Barkur ಕೊಲೆ ಪ್ರಕರಣ: ವಿವಿಧ ಆಯಾಮದಲ್ಲಿ ತನಿಖೆ
Team Udayavani, Mar 5, 2024, 12:29 AM IST
ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಬಾಳೆಹಿತ್ಲಿನ ಕೃಷ್ಣ (37) ಅವರ ಕೊಲೆ ಪ್ರಕರಣದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಅವರ ಹವ್ಯಾಸ, ಸಂಪರ್ಕ, ಚಟುವಟಿಕೆಗಳ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಕುರಿತು ಮೂರು ಪ್ರತ್ಯೇಕ ತಂಡ ಕಾರ್ಯಪ್ರವೃತ್ತವಾಗಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರನ್ನು ಶನಿವಾರ ರಾತ್ರಿ ಅವರ ಮನೆಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿದ್ದರು.