50 ಕೋಟಿ ವರ್ಷಗಳ ಬಳಿಕ ಭಾರತ ರಶ್ಯಾ ಬಳಿಗೆ


Team Udayavani, Jan 18, 2019, 12:30 AM IST

balla.jpg

ಉಡುಪಿ: ಸುಮಾರು 50 ಕೋಟಿ ವರ್ಷಗಳ ಹಿಂದೆ ದಕ್ಷಿಣ ಧ್ರುವ ಭಾರತವಿದ್ದಲ್ಲಿ ಇತ್ತು. ಮುಂದೆ 50 ಕೋಟಿ ವರ್ಷಗಳ ಬಳಿಕ ಭಾರತವು ರಶ್ಯಾ ಬಳಿ ಇರಬಹುದು ಎಂದು ಮಣಿಪಾಲ ಎಂಐಟಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ| ಕೆ. ಬಾಲಕೃಷ್ಣ ಹೇಳಿದರು.

ಟಿ.ಎ. ಪೈ ಹಿಂದಿ ಭವನದಲ್ಲಿ ಅ.ಭಾ. ಸಾಹಿತ್ಯ ಪರಿಷತ್‌ ಉಡುಪಿ ಘಟಕದ ಆಯೋಜನೆಯಲ್ಲಿ ಗುರುವಾರ “ಹೆಪ್ಪುಗಟ್ಟಿದ ಅಂಟಾರ್ಟಿಕಾ- ಪ್ರವಾಸಿಗನ ಕಣ್ಣಲ್ಲಿ’ ಕುರಿತು ಉಪನ್ಯಾಸ ನೀಡಿದ ಅವರು, ಭೂಮಿ ತಿರುಗುತ್ತ ಇರುವುದರಿಂದ ಇದು ಸಾಧ್ಯ. ದಕ್ಷಿಣ ಧ್ರುವದಲ್ಲಿ ಕಲ್ಲಿದ್ದಲು ಸಿಗುತ್ತಿದೆ. ಒಂದು ಕಾಲದಲ್ಲಿ ದಟ್ಟ ಅರಣ್ಯ ಪ್ರದೇಶ ನೆಲಸಮವಾಗಿ ಕಲ್ಲಿದ್ದಲಾಗಿ ಮಾರ್ಪಟ್ಟಿರಬಹುದು. ಭಾರತ ಮತ್ತು ದಕ್ಷಿಣ ಧ್ರುವದಲ್ಲಿರುವ ಕಲ್ಲುಗಳಲ್ಲಿ ಸಾಮ್ಯವಿದೆ. ದಕ್ಷಿಣ ಧ್ರುವ ಭಾರತಕ್ಕಿಂತ ನಾಲ್ಕಾರು ಪಟ್ಟು ದೊಡ್ಡದಿದೆ ಎಂದರು.

ದಕ್ಷಿಣ ಧ್ರುವ ಯಾರ ಸ್ವತ್ತೂ ಅಲ್ಲ
ದಕ್ಷಿಣ ಧ್ರುವ ಈಗ ಯಾರ ಸ್ವತ್ತೂ ಅಲ್ಲ. 1995ರ ವರೆಗೆ ಬ್ರಿಟನ್‌, ಅರ್ಜಂಟೀನ ಮೊದಲಾದ ದೇಶಗಳು ತಮ್ಮದೆಂದು ಗಡಿ ಗುರುತು ಹಾಕಿಕೊಂಡಿದ್ದವು. ಅಂಟಾರ್ಟಿಕಾ ಒಪ್ಪಂದ ಏರ್ಪಟ್ಟ ಬಳಿಕ ಇದು ಸಂಶೋಧನೆ ಮತ್ತು ಶಾಂತಿಗೆ ಮಾತ್ರ ಮೀಸಲಾಯಿತು. ಸುಮಾರು 55 ದೇಶಗಳಿಗೆ ವಸಾಹತು ಸ್ಥಾಪಿಸಲು ಅವಕಾಶ ಕೊಡಲಾಯಿತು ಎಂದು ಹೇಳಿದರು.

ಕರಗುವುದು ಕಂಡಿಲ್ಲ
ವಿಜ್ಞಾನಿಗಳು ದಕ್ಷಿಣಧ್ರುವ ಕರಗುತ್ತಿದೆ ಎಂದು ಹೇಳುತ್ತಾರಾದರೂ ನಾನು ಹೋದಾಗ ಕಂಡುಬರಲಿಲ್ಲ. ಇದರ ಬಗೆಗೆ ಸಂಶೋಧನೆ ನಡೆಯುತ್ತಿದೆ. ಇಲ್ಲಿ ಮಂಜುಗಡ್ಡೆ ಇಲ್ಲ, ಇದು ಶಿಲಾಪದರ. ಸಮುದ್ರದ ನೀರಿನ ಮೇಲೆ ಸುಮಾರು ಎರಡು ಕಿ.ಮೀ. ಮಂಜುಗಡ್ಡೆಯ ಸ್ಲಾéಬ್‌ ಇದೆ ಎಂದರು.

24 ಗಂಟೆ ಹಗಲು, 24 ಗಂಟೆ ರಾತ್ರಿ
ಗೋವಾದಲ್ಲಿರುವ ನೇಶನಲ್‌ ಸೆಂಟರ್‌ ಫಾರ್‌ ಪೋಲಾರ್‌ ಆ್ಯಂಡ್‌ ಓಶಿಯನ್‌ ರಿಸರ್ಚ್‌ ಮೂಲಕ ತಾನು ಅಧ್ಯಯನ ನಡೆಸಲು ಹೋಗಿದ್ದು, ಅಲ್ಲಿಗೆ ತೆರಳಲು ಕಾನೂನಿನ ಪಾಲನೆ, ದೈಹಿಕ ಪರೀಕ್ಷೆ ಹೀಗೆ ಅನೇಕ ತೊಡಕುಗಳಿವೆ. ನವೆಂಬರ್‌ನಿಂದ ಜನವರಿ ವರೆಗೆ ದಿನಪೂರ್ತಿ ಬೆಳಕು, ಫೆಬ್ರವರಿಯಲ್ಲಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಕತ್ತಲು ಕವಿದು ಜೂನ್‌, ಜುಲೈ ವರೆಗೆ ದಿನಪೂರ್ತಿ ಕತ್ತಲು ಇರುತ್ತದೆ. ಗಾಳಿ ವಿಪರೀತವಿದ್ದರೂ ಪವನ ಶಕ್ತಿ ಪ್ರಯೋಗ ಪ್ರಯೋಜನವಾಗಿಲ್ಲ. ಸೌರಶಕ್ತಿಯೂ ಆಗಲಿಲ್ಲ. ಡೀಸೆಲ್‌ ಜನರೇಟರ್‌ ಮೂಲಕ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ ಎಂದವರು ವಿವರಿಸಿದರು.

ತಂತ್ರಜ್ಞಾನ, ಮಾಲಿನ್ಯದಲ್ಲಿ ಚೀನ ಮುಂದೆ
ದಕ್ಷಿಣ ಧ್ರುವದಲ್ಲಿ ಅಧ್ಯಯನಕ್ಕಾಗಿ ಇಸ್ರೋದ ಕೇಂದ್ರವಿದೆ. ಚೀನ ಕೇಂದ್ರದಲ್ಲಿ ದೂರವಾಣಿ ಟವರ್‌ ಹಾಕಿದ್ದು ಅವರಿಗೆ ದೂರವಾಣಿ ಕರೆ ಸುಲಭವಿದೆ. ಅವರು ತಂತ್ರಜ್ಞಾನದಲ್ಲಿ ಮುಂದಿರುವಂತೆ ಅಲ್ಲಿ ತ್ಯಾಜ್ಯ ವಿಸರ್ಜನೆ ಮೂಲಕ ಮಾಲಿನ್ಯದಲ್ಲಿಯೂ ಮುಂದಿದ್ದಾರೆ ಎಂದರು.

ಒಬ್ಬರಿಗೆ 1.5 ಕೋ.ರೂ. ಖರ್ಚು
ದಕ್ಷಿಣ ಧ್ರುವಕ್ಕೆ ಹೋಗಲು ಒಬ್ಬರಿಗೆ 1.5 ಕೋ.ರೂ. ಖರ್ಚು ಬರುತ್ತದೆ. ಇದನ್ನು ಸರಕಾರ ಭರಿಸುತ್ತದೆ. 38 ವರ್ಷಗಳಲ್ಲಿ 1,500 ಜನರು ಹೋಗಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.

ಮಲಮೂತ್ರ ನಿರ್ವಹಣೆಯೂ ಖರ್ಚು
ಅಲ್ಲಿ ನೀರನ್ನು ಸಮುದ್ರದಿಂದ ತೆಗೆದು ಶುದ್ಧೀಕರಿಸಿ ಕುಡಿಯಬೇಕು. ವಾರಕ್ಕೆ ಒಂದು ಬಾರಿ ಮಾತ್ರ ಸ್ನಾನ ಮಾಡಬಹುದು. ಡ್ರೈ ಟಾಯ್ಲೆಟ್‌ ಬಳಸಬೇಕು. ಮೂತ್ರವನ್ನು ಪರಿವರ್ತಿಸಿ ಸಮುದ್ರಕ್ಕೆ ಬಿಡಲಾಗುತ್ತದೆ. ಮಲವನ್ನು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ಮೂಲಕ ಗೋವಾಕ್ಕೆ ತಂದು ಹಾಕಲಾಗುತ್ತದೆ. ಮಲಮೂತ್ರ ಹೊರತುಪಡಿಸಿ ಎಲ್ಲ ತ್ಯಾಜ್ಯಗಳನ್ನು ಶುಲ್ಕ ವಿಧಿಸಿ ದಕ್ಷಿಣ ಆಫ್ರಿಕಾ ತರಿಸಿಕೊಳ್ಳುತ್ತದೆ ಎಂದರು. ಶ್ರೀಹರಿ ಸ್ವಾಗತಿಸಿ ಜಗದೀಶ ಪೈ ಪ್ರಸ್ತಾವನೆಗೈದರು.

ಟಾಪ್ ನ್ಯೂಸ್

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.