ಒಣಗುತ್ತಿರುವ ಅಡಿಕೆ ಹಿಂಗಾರ: ಕಂಗಾಲಾದ ಕೃಷಿಕ
Team Udayavani, May 27, 2019, 1:48 PM IST
ಕಾರ್ಕಳ: ತಾಲೂಕಿನಲ್ಲಿ ಅಡಿಕೆ ಪ್ರಧಾನ ಕೃಷಿಗಳಲ್ಲೊಂದು. ಇದೀಗ ಬಿಸಿಲಿನ ಬೇಗೆಗೆ ಅಡಕೆ ಹಿಂಗಾರ ಒಣಗುತ್ತಿರುವುದು ಅಡಿಕೆ ಕೃಷಿಕರಲ್ಲಿ ಆತಂಕವುಂಟು ಮಾಡಿದೆ. ನೀರಿನ ಬರ ಒಂದೆಡೆಯಾದರೆ, ಅತಿಯಾದ ತಾಪ ಮಾನದಿಂದಾಗಿ ಅಡಿಕೆ ಹಿಂಗಾರ ಒಣ ಗುತ್ತಿರುವುದು ಕೃಷಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಅಡಿಕೆ ಕೃಷಿಗೆ ಕೊಳೆ ರೋಗ ಬಾ ಸಿತ್ತು. ಕಾರ್ಕಳದಲ್ಲಿ ಒಟ್ಟು 3480 ಹೆಕ್ಟೇರ್ನಲ್ಲಿ ಅಡಿಕೆ ಕೃಷಿಯಿದ್ದು ವರ್ಷಕ್ಕೊಂದು ಸಮಸ್ಯೆ ಅಡಕೆ ಕೃಷಿಯನ್ನು ಬಾಧಿಸುತ್ತಿದೆ.
ಪೆಂಟಾಟೋಮಿಡ್ ಹುಳದ ಬಾಧೆ ಯಿಂದಲೂ ಕಾಯಿ ಅಡಿಕೆ ಬೀಳುವ ಅಪಾಯವೂ ಇದೆ ಎನ್ನಲಾಗಿದೆ. ಇನ್ನು ಮಳೆಗಾಲ ಬಂತೆಂದರೆ ಬೋಡೋì ಸಿಂಪಡಣೆ ಮಾಡಲಾಗುತ್ತಿದೆ. ಆದರೆ, ಎಡೆಬಿಡದೇ ಮಳೆ ಸುರಿಯುವುದು, ಮಳೆ ಕಡಿಮೆಯಾದಾಗ ಸಿಂಪಡಣೆಗೆ ಪರಿಣತರು ಸಿಗದಿರುವುದು ಕೃಷಿಕರನ್ನು ಹೈರಾಣಗುಸುತ್ತಿದೆ. ಸೂಕ್ತ ಕಾಲಕ್ಕೆ ಬೋಡೋ ಸಿಂಪಡಣೆ ಮಾಡಲು ಸಾಧ್ಯ ವಾಗದೇ ಹೋದಲ್ಲಿ ಭಾರಿ ನಷ್ಟವನ್ನೇ ಅನುಭವಿಸುವಂತಾಗಲಿದೆ.
ಹಾನಿ ತಡೆ ಸಾಧ್ಯ
ಅತಿಯಾದ ತಾಪಮಾನದಿಂದ ಅಡಿಕೆ ಹಿಂಗಾರ ಒಣ ಗುವುದುಂಟು. ಕೆಲವೊಮ್ಮೆ ಪೆಂಟಾಟೋಮಿಡ್ ಹುಳವೂ ಹಿಂಗಾರವನ್ನು ಬಾಸುತ್ತದೆ. ಹುಳ ಬಾಧೆಯಾದಲ್ಲಿ ಹಿಂಗಾರದಲ್ಲಿ ಅದರ ಕಡಿತ ಗೋಚರಿಸಲಿದೆ. 2 ಮಿ.ಲೀ. ಡಿಮೆಥೊಯೇಟ್ಅನ್ನು 1 ಲೀ. ನೀರಿಗೆ ಬೆರೆಸಿ, ಹುಳ ಬಾಧೆ ಕಂಡುಬಂದ ಗಿಡ ಮತ್ತು ಅದರ ಸುತ್ತಮುತ್ತಲಿನ ಗಿಡಕ್ಕೆ ಸಿಂಪಡಿಸಿದಲ್ಲಿ ಹಾನಿ ತಡೆಯಬಹುದು.
-ಶ್ರೀನಿವಾಸ್, ಸಹಾಯಕ ತೋಟಗಾರಿಕಾ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ