ಕಡಲಿಗೆ ಹಾರಿದ ಓರ್ವ ನಾಪತ್ತೆ
ಎರಡು ಮೀನುಗಾರಿಕಾ ದೋಣಿಗಳ ಸಂಪರ್ಕ ಕಡಿತ
Team Udayavani, Oct 29, 2019, 5:00 AM IST
ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ತಟರಕ್ಷಣಾ ಪಡೆ ರಕ್ಷಿಸಿತು
ಉಡುಪಿ/ಮಲ್ಪೆ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎರಡು ದೋಣಿಗಳು ಗೋವಾ ಗಡಿಯ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಯಾಯಿತು. ಆ ಸಂರ್ದರ್ಭ ಓರ್ವ ಭೀತಿಯಿಂದ ಕಡಲಿಗೆ ಧುಮುಕಿದ್ದು, ನಾಪತ್ತೆಯಾಗಿದ್ದಾನೆ.
ಮಲ್ಪೆಯಿಂದ ತೆರಳಿದ್ದ ಗಂಗಾ ಗಣೇಶ್ ಮತ್ತು ಸ್ವರ್ಣಜ್ಯೋತಿ ಬೋಟುಗಳು ಅಪಾಯಕ್ಕೆ ಸಿಲುದವು. ಎರಡೂ ದೋಣಿಗಳಲ್ಲಿ ತಲಾ 6ರಂತೆ 12 ಮಂದಿ ಮೀನುಗಾರರು ಇದ್ದರು. ಮಾಹಿತಿ ಪಡೆದ ತಟ ರಕ್ಷಣಾ ಪಡೆಯ ಸಿಬಂದಿ ನೆರವಿಗೆ ಧಾವಿಸಿ ಮೀನುಗಾರರನ್ನು ರಕ್ಷಿಸಿದರು.
ಇದನ್ನು ರಾಜ್ಯದ ಮುಖ್ಯಕಾರ್ಯ ದರ್ಶಿಗಳು ಖಚಿತಪಡಿಸಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಾಪತ್ತೆಯಾ ಮೀನುಗಾರ ಮೂಲತಃ ಒಡಿಶಾದವರು ಎಂದು ತಿಳಿದುಬಂದಿದೆ. ಅ. 27ರಂದು ಗಂಗಾಗಣೇಶ್ ದೋಣಿಯನ್ನು 39 ನಾಟಿಕಲ್ ಮೈಲ್ ದೂರದ ತೊಲ್ಕೇಶ್ವರ್ ಸಮೀಪ ಪತ್ತೆ ಹಚ್ಚಲಾಯಿತು. ಮಹಾರಾಷ್ಟ್ರ ಗಡಿಯ 25 ನಾಟಿಕಲ್ ಮೈಲ್ ದೂರದ ಮುರುದ್ ಜಂಜಿರ ಬಳಿ ಸುವರ್ಣ ಜ್ಯೋತಿ ದೋಣಿಯನ್ನು ಪತ್ತೆ ಹಚ್ಚಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ