Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
Team Udayavani, Apr 30, 2024, 9:44 PM IST
ಮಲ್ಪೆ: ಬೀಚ್ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿ ಬಾಲಕನನ್ನು ಇಲ್ಲಿನ ಜೀವ ರಕ್ಷಕರು ರಕ್ಷಣೆ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆದಿದೆ.
ಚಿಕ್ಕಬಳ್ಳಾಪುರದ ಶ್ರೇಯಸ್ (12)ನನ್ನು ರಕ್ಷಿಸಲಾಗಿದ್ದು, ಆತ ತನ್ನ ಕುಟುಂಬದ ಸದಸ್ಯರೊಂದಿಗೆ ಬೀಚ್ಗೆ ಬಂದಿದ್ದ. ಇಲ್ಲಿನ ಜೀವರಕ್ಷಕರ ಕಣ್ಣು ತಪ್ಪಿಸಿ ಈಜಲು ಮುಂದಾಗಿದ್ದ ಈತ ಸಮುದ್ರದಲೆಗೆ ಸಿಲುಕಿ ಕೊಚ್ಚಿ ಹೋಗಿದ್ದ ಎನ್ನಲಾಗಿದೆ. ತತ್ಕ್ಷಣ ನೀರಿಗೆ ಧುಮುಕಿ ಈಜುತ್ತಾ ಧಾವಿಸಿ ಬಂದ ಜೀವರಕ್ಷಕರು ಬಾಲಕನನ್ನು ರಕ್ಷಿಸಿ ಉಪಚರಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಡಲು ಅಬ್ಬರ:
ಮಂಗಳವಾರ ಕಡಲ ಅಬ್ಬರದಿಂದಾಗಿ ನೀರಿನ ಒತ್ತಡವು ಜಾಸ್ತಿಯಾಗಿತು. ಬೆಳಗ್ಗೆ ಯಾವುದೇ ಜಲಸಾಹಸ ಕ್ರೀಡೆಗಳು ನಡೆದಿಲ್ಲ. ಜೀವ ರಕ್ಷಕರು ತೀವ್ರ ನಿಗಾ ವಹಿಸುತ್ತಿದ್ದು ಯಾರನ್ನು ಕಡಲಿಗಿಳಿಯಲು ಬಿಡುತ್ತಿರಲಿಲ್ಲ. ಈ ಮಧ್ಯೆ ಬಾಲಕ ಜೀವರಕ್ಷಕರ ಕಣ್ಣುತಪ್ಪಿಸಿ ಈಜಲು ಮುಂದಾಗಿದ್ದಾನೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು
Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ