ಕೇಳಿದ್ದು ಹಳತಾದರೂ ಕೊಟ್ಟದ್ದು ಹೊಸತು!
Team Udayavani, Apr 29, 2017, 2:53 PM IST
ಉಡುಪಿ: ಹಳೆ ಬಟ್ಟೆ, ಮಕ್ಕಳ ಆಟಿಕೆಗಳನ್ನು ಎಸೆಯದೆ, ಸುಟ್ಟು ಪರಿಸರ ಮಾಲಿನ್ಯ ಮಾಡದೆ ಅಗತ್ಯವುಳ್ಳವರಿಗೆ ನೀಡಿ ಎಂಬ ಧ್ಯೇಯವಾಕ್ಯದಡಿ ಸೇವಾ ಕಾರ್ಯಮಾಡುವ ಕಾರ್ಕಳದ ಸುನಿಲ್ ಅವರ ಸುದ್ದಿಯನ್ನು “ಉದಯವಾಣಿ’ ಶುಕ್ರವಾರ ಪ್ರಕಟಿಸಿತ್ತು. ಆದರೆ ಕಾರ್ಕಳ ದರೆಗುಡ್ಡೆಯ ಅರ್ಚಕ ವೃತ್ತಿಯ ಗಜಾನನ ಭಟ್ ಅವರು ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳದೆ ಹೊಸ ನೂರು ಧೋತಿ, 20 ಸೀರೆಗಳನ್ನು ಸುನಿಲ್ ಅವರ ಪುಲ್ಕೇರಿಯ ಮನೆಗೇ ತಂದು ಕೊಟ್ಟರು. ಜನರ ಸ್ಪಂದನ ಹೇಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.
ಅದೇ ರೀತಿ ಆದಿಉಡುಪಿಯ ಸದಾಶಿವ ಆಚಾರ್ಯರು ಸುಮಾರು 15 ಅಂಗಿಗಳನ್ನು ಮನೆಗೆ ತಂದು ಕೊಟ್ಟರು. ಹತ್ತಾರು ದೂರವಾಣಿಗಳು ರಿಂಗಣಿಸಿ ತಮ್ಮ ಕೊಡುಗೆಗಳನ್ನು ಕೊಡುವುದಾಗಿ ಭರವಸೆ ನೀಡಿದವು. ಅಕ್ಷಯತದಿಗೆಯಂದೇ ತಂದು ಕೊಟ್ಟರಲ್ಲಾ ಎಂದು ಸುನಿಲ್ ಅವರು ಆನೆಕೆರೆಯ ಕಾರ್ಮಿಕರ ಕಾಲನಿ, ಕಾರ್ಕಳ ಕುದುರೆಮುಖ ರಸ್ತೆಯಿಂದ 2.5 ಕಿ.ಮೀ. ಒಳಗೆ ಇರುವ ಸೂರಾಲು ಕೊರಗರ ಕಾಲನಿಗೆ ತೆರಳಿ ಅವುಗಳನ್ನು ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ