ಕೊಡಗು ನೆರೆ ಸಂತ್ರಸ್ತ ಕುಟುಂಬಕ್ಕೆ ಸಂಜೀವಿನಿಯಾದ ‘ಗೋನಿಧಿ’ ಪ್ರದರ್ಶನ
Team Udayavani, Oct 23, 2018, 10:02 PM IST
ಉಡುಪಿ: ಮಣಿಪಾಲ ಮತ್ತು ಕುಂದಾಪುರಗಳಲ್ಲಿ ಕಲಾಸಕ್ತರಿಗೆ ಚಿತ್ರಕಲಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ‘ತ್ರಿವರ್ಣ’ ಕಲಾ ತರಗತಿ’ಯ ವಿದ್ಯಾರ್ಥಿಗಳು ಇತ್ತೀಚೆಗೆ ಮಣಿಪಾಲದ ಆರ್.ಎಸ್.ಬಿ. ಸಭಾಭವನದಲ್ಲಿ ‘ಗೋ ನಿಧಿ’ ಎಂಬ ಚಿತ್ರ ಕಲಾ ಪ್ರದರ್ಶನವನ್ನು ಆಯೋಜಿಸಿ ಆ ಮೂಲಕ ಸಂಗ್ರಹಿಸಿದ ಮೊತ್ತವನ್ನು ಕೊಡಗು ನೆರೆ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ನಮ್ಮ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದಿರುವ ಹಾಗೂ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿರುವ ಗೋವಿನ ಮಹತ್ವವನ್ನು ಸಾರುವ ಸುಮಾರು 30 ವೈವಿಧ್ಯಮಯ ಕಲಾಕೃತಿಗಳನ್ನು ವಿವಿಧ ಕಲಾ ಪ್ರಾಕಾರಗಳಲ್ಲಿ ಈ ಕಲಾಶಾಲೆಯ ಮಕ್ಕಳೇ ರಚಿಸಿದ್ದರು. ಈ ಕಲಾಕೃತಿಗಳಿನ್ನು ಮಾರಿ ಸಂಗ್ರವಾದ ಹಣ ಮತ್ತು ವಿವಿಧ ದಾನಿಗಳ ಉದಾರ ನೆರವಿನಿಂದ ಸಂಚಯನಗೊಂಡ ಸುಮಾರು 50 ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ಕೊಡಗು ನೆರೆ ಸಂದರ್ಭದಲ್ಲಿ ನಿರಾಶ್ರಿತರಾದ ಶ್ರೀಮತಿ ಅನಿತಾ ರಜೋರಿಯಾ ಮತ್ತು ವಾಜ್ಹಿ ಡಿ’ಸೋಜಾ ದಂಪತಿಗೆ ಹಸ್ತಾಂತರಿಸಲಾಯಿತು. ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀ ನರಸಿಂಹ ಆಚಾರ್ ದಾನಿಗಳ ಪರವಾಗಿ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ಸುಬ್ರಹ್ಮಣ್ಯ ಪ್ರಭು, ಅಲಪಾಠಿ ವಿಠಲೇಶ್ವರ, ಸವಿತಾ ನಾಯಕ್, ಮಂಜುಳಾ ಎಸ್., ಭಾವನಾ, ವರಲಕ್ಷ್ಮೀ ಅಲಪಾಟಿ, ಕಲಾ ಶಿಕ್ಷಕಿ ಪವಿತ್ರಾ ಸಿ., ಕಲಾವಿದ ಮತ್ತು ಕಲಾಶಾಲೆಯ ಮುಖ್ಯಸ್ಥರಾಗಿರುವ ಹರೀಶ್ ಸಾಗಾ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ