ಎಪಿಎಂಸಿ ಆರ್ಥಿಕ ಪ್ರಗತಿ 3 ಕೋಟಿ ರೂ. ಗುರಿ ನಿರೀಕ್ಷೆ

ಜನಾಕರ್ಷಣೆಯ ಕೇಂದ್ರ ಗ್ರಾಮೀಣ ಸಂತೆ ಮಾರುಕಟ್ಟೆ

Team Udayavani, Feb 2, 2020, 5:04 AM IST

SANTHE11

ಉಡುಪಿ: ರೈತರ ಆರ್ಥಿಕ ಚೈತನ್ಯದ ಮೂಲವಾಗಿವೆ ಸಂತೆ ಮಾರುಕಟ್ಟೆಗಳು. ಉಡುಪಿ ತಾಲೂಕು ಎಪಿಎಂಸಿ ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ವಹಿವಾಟು ನಡೆಸಿ ಉತ್ತಮ ಸಾಧನೆ ಮಾಡಿದೆ.

ಮಾರ್ಚ್‌ ಅಂತ್ಯಕ್ಕೆ 3 ಕೋ. ರೂ. ಗುರಿ ತಲುಪುವ ನಿರೀಕ್ಷೆಯನ್ನು ಅದು ಹೊಂದಿದೆ. ಜತೆಗೆ ನಬಾರ್ಡ್‌ನ 1.ಕೋ.ರೂ ಹಾಗೂ ಸ್ವಂತ ನಿಧಿ ಬಳಸಿ ಉಡುಪಿಯಲ್ಲಿ ಸುಸಜ್ಜಿತ ಉಪಮಾರುಕಟ್ಟೆ ಹೊಂದುವ ಉದ್ದೇಶವನ್ನು ಎಪಿಎಂಸಿ ಹೊಂದಿದೆ. 2015ರ ವರೆಗೆ ಮಾರುಕಟ್ಟೆ ಶುಲ್ಕದಿಂದ ಸಂಗ್ರಹವಾಗುವ ವಾರ್ಷಿಕ ಆದಾಯವು ಒಂದು ಕೋ.ರೂ. ಗಡಿ ದಾಟುತ್ತಿರಲಿಲ್ಲ. ಅನಂತರದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ. ವಾರದ ಸಂತೆಯ ವ್ಯಾಪಾರಸ್ಥರಿಗೆ ಹಳೆಯ ಶುಲ್ಕವನ್ನೇ ವಿಧಿಸಲಾಗುತಿತ್ತು. ಇದನ್ನು ಪರಿಷ್ಕರಿಸಿ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಅಂಗಡಿಗಳ ಪರವಾನಿಗೆ, ನವೀಕರಣ, ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳ ಪರವಾನಿಗೆಯಿಂದ ಆದಾಯ ಹೆಚ್ಚಳಗೊಂಡಿದೆ. 30ರಷ್ಟು ಗೋದಾಮುಗಳಿದ್ದು, ಇನ್ನಷ್ಟು ಗೋದಾಮುಗಳು ನಿರ್ಮಾಣವಾಗಬೇಕಿದೆ.

ಸುಸ್ಥಿರ ಅಭಿವೃದ್ಧಿ
ಸಂತೆಗಳು ಗ್ರಾಮೀಣ ಸುಸ್ಥಿರ ಅಭಿವೃದ್ಧಿಯ ಆಶಯವನ್ನು ಹೊಂದಿವೆ. ಸ್ಥಳೀಯವಾಗಿಯೇ ಮಾರಾಟ ಮಾಡುವ ಮತ್ತು ಸ್ಥಳೀಯವಾಗಿ ಉದ್ಯೋಗ ದೊರಕಿಸುವ, ಕರಕುಶಲ ವಸ್ತುಗಳು, ತಾಜಾ ತರಕಾರಿಗಳು, ಕೃಷಿ ಉಪಕರಣಗಳ ಮಾರಾಟಕ್ಕೆ ವೇದಿಕೆ ಒದಗಿಸುತ್ತವೆ.

ಉಡುಪಿ ತಾಲೂಕು ಕೇಂದ್ರ ಸೇರಿದಂತೆ 10 ಕಡೆಗಳಲ್ಲಿ ಗ್ರಾಮೀಣ ಸಂತೆ ನಡೆಯುತ್ತಿದೆ. ರೈತರು ತಾವು ಬೆಳೆದುದನ್ನು ಊರ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಹೊರಗಿನಿಂದಲೂ ತರಕಾರಿ ಮಾರಾಟ ಮಾಡಲು ಜನ ಬರುತ್ತಾರೆ. ತಾಲೂಕಿನ ವಿವಿಧೆಡೆಗಳಲ್ಲಿ ಮೂಲ ಸೌಕರ್ಯ ಕೊರತೆಗಳ ನಡುವೆಯೂ ಉಪ ಸಂತೆ ಮಾರುಕಟ್ಟೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.

ಸಂತೆ ನಡೆಯುವ ವಾರ , ಸ್ಥಳ
ಆದಿಉಡುಪಿ-ಬುಧವಾರ
ಬ್ರಹ್ಮಾವರ-ಸೋಮವಾರ
ಬಾಕೂìರು-ಶುಕ್ರವಾರ
ಹಿರಿಯಡ್ಕ-ಸೋಮವಾರ
ಶಿರ್ವ- ಗುರುವಾರ
ಕಾಪು-ಶುಕ್ರವಾರ
ಕಲ್ಯಾಣಪುರ-ರವಿವಾರ
ಕಟಪಾಡಿ-ಶನಿವಾರ
ಪಡುಬಿದ್ರಿ-ಮಂಗಳವಾರ
ಉಡುಪಿ ಮಾರುಕಟ್ಟೆ ಪ್ರಾಂಗಣ- 2ನೇ ಶನಿವಾರ ಹಾಗೂ ರವಿವಾರ ಹೊರತು ಪಡಿಸಿ ಎಲ್ಲ ದಿನಗಳು

ಮಾರುಕಟ್ಟೆ ಮಾಹಿತಿ
ಮಾರುಕಟ್ಟೆಗಳು ಒಟ್ಟು -10
ಮಾರುಕಟ್ಟೆ ಪ್ರಾಂಗಣ ಉಡುಪಿ-1
ಗ್ರಾಮೀಣ ಸಂತೆ ಮಾರುಕಟ್ಟೆ-9
2018-19ರಲ್ಲಿ ವಹಿವಾಟು -2.37,76,616 ಕೋ.ರೂ.
2017-18ರಲ್ಲಿ ವಹಿವಾಟು- 1,79,04,204.ಕೋ.ರೂ.
ವಾರ್ಷಿಕ ಹೆಚ್ಚಳ- 58,72,412 ಲಕ್ಷ ರೂ.

ಊರಿನ ತರಕಾರಿಗೆ
ಬೇಡಿಕೆಯಿದೆ
ಮನೆಯಲ್ಲಿ ಕೆಲವು ತರಕಾರಿಗಳನ್ನು ಬೆಳೆಸುತ್ತೇನೆ. ಅದನ್ನು ಸಂತೆಗೆ ತಂದು ಮಾರುತ್ತೇನೆ. ಸಂತೆಗೆ ಬಂದವರು ಊರಿನ ತರಕಾರಿಯೇ ಅಂತ ಕೇಳಿ ಪಡೆದುಕೊಳ್ಳುತ್ತಾರೆ. ಊರಿನ ತರಕಾರಿಗೆ ಬೇಡಿಕೆಯಿದೆ
-ಮಾಲತಿ ಶಿರ್ವ,
ಊರ ತರಕಾರಿ ವ್ಯಾಪಾರಸ್ಥೆ.

ಮೂಲಸೌಕರ್ಯಕ್ಕೆ ಆದ್ಯತೆ
ಕೃಷಿ ಬೆಳೆಗಾರ ವ್ಯಾಪಾರಸ್ಥರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯತೆ. ಅದನ್ನು ಒದಗಿಸುವ ಕಡೆ ಗಮನ ನೀಡುತ್ತೇವೆ. ವಾರ್ಷಿಕವಾಗಿ ನಿರ್ದಿಷ್ಟ ಗುರಿ ಹೊಂದುವ ಕುರಿತು ಮುಖ್ಯ ಕಚೇರಿಯಿಂದ ನಿರ್ದೇಶನ ಕೂಡ ಇರುತ್ತದೆ. ಅದರಂತೆ ಈ ಬಾರಿ ತಾಲೂಕಿನಲ್ಲಿ 3 ಕೋ. ಗುರಿ ಹೊಂದಿದ್ದೇವೆ.
-ಗಾಯತ್ರಿ ಎಂ., ಕಾರ್ಯದರ್ಶಿ. ಎಪಿಎಂಸಿ

ಕೋಲ್ಡ್‌ ಸ್ಟೋರೇಜ್‌ ಅಗತ್ಯ
ರೈತರು ಇರುವುದು ಗ್ರಾಮೀಣ ಕಡೆಗಳಲ್ಲಿ. ಅಲ್ಲಿ ಅವರಿಗೆ ಸೂಕ್ತ ಅವಕಾಶ ದೊರೆಯಬೇಕು. ಹೆಚ್ಚುವರಿ ಗೋದಾಮು ಹೊಂದುವುದು, ಕೋಲ್ಡ್‌ ಸ್ಟೋರೇಜ್‌ ತೆರೆಯುವ ಕುರಿತು ಚಿಂತನೆಗಳು ನಮ್ಮ ಮುಂದಿವೆ.
ಕೆ.ಶ್ಯಾಮ್‌ಪ್ರಸಾದ್‌, ಅಧ್ಯಕ್ಷ, ಎಪಿಎಂಸಿ ಉಡುಪಿ.

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.