Fraud Case ಆನ್ಲೈನ್ ವಂಚನೆಗೊಳಗಾಗಿ ಹಣ ಕಳೆದುಕೊಂಡ ವ್ಯಕ್ತಿ
Team Udayavani, Sep 29, 2023, 9:13 PM IST
ಕಾರ್ಕಳ: ಆನ್ಲೈನ್ ವಂಚನೆಗೆ ಒಳಗಾಗಿ ವ್ಯಕ್ತಿಯೊಬ್ಬರು ಹಣವನ್ನು ಕಳೆದುಕೊಂಡ ಘಟನೆ ಕಾರ್ಕಳದ ಕಸಬಾ ಗ್ರಾಮದಲ್ಲಿ ನಡೆದಿದೆ.
ಕಸಬಾದ ಚೋಲ್ಪಾಡಿ ನಿವಾಸಿ ಹರೀಶ್ ರಾಘವ ಹೆಗ್ಡೆ (66) ಆನ್ಲೈನ್ ವಂಚನೆಗೆ ಒಳಗಾಗಿ 38 ಸಾವಿರ ರೂ. ಕಳೆದುಕೊಂಡವರು.
ತಮ್ಮ ಗೂಗಲ್ ಪೇ ಆ್ಯಪ್ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರು ಸೆ. 4ರಂದು ಇಂಟರ್ನೆಟ್ ಮೂಲಕ ಹುಡುಕಿ ಗೂಗಲ್ ಪೇಗೆ ದೂರು ಸಲ್ಲಿದ್ದರು. ಅಂದೇ ರಾತ್ರಿ ಓರ್ವ ವ್ಯಕ್ತಿ 9330944212 ಮತ್ತು 9064210959 ಎಂಬ ಎರಡು ನಂಬರ್ಗಳಿಂದ ಹರೀಶ್ ರಾಘವ ಹೆಗ್ಡೆಯವರಿಗೆ ಕರೆಮಾಡಿ ಗೂಗಲ್ ಪೇಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡು ಗೂಗಲ್ ಪೇ ಸಮಸ್ಯೆಯ ಬಗ್ಗೆ ವಿಚಾರಿಸಿ, ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡು ಒಟಿಪಿ ಕೇಳಿ ಪಡೆದುಕೊಂಡು ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಿದ್ದಾನೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.