಿಸಲಿ. ನಮಗೆ ಅಂಪಾರು ಅಥವಾ ಶಂಕರನಾರಾಯಣಕ್ಕೆ ಹೋಗಬೇಕಾದರೆ ಬಸ್ ಬೇಕೇ ಬೇಕು. ಇಲ್ಲದಿದ್ದರೆ 8-10 ಕಿ.ಮೀ. ರಿಕ್ಷಾ ಅಥವಾ ಇನ್ನಿತರ ವಾಹನಗಳಲ್ಲಿ ಹೆಚ್ಚು ದುಡ್ಡು ತೆತ್ತು ತೆರಳಬೇಕಾಗಿದೆ.
– ದೇವಪ್ಪ ಶೆಟ್ಟಿ, ಸ್ಥಳೀಯರು, ಕ್ರೋಢಬೈಲೂರು
ಬಸ್ ಸಂಪರ್ಕಕ್ಕೆ ಪ್ರಯತ್ನ
ಪರ್ಮಿಟ್ ತೆಗೆದುಕೊಂಡವರು ಹಾಗೇ ಏಕಾಏಕಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವಂತಿಲ್ಲ. ಅಲ್ಲಿನವರು ನನಗೆ ಆ ಬಸ್ಸಿನ ಸಂಖ್ಯೆ ಅಥವಾ ಇನ್ನಿತರ ದಾಖಲೆಗಳನ್ನು ನೀಡಿ ದೂರು ಸಲ್ಲಿಸಲಿ. ಅವರಿಗೆ ನೋಟಿಸ್ ನೀಡಿ, ಕ್ರೋಢಬೈಲೂರಿಗೆ ಮತ್ತೆ ಬಸ್ ವ್ಯವಸ್ಥೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ರಮೇಶ್ ವರ್ಣೇಕರ್, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ